ಅನುದಾನ ಬಿಡುಗಡೆ ಮಾಡುವರೇ? ‘ರೈಲ್ವೆ ಕೋಚ್ ಫ್ಯಾಕ್ಟರಿ’ಯೂ ಇಲ್ಲ, ರೈಲ್ವೆ ವರ್ಕ್ಶಾಪ್ ಕೂಡ ಬರಲಿಲ್ಲ! ಮುಳಬಾಗಿಲಿಗೆ ರೈಲು ವ್ಯವಸ್ಥೆಯೇ ಇಲ್ಲ
‘ಕೃಷ್ಣ–ಪೆನ್ನಾರ್ ಜೋಡಣೆ ಮಾಡಲಿ’ ದಕ್ಷಿಣ ಭಾರತದ ನದಿ ಜೋಡಣೆಯ ಕಾರ್ಯಸಾಧ್ಯತೆಯು ಕೇಂದ್ರ ಸರ್ಕಾರದ ಮುಂದಿದೆ. ಕೃಷ್ಣ–ಪೆನ್ನಾರ್ ನದಿ ಜೋಡಣೆ ಮಾಡಿ ರಾಜ್ಯದ ಪೆನ್ನಾರ್ ನದಿಪಾತ್ರದ ರೈತರಿಗೆ ನೀರು ಕೊಡಬೇಕು.ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್
ಅಭಿಪ್ರಾಯ… ಬಹಳ ಹಿಂದೆ ಭೇಟಿಯಾಗಿ ಮನವಿ ಮಾಡಿದ್ದೆವು. ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಎರಡೂ ವಿಫಲವಾಗಿವೆ. ಕುಡಿಯುವ ನೀರಿಗೆ ಬಳಸುತ್ತಿರುವ ಕೊಳವೆ ಬಾವಿ ನೀರಿನಲ್ಲಿ ಅಪಾಯಕಾರಿ ಯುರೇನಿಯಂ ಪತ್ತೆಯಾಗಿದೆ. ಈ ಬಜೆಟ್ನಲ್ಲಾದರೂ ನೀರಾವರಿ ಯೋಜನೆಗೆ ಒತ್ತು ಕೊಡಬೇಕು. ಜಿಲ್ಲೆಯ ಎಲ್ಲಾ ಕೆರೆ ಹಾಗೂ ಕೆರೆ ಜೋಡಿಸುವ ಕಾಲುವೆ ಜಾಲ ಅಭಿವೃದ್ಧಿಗೆ ಪ್ಯಾಕೇಜ್ ಘೋಷಿಸಬೇಕು–ಆರ್.ಆಂಜನೇಯ ರೆಡ್ಡಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ
ಟೊಮೆಟೊ ಮಾವು ಸಾಗಣೆಗೆ ವ್ಯವಸ್ಥೆ ಮಾಡಿ ಕೋಲಾರದಿಂದ ಟೊಮೆಟೊ ತರಕಾರಿ ಹೂವು ಶ್ರೀನಿವಾಸಪುರದಿಂದ ಮಾವು ಸಾಗಿಸಲು ಸರಿಯಾದ ಸಂಪರ್ಕ ವ್ಯವಸ್ಥೆ ಇಲ್ಲವಾಗಿದೆ. ಈ ಬಜೆಟ್ನಲ್ಲಾದರೂ ಹೆಚ್ಚುವರಿ ರೈಲು ಗೂಡ್ಸ್ ರೈಲು ಕಲ್ಪಿಸಿ ರೈತರಿಗೆ ಅನುಕೂಲ ಮಾಡಬೇಕು. ಬೇಗನೇ ಹಾಳಾಗುವ ಟೊಮೆಟೊ ಹಾಗೂ ಮಾವು ಸಾಗಿಸಲು ಗೂಡ್ಸ್ ರೈಲಿನ ವ್ಯವಸ್ಥೆ ಇದ್ದರೆ ಉತ್ತರ ಭಾರತ ಹಾಗೂ ಇನ್ನಿತರ ಕಡೆಗೆ ತ್ವರಿತವಾಗಿ ಸಾಗಿಸಬಹುದು–ನಳಿನಿಗೌಡ ರೈತ ಮುಖಂಡೆ ಕೋಲಾರ
‘ನೇರ ರೈಲು ಸಂಪರ್ಕ ಕಲ್ಪಿಸಿ’ ಕೋಲಾರ ನಗರದಿಂದ ಬೆಂಗಳೂರಿಗೆ ನೇರ ರೈಲು ಮಾರ್ಗ ಸ್ಥಾಪಿಸಬೇಕು. ಇದರಿಂದ ಜಿಲ್ಲೆಯ ಪ್ರಯಾಣಿಕರಿಗೆ ಹಾಗೂ ರೈತರು ಬೆಳೆದ ಉತ್ಪನ್ನಗಳ ಸಾಗಣೆಗೆ ಅನುಕೂಲವಾಗುತ್ತದೆ. ಕೋಲಾರ ನಗರವೂ ಅಭಿವೃದ್ಧಿಯಾಗುತ್ತದೆ–ಕುರುಬರಪೇಟೆ ವೆಂಕಟೇಶ್ ನಾಗರಿಕ ಕೋಲಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.