ಜಾತ್ರೆಯ ಅಂಗವಾಗಿ ಚಲನ ಚಿತ್ರೋತ್ಸವ, ಕರಾಟೆ, ತೋಟಗಾರಿಕೆ ಇಲಾಖೆಯ ಫಲಪುಷ್ಪ ಪ್ರದರ್ಶನ, ಕೃಷಿ ಮೇಳ, ಜ.4ರಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. 15 ದಿನಗಳಿಂದ ನಿರಂತರ ದಾಸೋಹ ನಡೆದಿದೆ. ರಥೋತ್ಸವದ ಬಳಿಕ ಕೈಲಾಸ ಮಂಟಪದಲ್ಲಿ ಅನುಭಾವಿಗಳ ಅಮೃತ ಚಿಂತನಗೋಷ್ಠಿ ನಡೆಯಿತು. ಗಾಯಕಿ ಬಿ.ಜಯಶ್ರೀ ಅವರಿಂದ ಗಾನತರಂಗ, ಮತ್ತೂರು ಶ್ರೀನಿಧಿ ಅವರಿಂದ ವಯೋಲಿನ್ ವಾದನ, ವಿಲಾಸ್ ನಾಯಕ್ ಅವರಿಂದ ಚಿತ್ರ ತರಂಗ ಪ್ರಸ್ತುತಿ ನಡೆಯಿತು.