<p><strong>ಕಾರಟಗಿ:</strong> ಪಟ್ಟಣದಲ್ಲಿ ಶರಣಬಸವೇಶ್ವರ ಪುರಾಣ, ಗಂಗಸ್ಥಳಕ್ಕೆ ಹೋಗಿ ಬರುವ ಅದ್ದೂರಿ ಮೆರವಣಿಗೆ, ಜೋಡು ರಥೋತ್ಸವ, ಪುರಾಣ ಮಂಗಲದೊಂದಿಗೆ ಶ್ರಾವಣ ಮಾಸದ ಸಂಭ್ರಮಕ್ಕೆ ತೆರೆ ಬೀಳಲಿದೆ.</p>.<p>ಸೆಪ್ಟೆಂಬರ್ 1ರಂದು ಸೋಮವಾರ ಗಂಗೆಸ್ಥಳದ ಮೆರವಣಿಗೆ, ಶರಣಬಸವೇಶ್ವರರ ಬೆಳ್ಳಿ ಮೂರ್ತಿಗಳ ಪಲ್ಲಕ್ಕಿ ಉತ್ಸವದೊಂದಿಗೆ ನಡೆಯುವುದು. ಸೆಪ್ಟೆಂಬರ್ 2ರಂದು ಮಂಗಳವಾರ ಅಪಾರ ಭಕ್ತರ ಮಧ್ಯೆ ಜೋಡು ರಥೋತ್ಸವ ನಡೆಯುವುದು.</p>.<p>ಕಳೆದ ವರ್ಷ ಮುಸ್ಲಿಮರು ಪುರಾಣಕ್ಕೆ ಆಗಮಿಸಿ, ಹಿಂದೂಗಳು ಮಸೀದಿಗೆ ತೆರಳಿ ಪರಸ್ಪರ ಸನ್ಮಾನ, ಗೌರವ ಸಮರ್ಪಣೆ ಮಾಡಿ ಭಾವೈಕ್ಯ ಸಾರಿದ್ದರು.</p>.<p>ಶ್ರಾವಣದಲ್ಲಿ ನಡೆದಿರುವ ಕಲಬುರಗಿ ಶರಣಬಸವೇಶ್ವರ ಪುರಾಣ ಪ್ರವಚನ ಸುವರ್ಣ ಸಂಭ್ರಮದ ಗಡಿ (51ನೇ ವರ್ಷ) ದಾಟಿದೆ. ಗಂಡನ ಮನೆಗೆ ಹೋದ ಇಲ್ಲಿಯ ಹೆಣ್ಣುಮಕ್ಕಳು ಮನೆಯ ಕಾರ್ಯಕ್ರಮವೆಂಬಂತೆ ಕುಟುಂಬ ಪರಿವಾರದೊಂದಿಗೆ ಆಗಮಿಸಿ, ಸಂಭ್ರಮವನ್ನು ಸವಿದು ತೆರಳುವುದು ಸಂಪ್ರದಾಯವಾಗಿದೆ.</p>.<p>ಈ ಬಾರಿ ರಥಕ್ಕೆ ಬೆಳ್ಳಿಯ ಕಳಸ ಧಾರಣೆ, ರಥಕ್ಕೆ 4 ಕಲ್ಲಿನ ಗಾಲಿ ಮಾಡಿಸಿರುವುದು ಸಂಭ್ರಮದ ಕಳೆಯನ್ನು ಹೆಚ್ಚಿಸಿದೆ.</p> <p><br> ಪುರಾಣ ಪ್ರವಚನದ ನಿಮಿತ್ತ ಸಾಮೂಹಿಕ ವಿವಾಹ, ಸೀಮಂತ ಕಾರ್ಯಕ್ರಮ, ಸಾವಿರಾರು ಮಹಿಳೆಯರಿಗೆ ಉಡಿ ತುಂಬುವುದು, ಪ್ರತಿ ಮನೆಯ ಮಹಿಳೆಯರು ಶೇಂಗಾ ಹೋಳಿಗೆ ಸಹಿತ ವಿವಿಧ ವಸ್ತುಗಳ ಸಮರ್ಪಣೆ, ನಿತ್ಯ ಅನ್ನ ಸಂತರ್ಪಣೆಯಂತಹ ಅನೇಕ ಭಕ್ತಿಯ ಪ್ರಕ್ರಿಯೆಗಳು ಸರದಿಯಲ್ಲಿ ನಡೆಯುತ್ತಿವೆ.</p>.<p>ಗಂಗಾವತಿ ಆರಾಧ್ಯ ದೈವ ಖ್ಯಾತಿಯ ಚನ್ನಬಸವತಾತನವರು ಹಿಂದೆ ಪಟ್ಟಣದಲ್ಲಿ ‘ಗಂಗಾವತಿ ಛೋಟಾ ಬಾಂಬೆ, ಕಾರಟಗಿ ಕಲ್ಯಾಣ ಕೇಂದ್ರ’ ಆಗುತ್ತೆ ಎಂದಿದ್ದರಂತೆ. ಅವರ ವಾಣಿ ಸಾಕಾರಗೊಂಡಿದೆ ಎಂಬುದು ಜನರ ನಂಬಿಕೆಯಾಗಿದೆ.<br><br> ಜೋಡು ರಥ: ಪುರಾಣ ಪ್ರವಚನ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ತೇರು ಎಳೆಯುವುದು ಶ್ರೇಷ್ಠ ಎಂಬ ಭಾವನೆ, ಪ್ರೇರಣೆ ಎಂದುಕೊಂಡ ದಿ. ಕೊಟ್ರಬಸಪ್ಪ ಸಜ್ಜನ್ ರಥ ಮಾಡಿಸಿದ್ದರು. <br> ‘ಸ್ವಂತ ಹಣ ವ್ಯಯಿಸಿ ತೇರು ಮಾಡಿಸುವ ಸಂಕಲ್ಪದೊಂದಿಗೆ ಮುಂದಾದೆ, ಆತ್ಮೀಯರು ದೈವದ ಪಾಲುದಾರಿಕೆ ಅವಶ್ಯಕ ಎಂದು ಮನವೊಲಿಸಿದ್ದರಿಂದ ಅನೇಕರು ತೇರು ನಿರ್ಮಾಣಕ್ಕೆ ದೇಣಿಗೆ ನೀಡಿದರು. 1999ರಿಂದ ಜೋಡು ರಥೋತ್ಸವ ಜನಸಾಗರದ ಮಧ್ಯೆ ನಡೆಯುತ್ತಿದೆ’ ಎಂದು ಮೆಲುಕು ಹಾಕಿದರು.<br> ಇದೇ ಸೋಮವಾರ ಗಂಗಾಪೂಜೆ ಸಲ್ಲಿಸಿ, ಪಲ್ಲಕ್ಕಿ ಸೇವೆಯೊಂದಿಗೆ ಗಂಗೆಸ್ಥಳದ ಅದ್ದೂರಿ ಮೆರವಣಿಗೆ ತುಂಗಭದ್ರಾ ಕಾಲುವೆಯಿಂದ ಆರಂಭಗೊಳ್ಳುವುದು. ಪಟ್ಟಣ ಸಹಿತ ವಿವಿಧೆಡೆಯ ಹತ್ತಾರು ಸಾವಿರ ಭಕ್ತರು ಪಾಲ್ಗೊಳ್ಳುವರು. <br><br><br></p>.<div><blockquote>ಊರ ಜಾತ್ರೆ ಎಲ್ಲಾ ಜಾತಿ ಜನಾಂಗದವರು ಪಾಲ್ಗೊಳ್ಳುವುದು ವಿಶೇಷ. ಇಂಥಹ ಉತ್ಸವಗಳಿಂದ ಶಾಂತಿ ನೆಲೆಸುವುದು. ಎಲ್ಲೆಡೆಯೂ ಇವು ನಡೆಯಬೇಕು. </blockquote><span class="attribution">ಮುತ್ತಯ್ಯಸ್ವಾಮಿ ಪ್ರಧಾನ ಅರ್ಚಕ</span></div>.<div><blockquote>ಮಹಾದ್ವಾರ ಅಡುಗೆ ಮನೆ ಬೆಳ್ಳಿ ಅಳವಡಿಕೆ ಸಹಿತ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಜನರ ಹಣ ಜನರ ಅನುಭವಿಸುವಿಕೆಗೇ ವಿನಿಯೋಗಿಸಿದ್ದಕ್ಕೆ ಸಂತೃಪ್ತಿ ಇದೆ </blockquote><span class="attribution">ಕುಳಗಿ ಗುಂಡಪ್ಪ ಪುರಾಣ ಸಮಿತಿ ಮುಖ್ಯಸ್ಥ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರಟಗಿ:</strong> ಪಟ್ಟಣದಲ್ಲಿ ಶರಣಬಸವೇಶ್ವರ ಪುರಾಣ, ಗಂಗಸ್ಥಳಕ್ಕೆ ಹೋಗಿ ಬರುವ ಅದ್ದೂರಿ ಮೆರವಣಿಗೆ, ಜೋಡು ರಥೋತ್ಸವ, ಪುರಾಣ ಮಂಗಲದೊಂದಿಗೆ ಶ್ರಾವಣ ಮಾಸದ ಸಂಭ್ರಮಕ್ಕೆ ತೆರೆ ಬೀಳಲಿದೆ.</p>.<p>ಸೆಪ್ಟೆಂಬರ್ 1ರಂದು ಸೋಮವಾರ ಗಂಗೆಸ್ಥಳದ ಮೆರವಣಿಗೆ, ಶರಣಬಸವೇಶ್ವರರ ಬೆಳ್ಳಿ ಮೂರ್ತಿಗಳ ಪಲ್ಲಕ್ಕಿ ಉತ್ಸವದೊಂದಿಗೆ ನಡೆಯುವುದು. ಸೆಪ್ಟೆಂಬರ್ 2ರಂದು ಮಂಗಳವಾರ ಅಪಾರ ಭಕ್ತರ ಮಧ್ಯೆ ಜೋಡು ರಥೋತ್ಸವ ನಡೆಯುವುದು.</p>.<p>ಕಳೆದ ವರ್ಷ ಮುಸ್ಲಿಮರು ಪುರಾಣಕ್ಕೆ ಆಗಮಿಸಿ, ಹಿಂದೂಗಳು ಮಸೀದಿಗೆ ತೆರಳಿ ಪರಸ್ಪರ ಸನ್ಮಾನ, ಗೌರವ ಸಮರ್ಪಣೆ ಮಾಡಿ ಭಾವೈಕ್ಯ ಸಾರಿದ್ದರು.</p>.<p>ಶ್ರಾವಣದಲ್ಲಿ ನಡೆದಿರುವ ಕಲಬುರಗಿ ಶರಣಬಸವೇಶ್ವರ ಪುರಾಣ ಪ್ರವಚನ ಸುವರ್ಣ ಸಂಭ್ರಮದ ಗಡಿ (51ನೇ ವರ್ಷ) ದಾಟಿದೆ. ಗಂಡನ ಮನೆಗೆ ಹೋದ ಇಲ್ಲಿಯ ಹೆಣ್ಣುಮಕ್ಕಳು ಮನೆಯ ಕಾರ್ಯಕ್ರಮವೆಂಬಂತೆ ಕುಟುಂಬ ಪರಿವಾರದೊಂದಿಗೆ ಆಗಮಿಸಿ, ಸಂಭ್ರಮವನ್ನು ಸವಿದು ತೆರಳುವುದು ಸಂಪ್ರದಾಯವಾಗಿದೆ.</p>.<p>ಈ ಬಾರಿ ರಥಕ್ಕೆ ಬೆಳ್ಳಿಯ ಕಳಸ ಧಾರಣೆ, ರಥಕ್ಕೆ 4 ಕಲ್ಲಿನ ಗಾಲಿ ಮಾಡಿಸಿರುವುದು ಸಂಭ್ರಮದ ಕಳೆಯನ್ನು ಹೆಚ್ಚಿಸಿದೆ.</p> <p><br> ಪುರಾಣ ಪ್ರವಚನದ ನಿಮಿತ್ತ ಸಾಮೂಹಿಕ ವಿವಾಹ, ಸೀಮಂತ ಕಾರ್ಯಕ್ರಮ, ಸಾವಿರಾರು ಮಹಿಳೆಯರಿಗೆ ಉಡಿ ತುಂಬುವುದು, ಪ್ರತಿ ಮನೆಯ ಮಹಿಳೆಯರು ಶೇಂಗಾ ಹೋಳಿಗೆ ಸಹಿತ ವಿವಿಧ ವಸ್ತುಗಳ ಸಮರ್ಪಣೆ, ನಿತ್ಯ ಅನ್ನ ಸಂತರ್ಪಣೆಯಂತಹ ಅನೇಕ ಭಕ್ತಿಯ ಪ್ರಕ್ರಿಯೆಗಳು ಸರದಿಯಲ್ಲಿ ನಡೆಯುತ್ತಿವೆ.</p>.<p>ಗಂಗಾವತಿ ಆರಾಧ್ಯ ದೈವ ಖ್ಯಾತಿಯ ಚನ್ನಬಸವತಾತನವರು ಹಿಂದೆ ಪಟ್ಟಣದಲ್ಲಿ ‘ಗಂಗಾವತಿ ಛೋಟಾ ಬಾಂಬೆ, ಕಾರಟಗಿ ಕಲ್ಯಾಣ ಕೇಂದ್ರ’ ಆಗುತ್ತೆ ಎಂದಿದ್ದರಂತೆ. ಅವರ ವಾಣಿ ಸಾಕಾರಗೊಂಡಿದೆ ಎಂಬುದು ಜನರ ನಂಬಿಕೆಯಾಗಿದೆ.<br><br> ಜೋಡು ರಥ: ಪುರಾಣ ಪ್ರವಚನ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ತೇರು ಎಳೆಯುವುದು ಶ್ರೇಷ್ಠ ಎಂಬ ಭಾವನೆ, ಪ್ರೇರಣೆ ಎಂದುಕೊಂಡ ದಿ. ಕೊಟ್ರಬಸಪ್ಪ ಸಜ್ಜನ್ ರಥ ಮಾಡಿಸಿದ್ದರು. <br> ‘ಸ್ವಂತ ಹಣ ವ್ಯಯಿಸಿ ತೇರು ಮಾಡಿಸುವ ಸಂಕಲ್ಪದೊಂದಿಗೆ ಮುಂದಾದೆ, ಆತ್ಮೀಯರು ದೈವದ ಪಾಲುದಾರಿಕೆ ಅವಶ್ಯಕ ಎಂದು ಮನವೊಲಿಸಿದ್ದರಿಂದ ಅನೇಕರು ತೇರು ನಿರ್ಮಾಣಕ್ಕೆ ದೇಣಿಗೆ ನೀಡಿದರು. 1999ರಿಂದ ಜೋಡು ರಥೋತ್ಸವ ಜನಸಾಗರದ ಮಧ್ಯೆ ನಡೆಯುತ್ತಿದೆ’ ಎಂದು ಮೆಲುಕು ಹಾಕಿದರು.<br> ಇದೇ ಸೋಮವಾರ ಗಂಗಾಪೂಜೆ ಸಲ್ಲಿಸಿ, ಪಲ್ಲಕ್ಕಿ ಸೇವೆಯೊಂದಿಗೆ ಗಂಗೆಸ್ಥಳದ ಅದ್ದೂರಿ ಮೆರವಣಿಗೆ ತುಂಗಭದ್ರಾ ಕಾಲುವೆಯಿಂದ ಆರಂಭಗೊಳ್ಳುವುದು. ಪಟ್ಟಣ ಸಹಿತ ವಿವಿಧೆಡೆಯ ಹತ್ತಾರು ಸಾವಿರ ಭಕ್ತರು ಪಾಲ್ಗೊಳ್ಳುವರು. <br><br><br></p>.<div><blockquote>ಊರ ಜಾತ್ರೆ ಎಲ್ಲಾ ಜಾತಿ ಜನಾಂಗದವರು ಪಾಲ್ಗೊಳ್ಳುವುದು ವಿಶೇಷ. ಇಂಥಹ ಉತ್ಸವಗಳಿಂದ ಶಾಂತಿ ನೆಲೆಸುವುದು. ಎಲ್ಲೆಡೆಯೂ ಇವು ನಡೆಯಬೇಕು. </blockquote><span class="attribution">ಮುತ್ತಯ್ಯಸ್ವಾಮಿ ಪ್ರಧಾನ ಅರ್ಚಕ</span></div>.<div><blockquote>ಮಹಾದ್ವಾರ ಅಡುಗೆ ಮನೆ ಬೆಳ್ಳಿ ಅಳವಡಿಕೆ ಸಹಿತ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಜನರ ಹಣ ಜನರ ಅನುಭವಿಸುವಿಕೆಗೇ ವಿನಿಯೋಗಿಸಿದ್ದಕ್ಕೆ ಸಂತೃಪ್ತಿ ಇದೆ </blockquote><span class="attribution">ಕುಳಗಿ ಗುಂಡಪ್ಪ ಪುರಾಣ ಸಮಿತಿ ಮುಖ್ಯಸ್ಥ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>