ಈ ಭಾಗದಲ್ಲಿ ಚಿರತೆ, ಕರಡಿ ಹಾವಳಿ ಮಿತಿ ಮೀರಿದೆ. ಈ ಹಿಂದೆ ದ್ರಾಕ್ಷಿ ಬೆಳೆ ನಾಶ ಮಾಡಿದ್ದ, ಕಾಡು ಪ್ರಾಣಿಗಳು ಈಗ ಕಲ್ಲಂಗಡಿ ಹಣ್ಣನ್ನು ನಾಶ ಮಾಡುತ್ತಿವೆ. ಬೋನಿನ ವ್ಯವಸ್ಥೆ ಮಾಡಿ ಕರಡಿ, ಚಿರತೆಗಳನ್ನು ಸೆರೆ ಹಿಡಿಯಿರಿ ಎಂದು ಹತ್ತಾರು ಸಲ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಮುಖಂಡ ಸೋಮನಾಥ ತಳವಾರ ದೂರಿದ್ದಾರೆ.