<p><strong>ಮುಳಬಾಗಿಲು:</strong> ಗ್ರಾಮೀಣ ಪ್ರದೇಶದಲ್ಲಿ ಎದ್ದುಲ ಪಂಡುಗ(ಎತ್ತುಗಳ ಹಬ್ಬ) ಎಂದು ಕರೆಯಲ್ಪಡುವ ಸಂಕ್ರಾಂತಿಯು ಸುಗ್ಗಿ ಹಬ್ಬ. ಸಾಂಪ್ರದಾಯಿಕ ಕೃಷಿ ಪದ್ಧತಿ ಮರೆಯಾದಂತೆ ದಿನದಿಂದ ದಿನಕ್ಕೆ ಇದು ಆಚರಣೆಯ ಮಹತ್ವ ಕಳೆದುಕೊಳ್ಳುತ್ತಿದೆ.</p>.<p>ಸುಮಾರು ಮೂವತೈದು ವರ್ಷಗಳ ಹಿಂದಿನ ಮಾತು. ಮುಳಬಾಗಿಲು ಪಟ್ಟಣವಾಗಿ ಬದಲಾಗುತ್ತಿದ್ದ ಸಮಯ. ಅಂದಿನ ಇಪ್ಪತ್ತು ಸಾವಿರ ಜನಸಂಖ್ಯೆಗೆ ಸುಮಾರು ಎರಡು ಸಾವಿರದ ಐನೂರು ಎತ್ತುಗಳಿದ್ದವು. ಈಗ ಪಟ್ಟಣದಲ್ಲಿ ಕೇವಲ ಐವತ್ತು ಎತ್ತುಗಳು ಮಾತ್ರ ಕಾಣಸಿಗುತ್ತವೆ.</p>.<p>ಹಾಲು ಉತ್ಪಾದನೆಗೆ ಸಾಕುವ ಹಸುಗಳನ್ನು ಸಂಕ್ರಾಂತಿ ಮೆರವಣಿಗೆಗೆ ಬಳಸುವುದು ಕಷ್ಟಕರ. ಇದು ಮೆರವಣಿಗೆಗೂ ಶೋಭೆ ತರುವುದಿಲ್ಲ. ಹಬ್ಬ ಆಚರಿಸಲೇ ಬೇಕು ಎನ್ನುವ ಕಾರಣದಿಂದಾಗಿ ಸಂಕ್ರಾಂತಿ ಹಬ್ಬದ ಆಚರಣೆ ಸಮಿತಿಯವರು ಎತ್ತುಗಳನ್ನು ಸಾಕಿರುವ ರೈತರನ್ನು ಕಾಡಿಬೇಡಿ ಮೆರವಣಿಗೆ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ.</p>.<p>ಹವಾಮಾನ ವೈಪರೀತ್ಯದಿಂದಾಗಿ ಸುಗ್ಗಿಯ ಕಾಲಮಾನ ಬದಲಾಗಿದೆ. ಟ್ರ್ಯಾಕ್ಟರ್, ಟಿಲ್ಲರ್ಗಳು ಬಂದ ಮೇಲೆ ಮನೆಗಳಲ್ಲಿ ಎತ್ತುಗಳನ್ನು ಸಾಕುವವರ ಸಂಖ್ಯೆಯೂ ಕಡಿಮೆಯಾಗಿದೆ. ನಗರಕ್ಕೆ ಸಮೀಪದ ಕಸಬಾ ಹೋಬಳಿಯ ದೊಡ್ಡಬಂಡಹಳ್ಳಿ ಹಾಲುಮತಸ್ಥ ಜನಾಂಗದವರೇ ಇರುವ ಗ್ರಾಮ. ಸುಮಾರು ಮೂವತ್ತು ವರ್ಷಗಳ ಹಿಂದೆ ಈ ಗ್ರಾಮದ ಎಲ್ಲಾ ಎಂಬತ್ತು ಮನೆಯಲ್ಲಿಯೂ ಒಂದೊಂದು ಜೋಡಿ ಎತ್ತುಗಳಿದ್ದವು. ಇನ್ನು ಕೆಲವು ದೊಡ್ಡ ರೈತರ ಮನೆಗಳಲ್ಲಿ ಎರಡು ಜೋಡಿ ಎತ್ತುಗಳು ಕಾಣಸಿಗುತ್ತಿದ್ದವು.</p>.<p>‘ಈಗ ಗ್ರಾಮದಲ್ಲಿ ಎರಡು ಅಥವಾ ಮೂರು ಜೊತೆ ಎತ್ತುಗಳನ್ನು ಕಾಣಬಹುದು. ಇದಕ್ಕೆ ಕಾರಣ ಬಹುತೇಕ ರೈತರು ಟ್ರ್ಯಾಕ್ಟರ್, ಟಿಲ್ಲರ್ಗಳ ಮೊರೆ ಹೋಗಿ ಉಳುಮೆ ಮಾಡುತ್ತಿದ್ದಾರೆ’ ಎನ್ನುತ್ತಾರೆ ದೊಡ್ಡ ಬಂಡಹಳ್ಳಿಯ ಹೊಸಪ್ಪನವರ ನಾಗರಾಜ್.</p>.<p>ಎತ್ತುಗಳನ್ನು ಸಾಕಲು ರೈತರು ಮುಂದಾಗದಿರಲು ಮುಖ್ಯ ಕಾರಣ ಹೆಚ್ಚಿದ ಎತ್ತಿನ ಬೆಲೆ. ಸಾಕಾಣಿಕೆ ವೆಚ್ಚದೊಂದಿಗೆ ರೋಗರುಜಿನ ಎದುರಾದಾಗ ಚಿಕಿತ್ಸೆಗೆ ಅಲೆದಾಡಬೇಕಾದ ಸ್ಥಿತಿ ಇದೆ. ಹಾಲು ಕರೆಯುವ ಮಿಶ್ರತಳಿ ಹಸುಗಳ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿದೆ. ಹಬ್ಬ ಮಾಡಬೇಕೆಂಬ ಕಾಟಾಚಾರಕ್ಕೆ ಈ ಹಸುಗಳಿಗೆ ಸಿಂಗರಿಸಲಾಗುತ್ತದೆ. ಗೊಬ್ಬಿಯಾಳುಗೆ ಬರುವ ಮಹಿಳೆಯರ ಸಂಖ್ಯೆ ಈಚಿನ ದಿನಗಳಲ್ಲಿ ಗಣನೀಯವಾಗಿ ಕಡಿಮೆಯಾಗಿದೆ.</p>.<p>ತಾಲ್ಲೂಕಿನ ಎನ್. ವಡ್ಡಹಳ್ಳಿ ಮುಂತಾದ ಕಡೆಗಳಿಂದ ನಗರಕ್ಕೆ ಕೆಲವು ಮಹಿಳೆಯರು ಗೊಬ್ಬಿಯಾಳು ಹಾಡುಗಳನ್ನು ಹಾಡಿಕೊಂಡು ಮನೆಗಳ ಬಳಿ ಬರುತ್ತಿದ್ದರು. ಹೀಗೆ ಬಂದವರಿಗೆ ಭತ್ತ ನೀಡುವ ಪದ್ಧತಿ ಇತ್ತು. ಇದು ಕ್ರಮೇಣ<br />ಮರೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಳಬಾಗಿಲು:</strong> ಗ್ರಾಮೀಣ ಪ್ರದೇಶದಲ್ಲಿ ಎದ್ದುಲ ಪಂಡುಗ(ಎತ್ತುಗಳ ಹಬ್ಬ) ಎಂದು ಕರೆಯಲ್ಪಡುವ ಸಂಕ್ರಾಂತಿಯು ಸುಗ್ಗಿ ಹಬ್ಬ. ಸಾಂಪ್ರದಾಯಿಕ ಕೃಷಿ ಪದ್ಧತಿ ಮರೆಯಾದಂತೆ ದಿನದಿಂದ ದಿನಕ್ಕೆ ಇದು ಆಚರಣೆಯ ಮಹತ್ವ ಕಳೆದುಕೊಳ್ಳುತ್ತಿದೆ.</p>.<p>ಸುಮಾರು ಮೂವತೈದು ವರ್ಷಗಳ ಹಿಂದಿನ ಮಾತು. ಮುಳಬಾಗಿಲು ಪಟ್ಟಣವಾಗಿ ಬದಲಾಗುತ್ತಿದ್ದ ಸಮಯ. ಅಂದಿನ ಇಪ್ಪತ್ತು ಸಾವಿರ ಜನಸಂಖ್ಯೆಗೆ ಸುಮಾರು ಎರಡು ಸಾವಿರದ ಐನೂರು ಎತ್ತುಗಳಿದ್ದವು. ಈಗ ಪಟ್ಟಣದಲ್ಲಿ ಕೇವಲ ಐವತ್ತು ಎತ್ತುಗಳು ಮಾತ್ರ ಕಾಣಸಿಗುತ್ತವೆ.</p>.<p>ಹಾಲು ಉತ್ಪಾದನೆಗೆ ಸಾಕುವ ಹಸುಗಳನ್ನು ಸಂಕ್ರಾಂತಿ ಮೆರವಣಿಗೆಗೆ ಬಳಸುವುದು ಕಷ್ಟಕರ. ಇದು ಮೆರವಣಿಗೆಗೂ ಶೋಭೆ ತರುವುದಿಲ್ಲ. ಹಬ್ಬ ಆಚರಿಸಲೇ ಬೇಕು ಎನ್ನುವ ಕಾರಣದಿಂದಾಗಿ ಸಂಕ್ರಾಂತಿ ಹಬ್ಬದ ಆಚರಣೆ ಸಮಿತಿಯವರು ಎತ್ತುಗಳನ್ನು ಸಾಕಿರುವ ರೈತರನ್ನು ಕಾಡಿಬೇಡಿ ಮೆರವಣಿಗೆ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ.</p>.<p>ಹವಾಮಾನ ವೈಪರೀತ್ಯದಿಂದಾಗಿ ಸುಗ್ಗಿಯ ಕಾಲಮಾನ ಬದಲಾಗಿದೆ. ಟ್ರ್ಯಾಕ್ಟರ್, ಟಿಲ್ಲರ್ಗಳು ಬಂದ ಮೇಲೆ ಮನೆಗಳಲ್ಲಿ ಎತ್ತುಗಳನ್ನು ಸಾಕುವವರ ಸಂಖ್ಯೆಯೂ ಕಡಿಮೆಯಾಗಿದೆ. ನಗರಕ್ಕೆ ಸಮೀಪದ ಕಸಬಾ ಹೋಬಳಿಯ ದೊಡ್ಡಬಂಡಹಳ್ಳಿ ಹಾಲುಮತಸ್ಥ ಜನಾಂಗದವರೇ ಇರುವ ಗ್ರಾಮ. ಸುಮಾರು ಮೂವತ್ತು ವರ್ಷಗಳ ಹಿಂದೆ ಈ ಗ್ರಾಮದ ಎಲ್ಲಾ ಎಂಬತ್ತು ಮನೆಯಲ್ಲಿಯೂ ಒಂದೊಂದು ಜೋಡಿ ಎತ್ತುಗಳಿದ್ದವು. ಇನ್ನು ಕೆಲವು ದೊಡ್ಡ ರೈತರ ಮನೆಗಳಲ್ಲಿ ಎರಡು ಜೋಡಿ ಎತ್ತುಗಳು ಕಾಣಸಿಗುತ್ತಿದ್ದವು.</p>.<p>‘ಈಗ ಗ್ರಾಮದಲ್ಲಿ ಎರಡು ಅಥವಾ ಮೂರು ಜೊತೆ ಎತ್ತುಗಳನ್ನು ಕಾಣಬಹುದು. ಇದಕ್ಕೆ ಕಾರಣ ಬಹುತೇಕ ರೈತರು ಟ್ರ್ಯಾಕ್ಟರ್, ಟಿಲ್ಲರ್ಗಳ ಮೊರೆ ಹೋಗಿ ಉಳುಮೆ ಮಾಡುತ್ತಿದ್ದಾರೆ’ ಎನ್ನುತ್ತಾರೆ ದೊಡ್ಡ ಬಂಡಹಳ್ಳಿಯ ಹೊಸಪ್ಪನವರ ನಾಗರಾಜ್.</p>.<p>ಎತ್ತುಗಳನ್ನು ಸಾಕಲು ರೈತರು ಮುಂದಾಗದಿರಲು ಮುಖ್ಯ ಕಾರಣ ಹೆಚ್ಚಿದ ಎತ್ತಿನ ಬೆಲೆ. ಸಾಕಾಣಿಕೆ ವೆಚ್ಚದೊಂದಿಗೆ ರೋಗರುಜಿನ ಎದುರಾದಾಗ ಚಿಕಿತ್ಸೆಗೆ ಅಲೆದಾಡಬೇಕಾದ ಸ್ಥಿತಿ ಇದೆ. ಹಾಲು ಕರೆಯುವ ಮಿಶ್ರತಳಿ ಹಸುಗಳ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿದೆ. ಹಬ್ಬ ಮಾಡಬೇಕೆಂಬ ಕಾಟಾಚಾರಕ್ಕೆ ಈ ಹಸುಗಳಿಗೆ ಸಿಂಗರಿಸಲಾಗುತ್ತದೆ. ಗೊಬ್ಬಿಯಾಳುಗೆ ಬರುವ ಮಹಿಳೆಯರ ಸಂಖ್ಯೆ ಈಚಿನ ದಿನಗಳಲ್ಲಿ ಗಣನೀಯವಾಗಿ ಕಡಿಮೆಯಾಗಿದೆ.</p>.<p>ತಾಲ್ಲೂಕಿನ ಎನ್. ವಡ್ಡಹಳ್ಳಿ ಮುಂತಾದ ಕಡೆಗಳಿಂದ ನಗರಕ್ಕೆ ಕೆಲವು ಮಹಿಳೆಯರು ಗೊಬ್ಬಿಯಾಳು ಹಾಡುಗಳನ್ನು ಹಾಡಿಕೊಂಡು ಮನೆಗಳ ಬಳಿ ಬರುತ್ತಿದ್ದರು. ಹೀಗೆ ಬಂದವರಿಗೆ ಭತ್ತ ನೀಡುವ ಪದ್ಧತಿ ಇತ್ತು. ಇದು ಕ್ರಮೇಣ<br />ಮರೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>