ಮಲದ ಗುಂಡಿ ಪರಿಶೀಲಿಸಿದ ಅವರು 'ಪ್ರಾಂಶುಪಾಲರನ್ನೇ ಮಲದ ಗುಂಡಿಗೆ ಇಳಿಸಬೇಕಿತ್ತು' ಎಂದರು, ತಕ್ಷಣವೇ ಕೊಲೆ ಯತ್ನ ಕೇಸು ದಾಖಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿದರು.
'ಮಲದ ಗುಂಡಿಗೆ ಇಳಿಸಿದವರಿಗೆ ಸ್ವಲ್ಪವೂ ನಾಚಿಕೆ, ಮರ್ಯಾದೆ ಇಲ್ಲವೇ? ಇಂಥ ಗುಂಡಿಗೆ ಇಳಿದಾಗ ಮಕ್ಕಳು ಉಸಿರುಗಟ್ಟಿ ಸಾಯುವ ಸಾಧ್ಯತೆಗಳು ಇರುತ್ತವೆ' ಎಂದರು.
ಮೊದಲು ಅಧಿಕಾರಿಗಳಿಂದ ಮಾಹಿತಿ ಪಡೆದು ತರಾಟೆಗೆ ತೆಗೆದುಕೊಂಡರು. ನಂತರ ಮಕ್ಕಳನ್ನು ಕರೆದು ಸಮಸ್ಯೆ ಆಲಿಸಿದರು.
ಆಯೋಗದ ನಿರ್ದೇಶಕ ಸುನಿಲ್ ಬಾಬು, ಸದಸ್ಯರ ಆಪ್ತ ಕಾರ್ಯದರ್ಶಿ ಬಿ.ಕೆ.ಭೋಲಾ ಜೊತೆಗಿದ್ದರು. ಮಲದ ಗುಂಡಿಗೆ ಇಳಿಸಿದ್ದ ಸ್ಥಳವನ್ನು ವೀಕ್ಷಿಸಿದರು.
ಪ್ರಕರಣ ಬೆಳಕಿಗೆ ಬಂದು ಆರು ದಿನ ಕಳೆದಿದ್ದು, ಇನ್ನೂ ಶಾಲೆಗೆ ರಾಜ್ಯ, ರಾಷ್ಟ್ರ ಮಟ್ಟದ ಅಧಿಕಾರಿಗಳು, ವಿವಿಧ ಆಯೋಗಗಳ ಪ್ರತಿನಿಧಿಗಳು, ಸಚಿವರು, ಜನಪ್ರತಿನಿಧಿಗಳು ಹಾಗೂ ಹೋರಾಟಗಾರರು ಭೇಟಿ ನೀಡುತ್ತಲೇ ಇದ್ದಾರೆ.
ಮಕ್ಕಳ ಭದ್ರತಾ ಹಿತದೃಷ್ಟಿಯಿಂದ ಹೆಚ್ಚುವರಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ.