<p><strong>ಕನಕಗಿರಿ:</strong> ಶ್ರೀ ಸಾಯಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಗೆ ಭತ್ತ ನಾಟಿ ಮಾಡುವ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಶನಿವಾರ ನಡೆಯಿತು. </p>.<p>ಭತ್ತದ ಗದ್ದೆಯ ಕೆಸರಿನಲ್ಲಿ ಇಳಿದ ವಿದ್ಯಾರ್ಥಿಗಳು ಸ್ವಂತ ತಾವೆ ಭತ್ತದ ಸಸಿ ನಾಟಿ ಮಾಡಿ ಖುಷಿ ಪಟ್ಟರು.</p>.<p>ಜಡೇಶ ಅವರು ಭತ್ತ ಬೆಳೆಯುವ ವಿಧಾನ, ಪೈರುಗಳಿಗೆ ನೀರು ಹರಿಸುವುದು, ಔಷಧಿ ಸಿಂಪರಣೆ, ಫೈರು ಸಂರಕ್ಷಣೆ, ಕಟಾವು ಮಾಡುವುದು, ಭತ್ತ ಒಣಗಿಸುವುದು ಇತರೆ ವಿಷಯಗಳ ಕುರಿತು ಮಾಹಿತಿ ನೀಡಿದರು.</p>.<p>ಮುಖ್ಯಶಿಕ್ಷಕ ಹರೀಶ ನಾಯಕ ಮಾತನಾಡಿ ವಿದ್ಯಾರ್ಥಿಗಳಿಗೆ ಬರೀ ಪಠ್ಯ ಮಾತ್ರವಲ್ಲದೆ ಕೃಷಿ ಚಟುವಟಿಕೆಗಳು, ವ್ಯಾಪಾರ ವಹಿವಾಟು ಸೇರಿದಂತೆ ಹೊರ ಜಗತ್ತಿನಲ್ಲಿ ನಡೆಯುವ ಘಟನಾವಳಿಗಳ ಕುರಿತು ಮಾಹಿತಿ ನೀಡುವ ದೃಷ್ಟಿಯಿಂದ ಭತ್ತದ ಬೆಳೆ ನಾಟಿಯ ಪ್ರಾತ್ಯಕ್ಷಿಕೆ ಬಗ್ಗೆ ತಿಳಿಸಲಾಗಿದೆ ಎಂದರು.</p>.<p>ಕೃಷಿ ದೇಶದ ಬೆನ್ನೆಲುಬು, ಕೃಷಿಕರು ತಮ್ಮ ಹೊಲ, ಗದ್ದೆಯ ಮಣ್ಣು ಪರೀಕ್ಷಿಸಿ ಕೃಷಿ ವಿಜ್ಞಾನಿಗಳ ಮಾರ್ಗ ದರ್ಶನ ಪಡೆದು ಬಿತ್ತನೆ ಮಾಡಬೇಕು ಎಂದು ತಿಳಿಸಿದರು. ಮಳೆ ಆಶ್ರಿತ ಹಾಗೂ ಒಣಭೂಮಿ ಪ್ರದೇಶದಲ್ಲಿ ಬೆಳೆಯುವ ಬೆಳೆಗಳ ಕುರಿತು ಈ ಸಮಯದಲ್ಲಿ ಮಾಹಿತಿ ನೀಡಲಾಯಿತು.</p>.<p>ಶಿಕ್ಷಕರಾದ ಸವಿತಾ ನಾಯ್ಕ, ಮಂಜುನಾಥ ಮಿಟ್ಲಕೋಡ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನಕಗಿರಿ:</strong> ಶ್ರೀ ಸಾಯಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಗೆ ಭತ್ತ ನಾಟಿ ಮಾಡುವ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಶನಿವಾರ ನಡೆಯಿತು. </p>.<p>ಭತ್ತದ ಗದ್ದೆಯ ಕೆಸರಿನಲ್ಲಿ ಇಳಿದ ವಿದ್ಯಾರ್ಥಿಗಳು ಸ್ವಂತ ತಾವೆ ಭತ್ತದ ಸಸಿ ನಾಟಿ ಮಾಡಿ ಖುಷಿ ಪಟ್ಟರು.</p>.<p>ಜಡೇಶ ಅವರು ಭತ್ತ ಬೆಳೆಯುವ ವಿಧಾನ, ಪೈರುಗಳಿಗೆ ನೀರು ಹರಿಸುವುದು, ಔಷಧಿ ಸಿಂಪರಣೆ, ಫೈರು ಸಂರಕ್ಷಣೆ, ಕಟಾವು ಮಾಡುವುದು, ಭತ್ತ ಒಣಗಿಸುವುದು ಇತರೆ ವಿಷಯಗಳ ಕುರಿತು ಮಾಹಿತಿ ನೀಡಿದರು.</p>.<p>ಮುಖ್ಯಶಿಕ್ಷಕ ಹರೀಶ ನಾಯಕ ಮಾತನಾಡಿ ವಿದ್ಯಾರ್ಥಿಗಳಿಗೆ ಬರೀ ಪಠ್ಯ ಮಾತ್ರವಲ್ಲದೆ ಕೃಷಿ ಚಟುವಟಿಕೆಗಳು, ವ್ಯಾಪಾರ ವಹಿವಾಟು ಸೇರಿದಂತೆ ಹೊರ ಜಗತ್ತಿನಲ್ಲಿ ನಡೆಯುವ ಘಟನಾವಳಿಗಳ ಕುರಿತು ಮಾಹಿತಿ ನೀಡುವ ದೃಷ್ಟಿಯಿಂದ ಭತ್ತದ ಬೆಳೆ ನಾಟಿಯ ಪ್ರಾತ್ಯಕ್ಷಿಕೆ ಬಗ್ಗೆ ತಿಳಿಸಲಾಗಿದೆ ಎಂದರು.</p>.<p>ಕೃಷಿ ದೇಶದ ಬೆನ್ನೆಲುಬು, ಕೃಷಿಕರು ತಮ್ಮ ಹೊಲ, ಗದ್ದೆಯ ಮಣ್ಣು ಪರೀಕ್ಷಿಸಿ ಕೃಷಿ ವಿಜ್ಞಾನಿಗಳ ಮಾರ್ಗ ದರ್ಶನ ಪಡೆದು ಬಿತ್ತನೆ ಮಾಡಬೇಕು ಎಂದು ತಿಳಿಸಿದರು. ಮಳೆ ಆಶ್ರಿತ ಹಾಗೂ ಒಣಭೂಮಿ ಪ್ರದೇಶದಲ್ಲಿ ಬೆಳೆಯುವ ಬೆಳೆಗಳ ಕುರಿತು ಈ ಸಮಯದಲ್ಲಿ ಮಾಹಿತಿ ನೀಡಲಾಯಿತು.</p>.<p>ಶಿಕ್ಷಕರಾದ ಸವಿತಾ ನಾಯ್ಕ, ಮಂಜುನಾಥ ಮಿಟ್ಲಕೋಡ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>