<p><strong>ಕೊಪ್ಪಳ</strong>: ಕೊವೀಡ್ ಮಾರ್ಗಸೂಚಿ ಪಾಲನೆ ಹಿನ್ನೆಲೆಯಲ್ಲಿ ಪೊಲೀಸರು ವಿವಿಧೆಡೆ ಮಾರ್ಗಗಳನ್ನು ಬಂದ್ ಮಾಡಿ ಅನಗತ್ಯ ಸಂಚಾರ ನಡೆಸದಂತೆ ತಡೆವೊಡ್ಡಿದರು.</p>.<p>ಗದಗ ಮಾರ್ಗದ ಮೂಲಕ ನಗರವನ್ನು ಸಂಪರ್ಕಿಸುವ ಜಿಲ್ಲಾ ಕ್ರೀಡಾಂಗಣದ ಬಳಿ ಚೆಕ್ ಪೋಸ್ಟ್ ಸ್ಥಾಪಿಸಿ ಬಿಗಿ ಬಂದೋಬಸ್ತ್ ಮಾಡಲಾಗುತ್ತು.</p>.<p>ಕಳೆದ 14 ದಿನಗಳ ಹಾಗೆ ದಿನದೂಡಿದ್ದ ಜನರಿಗೆ ಕಠಿಣ ಲಾಕ್ಡೌನ್ ಅನುಭವ ಉಂಟಾಗುತ್ತಿದ್ದು ಅನಗತ್ಯ ಸಂಚಾರ ತಡೆಯುವ ಉದ್ದೇಶದಿಂದ ವಿವಿಧಡೆ ಕಾವಲು ಕಾಯುತ್ತಿದ್ದಾರೆ.</p>.<p><strong>ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ: </strong>ಬೆಳಿಗ್ಗೆಯಿಂದಲೇ ಜವಾಹರ ರಸ್ತೆ, ಜೆಪಿ ಮಾರುಕಟ್ಟೆ ಬಳಿ, ಕೇಂದ್ರ ಬಸ್ ನಿಲ್ದಾಣದ ಎದುರು ಜನ ಖರೀದಿಗೆ ಮುಗಿಬಿದ್ದರು. ಅವಧಿ ಮುಗಿದ ನಂತರ ತೆರಳದ ಜನರನ್ನು ಪೊಲೀಸರು ಲಾಠಿ ಪ್ರಹಾರ ನೆಡಸುವ ಮೂಲಕ ಚದುರಿಸಿದರು.</p>.<p>ಕಚೇರಿ, ಆಸ್ಪತ್ರೆಗೆ ತೆರಳುವವರು ಗುರುತಿನ ಚೀಟಿ ತೋರಿಸಿ ಮುಂದೆ ಹೋಗುವಂತೆ ಆಯಿತು. ನಗರದ ಆಯಕಟ್ಟಿನ ಜಾಗದಲ್ಲಿ ಕಾವಲು ಕಾಯುತ್ತಿದ್ದು, ಒಳದಾರಿಯ ಮೂಲಕ ಜನರು ಓಡಾಡುತ್ತಿರುವುದು ಕಂಡುಬಂತು.</p>.<p>ಬಿಗಿಯಾದ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದು, ಎಸ್. ಪಿ.ಟಿ.ಶ್ರೀಧರ್ ನೇತೃತ್ವದಲ್ಲಿ ವಿವಿಧೆಡೆ ಪೊಲೀಸ್ ವಾಹನಗಳು ಪರಿಶೀಲನೆ ನಡೆಸಿದರು.</p>.<p><strong>ಶಾಸಕರಿಂದಜಾಗೃತಿ </strong><br />ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯ ಕುಷ್ಟಗಿ ಪಟ್ಟಣದ ವಿವಿಧ ಮಾರುಕಟ್ಟೆ ಪ್ರದೇಶಗಳಲ್ಲಿ ಖರೀದಿಗೆಹ ಮುಗಿಬಿದ್ದಿದ್ದ ಜನರಿಗೆ ಸ್ವತಃ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ರಸ್ತೆಗೆ ಇಳಿದು ಕೊರೊನಾ ಜಾಗೃತಿ ಮೂಡಿಸಿದರು.</p>.<p>ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ ಮಾಸ್ಕ್ ಹಾಕಿಕೊಳ್ಳುವಂತೆ, ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ</strong>: ಕೊವೀಡ್ ಮಾರ್ಗಸೂಚಿ ಪಾಲನೆ ಹಿನ್ನೆಲೆಯಲ್ಲಿ ಪೊಲೀಸರು ವಿವಿಧೆಡೆ ಮಾರ್ಗಗಳನ್ನು ಬಂದ್ ಮಾಡಿ ಅನಗತ್ಯ ಸಂಚಾರ ನಡೆಸದಂತೆ ತಡೆವೊಡ್ಡಿದರು.</p>.<p>ಗದಗ ಮಾರ್ಗದ ಮೂಲಕ ನಗರವನ್ನು ಸಂಪರ್ಕಿಸುವ ಜಿಲ್ಲಾ ಕ್ರೀಡಾಂಗಣದ ಬಳಿ ಚೆಕ್ ಪೋಸ್ಟ್ ಸ್ಥಾಪಿಸಿ ಬಿಗಿ ಬಂದೋಬಸ್ತ್ ಮಾಡಲಾಗುತ್ತು.</p>.<p>ಕಳೆದ 14 ದಿನಗಳ ಹಾಗೆ ದಿನದೂಡಿದ್ದ ಜನರಿಗೆ ಕಠಿಣ ಲಾಕ್ಡೌನ್ ಅನುಭವ ಉಂಟಾಗುತ್ತಿದ್ದು ಅನಗತ್ಯ ಸಂಚಾರ ತಡೆಯುವ ಉದ್ದೇಶದಿಂದ ವಿವಿಧಡೆ ಕಾವಲು ಕಾಯುತ್ತಿದ್ದಾರೆ.</p>.<p><strong>ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ: </strong>ಬೆಳಿಗ್ಗೆಯಿಂದಲೇ ಜವಾಹರ ರಸ್ತೆ, ಜೆಪಿ ಮಾರುಕಟ್ಟೆ ಬಳಿ, ಕೇಂದ್ರ ಬಸ್ ನಿಲ್ದಾಣದ ಎದುರು ಜನ ಖರೀದಿಗೆ ಮುಗಿಬಿದ್ದರು. ಅವಧಿ ಮುಗಿದ ನಂತರ ತೆರಳದ ಜನರನ್ನು ಪೊಲೀಸರು ಲಾಠಿ ಪ್ರಹಾರ ನೆಡಸುವ ಮೂಲಕ ಚದುರಿಸಿದರು.</p>.<p>ಕಚೇರಿ, ಆಸ್ಪತ್ರೆಗೆ ತೆರಳುವವರು ಗುರುತಿನ ಚೀಟಿ ತೋರಿಸಿ ಮುಂದೆ ಹೋಗುವಂತೆ ಆಯಿತು. ನಗರದ ಆಯಕಟ್ಟಿನ ಜಾಗದಲ್ಲಿ ಕಾವಲು ಕಾಯುತ್ತಿದ್ದು, ಒಳದಾರಿಯ ಮೂಲಕ ಜನರು ಓಡಾಡುತ್ತಿರುವುದು ಕಂಡುಬಂತು.</p>.<p>ಬಿಗಿಯಾದ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದು, ಎಸ್. ಪಿ.ಟಿ.ಶ್ರೀಧರ್ ನೇತೃತ್ವದಲ್ಲಿ ವಿವಿಧೆಡೆ ಪೊಲೀಸ್ ವಾಹನಗಳು ಪರಿಶೀಲನೆ ನಡೆಸಿದರು.</p>.<p><strong>ಶಾಸಕರಿಂದಜಾಗೃತಿ </strong><br />ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯ ಕುಷ್ಟಗಿ ಪಟ್ಟಣದ ವಿವಿಧ ಮಾರುಕಟ್ಟೆ ಪ್ರದೇಶಗಳಲ್ಲಿ ಖರೀದಿಗೆಹ ಮುಗಿಬಿದ್ದಿದ್ದ ಜನರಿಗೆ ಸ್ವತಃ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ರಸ್ತೆಗೆ ಇಳಿದು ಕೊರೊನಾ ಜಾಗೃತಿ ಮೂಡಿಸಿದರು.</p>.<p>ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ ಮಾಸ್ಕ್ ಹಾಕಿಕೊಳ್ಳುವಂತೆ, ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>