ಶಿಳ್ಳೆಂಗೇರಿ ಗ್ರಾಮದ ದೊಡ್ಡ ಕೆರೆ ನೀರು ತೋಟಕ್ಕೆ ನುಗ್ಗಿ ಅಪಾರ ಪ್ರಮಾಣದ ಸೌತೆ, ರಾಗಿ, ಅವರೆ, ಬೆಳೆ ನಾಶವಾಗಿದೆ. ಭರತ್ ಎಂಬುವರ ನಾಲ್ಕು ಎಕರೆ ಸೌತೆಕಾಯಿ ಬೆಳೆ ನೀರುಪಾಲಾಗಿದೆ. ಸುಮಾರು ₹5 ಲಕ್ಷ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಜಿನುಗುತ್ತಿರುವ ಮಳೆಯಿಂದಾಗಿ ತರಕಾರಿ ಹಾಗೂ ಹೂವು ಜಮೀನಿನಲ್ಲಿಯೇ ಕೊಳೆಯುತ್ತಿವೆ. ಅಲ್ಲದೇ, ಟೊಮೆಟೊಗೆ ಅಂಗಮಾರಿ ಹಾಗೂ ನೂಜಿ ಸಮಸ್ಯೆ ಕಾಣಿಸಿಕೊಂಡಿದೆ.