‘ಎಷ್ಟು ವಿವಾಹಗಳಾಗಿವೆ, ಎಷ್ಟು ಗಂಡಂದಿರು? ಅವರು ಯಾವ ಕೆಲಸ ಮಾಡುತ್ತಾರೆ? ಮದುವೆಯ ಲಗ್ನ ಪತ್ರಿಕೆ, ಕಲ್ಯಾಣ ಮಂಟಪದ ವಿವರ ಕೊಡಿ... ಎಂಬೆಲ್ಲಾ ಮಾಹಿತಿಯನ್ನು ನೀಡಬೇಕೆಂದು ಕೋರಿ ಜಿಲ್ಲಾಧಿಕಾರಿಗೆ ಆರ್ಟಿಐ ಕಾರ್ಯಕರ್ತ ಅರ್ಜಿ ಸಲ್ಲಿಸಿದ್ದಾನೆ. ಮಾಹಿತಿ ಹಕ್ಕು ಕಾಯ್ದೆ ದುರುಪಯೋಗಪಡಿಸಿಕೊಂಡು ಸರ್ಕಾರಿ ನೌಕರಳಾದ ನನ್ನ ವೈಯಕ್ತಿಕ ಮಾಹಿತಿ ಕೋರಿ ತೇಜೋವಧೆ ಮಾಡುತ್ತಿದ್ದಾನೆ. ನನ್ನ ಕಚೇರಿಗೂ ಬಂದು ಮಾಹಿತಿ ನೀಡುವಂತೆ ಒತ್ತಡ ಹಾಕಿದ್ದಾನೆ. ಅನಾಥ ಆಶ್ರಮ ತೆರೆಯಲು 45 ಎಕರೆ ಜಮೀನು ಮಂಜೂರು ಮಾಡುವಂತೆ ಕೇಳಿದಾಗ ಪರಿಶೀಲಿಸುವುದಾಗಿ ಹೇಳಿದೆ. ಆದರೆ, ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿ ಬೆದರಿಕೆ ಹಾಕಿದ್ದಾನೆ’ ಎಂಬುದಾಗಿ ಠಾಣೆಗೆ ಮಹಿಳಾ ತಹಶೀಲ್ದಾರ್ ದೂರು ನೀಡಿದ್ದರು.