<p><strong>ಕೋಲಾರ:</strong> ನಗರ ಹೊರವಲಯದ ಟಮಕ ಕೈಗಾರಿಕಾ ಪ್ರದೇಶದ ಬಾಲಾಜಿ ರೈಸ್ ಮಿಲ್ ಮುಂಭಾಗ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಹೊರರಾಜ್ಯದ ಎಂಟು ಮಂದಿಯನ್ನು ವಿಶೇಷ ಪೊಲೀಸ್ ತಂಡ ಬಂಧಿಸಿದೆ. ಆರೋಪಿಗಳಿಂದ ₹ 20 ಲಕ್ಷ ಬೆಲೆಯ 20 ಕೆ.ಜಿ 580 ಗ್ರಾಂ ಗಾಂಜಾ ಹಾಗೂ ₹10 ಲಕ್ಷ ಮೌಲ್ಯದ ಕಾರು ವಶಪಡಿಸಿಕೊಳ್ಳಲಾಗಿದೆ.</p>.<p>ಹರಿಯಾಣದ ಮೊಹಮ್ಮದ್ ಆಜಾದ್ (45), ವಾರಿಸ್ (30), ರಾಜು (32), ಮುಬಾರಕ್ (32), ಹಸೀಬ್ (20), ಜಾವೀದ್ (26), ರಾಹಿಲ್ (28) ಮತ್ತು ರಾಜಸ್ಥಾನದ ಮೊಹಮ್ಮದ್ ಅಪ್ಸರ್ (30) ಬಂಧಿತ ಆರೋಪಿಗಳು.</p>.<p>ಅಕ್ರಮ ಗಾಂಜಾ ಸಾಗಾಟ ಹಾಗೂ ಮಾರಾಟ ತಡೆಯುವ ಸಲುವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರವಿಶಂಕರ್, ಜಗದೀಶ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಎಂ.ಎಚ್. ನಾಗ್ತೆ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.</p>.<p>ಗಾಂಜಾ ಸಾಗಾಟದ ಮಾಹಿತಿಯ ಮೇರೆಗೆ ದಾಳಿ ನಡೆಸಲಾಯಿತು. ಈ ವೇಳೆ ಪ್ರಮುಖ ಆರೋಪಿ ಕೋಲಾರ ನಗರದ ನ್ಯಾಮತ್ ಬೀ ದರ್ಗಾ ನಿವಾಸಿ ನಿಜಾಮುದ್ದೀನ್ ಅಲಿಯಾಸ್ ಚೋರ್ ನಿಜಾಮ್ ಮತ್ತು ಮುಬಾರಕ್ ತಲೆಮರೆಸಿಕೊಂಡರು. ಕಾರಿನಲ್ಲಿ ಇದ್ದ ಹರಿಯಾಣ ಮತ್ತು ರಾಜಸ್ಥಾನದ ಎಂಟು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಆರೋಪಿಗಳು ಗಾಂಜಾ ಸಾಗಾಟ ಮತ್ತು ಮಾರಾಟ, ನಂಬರ್ ಪ್ಲೇಟ್ ಬದಲಾಯಿಸಿ ಹಸು ಕಳ್ಳತನ ಮಾಡುತ್ತಿದ್ದರು ಎಂದಿದ್ದಾರೆ.</p>.<p>ಕಾರ್ಯಾಚರಣೆಯಲ್ಲಿ ಗಲ್ಪೇಟೆ ಪೊಲೀಸ್ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಲೋಕೇಶ್ ಎಂ.ಜೆ, ಪಿಎಸ್ಐ ವಿಠಲ್ ವೈ ತಳವಾರ್, ಸಿಬ್ಬಂದಿ ಮುನಿವೆಂಕಟಸ್ವಾಮಿ, ಷಫೀವುಲ್ಲಾ, ಸುಜ್ಞಾನ್ ಕುಮಾರ್ ಮಂಜುನಾಥ.ಇ.ವಿ, ಶಿವಕುಮಾರ್, ವಿಠಲ್ ಬಿ ಕುಂಭಾರ್ ನಾಗರಾಜ ಇದ್ದರು. ಸಿಬ್ಬಂದಿಯನ್ನು ಎಸ್ಪಿ ನಿಖಿಲ್ ಶ್ಲಾಘಿಸಿದ್ದಾರೆ.</p>.<p><strong>₹ 20 ಲಕ್ಷ ಬೆಲೆಯ 20 ಕೆ.ಜಿ 580 ಗ್ರಾಂ ಗಾಂಜಾ ವಶ ವಿಶೇಷ ಪೊಲೀಸ್ ತಂಡದ ಕಾರ್ಯಾಚರಣೆ ಹರಿಯಾಣ, ರಾಜಸ್ಥಾನ ಮೂಲದ ಆರೋಪಿಗಳು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ:</strong> ನಗರ ಹೊರವಲಯದ ಟಮಕ ಕೈಗಾರಿಕಾ ಪ್ರದೇಶದ ಬಾಲಾಜಿ ರೈಸ್ ಮಿಲ್ ಮುಂಭಾಗ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಹೊರರಾಜ್ಯದ ಎಂಟು ಮಂದಿಯನ್ನು ವಿಶೇಷ ಪೊಲೀಸ್ ತಂಡ ಬಂಧಿಸಿದೆ. ಆರೋಪಿಗಳಿಂದ ₹ 20 ಲಕ್ಷ ಬೆಲೆಯ 20 ಕೆ.ಜಿ 580 ಗ್ರಾಂ ಗಾಂಜಾ ಹಾಗೂ ₹10 ಲಕ್ಷ ಮೌಲ್ಯದ ಕಾರು ವಶಪಡಿಸಿಕೊಳ್ಳಲಾಗಿದೆ.</p>.<p>ಹರಿಯಾಣದ ಮೊಹಮ್ಮದ್ ಆಜಾದ್ (45), ವಾರಿಸ್ (30), ರಾಜು (32), ಮುಬಾರಕ್ (32), ಹಸೀಬ್ (20), ಜಾವೀದ್ (26), ರಾಹಿಲ್ (28) ಮತ್ತು ರಾಜಸ್ಥಾನದ ಮೊಹಮ್ಮದ್ ಅಪ್ಸರ್ (30) ಬಂಧಿತ ಆರೋಪಿಗಳು.</p>.<p>ಅಕ್ರಮ ಗಾಂಜಾ ಸಾಗಾಟ ಹಾಗೂ ಮಾರಾಟ ತಡೆಯುವ ಸಲುವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರವಿಶಂಕರ್, ಜಗದೀಶ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಎಂ.ಎಚ್. ನಾಗ್ತೆ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.</p>.<p>ಗಾಂಜಾ ಸಾಗಾಟದ ಮಾಹಿತಿಯ ಮೇರೆಗೆ ದಾಳಿ ನಡೆಸಲಾಯಿತು. ಈ ವೇಳೆ ಪ್ರಮುಖ ಆರೋಪಿ ಕೋಲಾರ ನಗರದ ನ್ಯಾಮತ್ ಬೀ ದರ್ಗಾ ನಿವಾಸಿ ನಿಜಾಮುದ್ದೀನ್ ಅಲಿಯಾಸ್ ಚೋರ್ ನಿಜಾಮ್ ಮತ್ತು ಮುಬಾರಕ್ ತಲೆಮರೆಸಿಕೊಂಡರು. ಕಾರಿನಲ್ಲಿ ಇದ್ದ ಹರಿಯಾಣ ಮತ್ತು ರಾಜಸ್ಥಾನದ ಎಂಟು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಆರೋಪಿಗಳು ಗಾಂಜಾ ಸಾಗಾಟ ಮತ್ತು ಮಾರಾಟ, ನಂಬರ್ ಪ್ಲೇಟ್ ಬದಲಾಯಿಸಿ ಹಸು ಕಳ್ಳತನ ಮಾಡುತ್ತಿದ್ದರು ಎಂದಿದ್ದಾರೆ.</p>.<p>ಕಾರ್ಯಾಚರಣೆಯಲ್ಲಿ ಗಲ್ಪೇಟೆ ಪೊಲೀಸ್ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಲೋಕೇಶ್ ಎಂ.ಜೆ, ಪಿಎಸ್ಐ ವಿಠಲ್ ವೈ ತಳವಾರ್, ಸಿಬ್ಬಂದಿ ಮುನಿವೆಂಕಟಸ್ವಾಮಿ, ಷಫೀವುಲ್ಲಾ, ಸುಜ್ಞಾನ್ ಕುಮಾರ್ ಮಂಜುನಾಥ.ಇ.ವಿ, ಶಿವಕುಮಾರ್, ವಿಠಲ್ ಬಿ ಕುಂಭಾರ್ ನಾಗರಾಜ ಇದ್ದರು. ಸಿಬ್ಬಂದಿಯನ್ನು ಎಸ್ಪಿ ನಿಖಿಲ್ ಶ್ಲಾಘಿಸಿದ್ದಾರೆ.</p>.<p><strong>₹ 20 ಲಕ್ಷ ಬೆಲೆಯ 20 ಕೆ.ಜಿ 580 ಗ್ರಾಂ ಗಾಂಜಾ ವಶ ವಿಶೇಷ ಪೊಲೀಸ್ ತಂಡದ ಕಾರ್ಯಾಚರಣೆ ಹರಿಯಾಣ, ರಾಜಸ್ಥಾನ ಮೂಲದ ಆರೋಪಿಗಳು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>