ಮುಖಂಡರಾದ ನಾರಾಯಣಪ್ಪ, ಕವೀಂದ್ರಬಾಬು, ಪೆದ್ದೂರು ವೆಂಕಟರಾಮ್, ನಗರಸಭೆ ಸದಸ್ಯ ಸೋಮಪ್ಪ ಮಾತನಾಡಿ, ಇಂದಿಗೂ ಗ್ರಾಮಗಳಲ್ಲಿ ಅಸ್ಪೃಶ್ಯತೆ ಆಚರಿಸಲಾಗುತ್ತಿದೆ. ಪರಿಶಿಷ್ಟರ ಸ್ಮಶಾನಗಳಿಗೆ ದಾರಿ ಇರುವುದಿಲ್ಲ, ಎಸ್ಸಿ ಕಾಲೊನಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಅದನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದರು.