<p><strong>ಬೇತಮಂಗಲ:</strong> ಬೆಂಗಳೂರು-ಚೈನ್ನೈ ನಿರ್ಮಿಸಿರುವ ಕಾರಿಡಾರ್ ರಸ್ತೆ ಸುಂದರಪಾಳ್ಯ ಟೋಲ್ ಗೇಟ್ನಲ್ಲಿ ವಾಹನಗಳಿಗೆ ಅಗತ್ಯ ಮುಂಜಾಗ್ರತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.</p>.<p>ಕಾರಿಡಾರ್ ಟೋಲ್ ಗೇಟ್ ರಸ್ತೆ ಹಾಗೂ ಬೇತಮಂಗಲ ಮತ್ತು ವಿ.ಕೋಟ ಮಾರ್ಗದ ರಸ್ತೆಯಲ್ಲಿ ವಾಹನಗಳು ವೇಗವಾಗಿ ಬರುವ ದೃಷ್ಟಿಯಿಂದ ಅನೇಕ ಅಪಘಾತಗಳು ಸಂಭವಿಸುತ್ತಿವೆ. ಕಾರಿಡಾರ್ ರಸ್ತೆ ಅಧಿಕಾರಿಗಳು ಅಗತ್ಯ ಮುಂಜಾಗ್ರತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪತ್ರಿಕಾಗೋಷ್ಠಿ ಮೂಲಕ ಎಚ್ಚರಿಕೆ ನೀಡಿದರು.</p>.<p>ಗ್ರಾ.ಪಂ ಮಾಜಿ ಅಧ್ಯಕ್ಷ ಸುನಿಲ್ ಕುಮಾರ್ ಮಾತನಾಡಿ, ಬೇತಮಂಗಲದಿಂದ ವಿ.ಕೋಟಕ್ಕೆ ಹೋಗುವ ವಾಹನಗಳು ಮತ್ತು ಕಾರಿಡಾರ್ ರಸ್ತೆಯಿಂದ ಬರುವ ವಾಹನಗಳು ಒಂದೇ ಜಾಗದ ಸರ್ಕಲ್ನಲ್ಲಿ ಸೇರಲಿವೆ. ಅಂದರೆ, ಈ ಸರ್ಕಲ್ನಲ್ಲಿ ಯಾವುದೇ ರೀತಿಯ ರಸ್ತೆ ಉಬ್ಬು ಹಾಗೂ ಎಚ್ಚರಿಕೆ ನಾಮಫಲಕ ಅಳವಡಿಸುವಲ್ಲಿ ಕಾರಿಡಾರ್ ರಸ್ತೆಯ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p>ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಹಾಗೂ ವಾಹನ ಸವಾರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೇತಮಂಗಲ:</strong> ಬೆಂಗಳೂರು-ಚೈನ್ನೈ ನಿರ್ಮಿಸಿರುವ ಕಾರಿಡಾರ್ ರಸ್ತೆ ಸುಂದರಪಾಳ್ಯ ಟೋಲ್ ಗೇಟ್ನಲ್ಲಿ ವಾಹನಗಳಿಗೆ ಅಗತ್ಯ ಮುಂಜಾಗ್ರತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.</p>.<p>ಕಾರಿಡಾರ್ ಟೋಲ್ ಗೇಟ್ ರಸ್ತೆ ಹಾಗೂ ಬೇತಮಂಗಲ ಮತ್ತು ವಿ.ಕೋಟ ಮಾರ್ಗದ ರಸ್ತೆಯಲ್ಲಿ ವಾಹನಗಳು ವೇಗವಾಗಿ ಬರುವ ದೃಷ್ಟಿಯಿಂದ ಅನೇಕ ಅಪಘಾತಗಳು ಸಂಭವಿಸುತ್ತಿವೆ. ಕಾರಿಡಾರ್ ರಸ್ತೆ ಅಧಿಕಾರಿಗಳು ಅಗತ್ಯ ಮುಂಜಾಗ್ರತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪತ್ರಿಕಾಗೋಷ್ಠಿ ಮೂಲಕ ಎಚ್ಚರಿಕೆ ನೀಡಿದರು.</p>.<p>ಗ್ರಾ.ಪಂ ಮಾಜಿ ಅಧ್ಯಕ್ಷ ಸುನಿಲ್ ಕುಮಾರ್ ಮಾತನಾಡಿ, ಬೇತಮಂಗಲದಿಂದ ವಿ.ಕೋಟಕ್ಕೆ ಹೋಗುವ ವಾಹನಗಳು ಮತ್ತು ಕಾರಿಡಾರ್ ರಸ್ತೆಯಿಂದ ಬರುವ ವಾಹನಗಳು ಒಂದೇ ಜಾಗದ ಸರ್ಕಲ್ನಲ್ಲಿ ಸೇರಲಿವೆ. ಅಂದರೆ, ಈ ಸರ್ಕಲ್ನಲ್ಲಿ ಯಾವುದೇ ರೀತಿಯ ರಸ್ತೆ ಉಬ್ಬು ಹಾಗೂ ಎಚ್ಚರಿಕೆ ನಾಮಫಲಕ ಅಳವಡಿಸುವಲ್ಲಿ ಕಾರಿಡಾರ್ ರಸ್ತೆಯ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p>ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಹಾಗೂ ವಾಹನ ಸವಾರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>