<p><strong>ಗಂಗಾವತಿ:</strong> ಹನುಮಮಾಲಾ ವಿಸರ್ಜನೆ ನಿಮಿತ್ತ ಅಂಜನಾದ್ರಿ ಬಳಿ ಸಿದ್ದತೆ ಭರದಿಂದ ಸಾಗಿದ್ದು, ಶನಿವಾರ ಅಂಜನಾದ್ರಿ ಬಳಿ ವಾಹನ ಸಂಚಾರಕ್ಕೆ ಪರ್ಯಾಯ ರಸ್ತೆ ರಚನೆ ಕಾರ್ಯ ನಡೆಯಿತು.</p>.<p>ಅಂಜನಾದ್ರಿ ಬೆಟ್ಟಕ್ಕೆ ಶನಿವಾರ, ಭಾನುವಾರ ಸೇರಿ ಹಬ್ಬ-ಹರಿದಿನಗಳಲ್ಲಿ ಸಾವಿರಾರು ಜನ ಕಾರು, ಬೈಕ್, ಆಟೋ, ಬಸ್ಗಳಲ್ಲಿ ಆಗಮಿಸುತ್ತಾರೆ. ಅನೇಕರು ವಾಹನಗಳನ್ನು ರಸ್ತೆ ಬದಿ ನಿಲ್ಲಿಸುವುದರಿಂದ ಸಂಚಾರ ದಟ್ಟಣೆ ಹಾಗೂ ಸುಗಮ ಸಂಚಾರಕ್ಕೆ ಪರದಾಡಬೇಕಾಗುತ್ತದೆ.</p>.<p>ಸದ್ಯ ಹನುಮಮಾಲಾ ವಿಸರ್ಜನೆಗೆ 1.50 ಲಕ್ಷ ಭಕ್ತರು ಬರುವ ನಿರೀಕ್ಷೆಯಿದ್ದು, ವಾಹನ ಸಂಚಾರ ದಟ್ಟಣೆ ತಪ್ಪಿಸಲು, ಜಿಲ್ಲಾಧಿಕಾರಿಗಳು ಮಧ್ವಾನದ ಹಳೆಯ ರಸ್ತೆ ಮಾರ್ಗ ರಚಿಸಲು ತಾಲ್ಲೂಕು ಆಡಳಿತಕ್ಕೆ ಸೂಚನೆ ನೀಡಿದ್ದಾರೆ.</p>.<p>ಕಾರು, ಬೈಕ್ ಸೇರಿ ಇತರೆ ವಾಹನಗಳು ಗಂಗಾವತಿಗೆ ತೆರಳಲು ಹನುಮನಹಳ್ಳಿ ಗ್ರಾಮದ ಹೊರಭಾಗದಲ್ಲಿನ ಮಧ್ವಾನ ರಸ್ತೆ (ಹಳೆಯರಸ್ತೆ) ಮೂಲಕ ಪಂಪಾಸರೋವರಕ್ಕೆ ತೆರಳುವ ಮಣ್ಣಿನ ರಸ್ತೆಗೆ, ಜೆಸಿಬಿ ಮೂಲಕ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ.</p>.<p>ಜೆಸಿಬಿ ಬೆಳಿಗ್ಗೆಯಿಂದ ಹಳೆ ರಸ್ತೆಗೆ ಬಾಚಿಕೊಂಡ ಗಿಡಗಳನ್ನು ತೆರವುಗೊಳಿಸಿ, ಮಣ್ಣಿನ ರಸ್ತೆ ರಚನೆ ಮಾಡಲಾಗಿದೆ. ಇದರ ಮೂಲಕವೇ ವಾಹನಗಳು ಸಂಚಾರ ಮಾಡಲಿವೆ. ಇದರಿಂದ ಸುಗಮ ಸಂಚಾರಕ್ಕೆ ಅನುವು ಆಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ:</strong> ಹನುಮಮಾಲಾ ವಿಸರ್ಜನೆ ನಿಮಿತ್ತ ಅಂಜನಾದ್ರಿ ಬಳಿ ಸಿದ್ದತೆ ಭರದಿಂದ ಸಾಗಿದ್ದು, ಶನಿವಾರ ಅಂಜನಾದ್ರಿ ಬಳಿ ವಾಹನ ಸಂಚಾರಕ್ಕೆ ಪರ್ಯಾಯ ರಸ್ತೆ ರಚನೆ ಕಾರ್ಯ ನಡೆಯಿತು.</p>.<p>ಅಂಜನಾದ್ರಿ ಬೆಟ್ಟಕ್ಕೆ ಶನಿವಾರ, ಭಾನುವಾರ ಸೇರಿ ಹಬ್ಬ-ಹರಿದಿನಗಳಲ್ಲಿ ಸಾವಿರಾರು ಜನ ಕಾರು, ಬೈಕ್, ಆಟೋ, ಬಸ್ಗಳಲ್ಲಿ ಆಗಮಿಸುತ್ತಾರೆ. ಅನೇಕರು ವಾಹನಗಳನ್ನು ರಸ್ತೆ ಬದಿ ನಿಲ್ಲಿಸುವುದರಿಂದ ಸಂಚಾರ ದಟ್ಟಣೆ ಹಾಗೂ ಸುಗಮ ಸಂಚಾರಕ್ಕೆ ಪರದಾಡಬೇಕಾಗುತ್ತದೆ.</p>.<p>ಸದ್ಯ ಹನುಮಮಾಲಾ ವಿಸರ್ಜನೆಗೆ 1.50 ಲಕ್ಷ ಭಕ್ತರು ಬರುವ ನಿರೀಕ್ಷೆಯಿದ್ದು, ವಾಹನ ಸಂಚಾರ ದಟ್ಟಣೆ ತಪ್ಪಿಸಲು, ಜಿಲ್ಲಾಧಿಕಾರಿಗಳು ಮಧ್ವಾನದ ಹಳೆಯ ರಸ್ತೆ ಮಾರ್ಗ ರಚಿಸಲು ತಾಲ್ಲೂಕು ಆಡಳಿತಕ್ಕೆ ಸೂಚನೆ ನೀಡಿದ್ದಾರೆ.</p>.<p>ಕಾರು, ಬೈಕ್ ಸೇರಿ ಇತರೆ ವಾಹನಗಳು ಗಂಗಾವತಿಗೆ ತೆರಳಲು ಹನುಮನಹಳ್ಳಿ ಗ್ರಾಮದ ಹೊರಭಾಗದಲ್ಲಿನ ಮಧ್ವಾನ ರಸ್ತೆ (ಹಳೆಯರಸ್ತೆ) ಮೂಲಕ ಪಂಪಾಸರೋವರಕ್ಕೆ ತೆರಳುವ ಮಣ್ಣಿನ ರಸ್ತೆಗೆ, ಜೆಸಿಬಿ ಮೂಲಕ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ.</p>.<p>ಜೆಸಿಬಿ ಬೆಳಿಗ್ಗೆಯಿಂದ ಹಳೆ ರಸ್ತೆಗೆ ಬಾಚಿಕೊಂಡ ಗಿಡಗಳನ್ನು ತೆರವುಗೊಳಿಸಿ, ಮಣ್ಣಿನ ರಸ್ತೆ ರಚನೆ ಮಾಡಲಾಗಿದೆ. ಇದರ ಮೂಲಕವೇ ವಾಹನಗಳು ಸಂಚಾರ ಮಾಡಲಿವೆ. ಇದರಿಂದ ಸುಗಮ ಸಂಚಾರಕ್ಕೆ ಅನುವು ಆಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>