<p><strong>ಕೊಪ್ಪಳ:</strong> ನಗರದ ಹೋಟೆಲ್ನಲ್ಲಿ ಶನಿವಾರ ರಾತ್ರಿ ನಡೆದ ಜನ್ಮದಿನದ ಕಾರ್ಯಕ್ರಮದ ಖುಷಿ ಕೇವಲ ಒಂದು ತಾಸಿನೊಳಗೆ ಕರಗಿ ಹೋಯಿತು.</p>.<p>ಜನ್ಮದಿನದ ಸಂಭ್ರಮಾಚರಣೆಯಲ್ಲಿ ಮಕ್ಕಳೊಂದಿಗೆ ಪಾಲ್ಗೊಂಡಿದ್ದ ಹಿರಿಯರು ಹಾಗೂ ಮಕ್ಕಳು ಎಲ್ಲರೂ ಒಟ್ಟಿಗೆ ಊಟ ಮಾಡಿದ್ದರು. ಕುಟುಂಬದವರೆಲ್ಲ ಸೇರಿ ಫೋಟೊ ತೆಗೆಯಿಸಿಕೊಂಡಿದ್ದರು. 10.30ರ ಸುಮಾರಿಗೆ ಕಾರ್ಯಕ್ರಮ ಮುಗಿದಿದ್ದು, ಮುಂದಿನ ಅರ್ಧ ಗಂಟೆಯಲ್ಲಿಯೇ ಅಪಘಾತ ನಡೆದಿದೆ.</p>.<p>ಅಪಾಯಕಾರಿ ರಸ್ತೆ ಎನ್ನುವ ಕಾರಣಕ್ಕೆ ಬಿನ್ನಾಳ ಗ್ರಾಮದಿಂದ ಬಂದಿದ್ದ ಒಂಬತ್ತು ಜನ ಊಟ ಮುಗಿಸಿಕೊಂಡವರೇ ಊರಿಗೆ ವಾಪಸ್ ಹೊರಟಿದ್ದರು. ಅವರಲ್ಲಿ ಐದು ಜನ ಜಿಲ್ಲೆಯ ಭಾನಾಪುರ ಬಳಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.</p>.<p><strong>ಓದಿ...<a href="https://www.prajavani.net/district/koppal/horrible-road-accident-near-koppal-six-people-dead-957070.html" target="_blank">ಕುಕನೂರು ಸಮೀಪ ಭೀಕರ ರಸ್ತೆ ಅಪಘಾತ: ಐದು ಮಂದಿ ದಾರುಣ ಸಾವು</a></strong></p>.<p><strong>ಆಕ್ರಂದನ:</strong> ಘಟನಾ ಸ್ಥಳಕ್ಕೆ ಬಂದ ಕುಟುಂಬದವರು ಹಾಗೂ ಬಿನ್ನಾಳ ಗ್ರಾಮಸ್ಥರು ಮೃತ ದೇಹಗಳನ್ನು ಕಂಡು ತತ್ತರಿಸಿ ಹೋದರು. ಹಲವರು ಜಿಲ್ಲಾಸ್ಪತ್ರೆಗೆ ಬಂದರೆ, ಇನ್ನು ಕೆಲವರು ಶವಪರೀಕ್ಷೆ ನಡೆಯಲಿರುವ ಕುಕನೂರು ತಾಲ್ಲೂಕು ಆಸ್ಪತ್ರೆ ಮುಂದೆ ಜಮಾಯಿಸಿದ್ದಾರೆ.</p>.<p>ಮೃತಪಟ್ಟ ದೇವಪ್ಪ ಕೊಪ್ಪದ ಅವರ ಪುತ್ರ ಶಿವು ಕೊಪ್ಪದ ಮಾತನಾಡಿ ‘ಮನೆ ಸ್ಮಶಾನವಾಗಿ ಹೋಯ್ತು. ಆ ದೇವರಿಗೆ ಕರುಣೆಯೇ ಇಲ್ಲ’ ಎಂದು ಬಿಕ್ಕಿ ಬಿಕ್ಕಿ ಅತ್ತರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ:</strong> ನಗರದ ಹೋಟೆಲ್ನಲ್ಲಿ ಶನಿವಾರ ರಾತ್ರಿ ನಡೆದ ಜನ್ಮದಿನದ ಕಾರ್ಯಕ್ರಮದ ಖುಷಿ ಕೇವಲ ಒಂದು ತಾಸಿನೊಳಗೆ ಕರಗಿ ಹೋಯಿತು.</p>.<p>ಜನ್ಮದಿನದ ಸಂಭ್ರಮಾಚರಣೆಯಲ್ಲಿ ಮಕ್ಕಳೊಂದಿಗೆ ಪಾಲ್ಗೊಂಡಿದ್ದ ಹಿರಿಯರು ಹಾಗೂ ಮಕ್ಕಳು ಎಲ್ಲರೂ ಒಟ್ಟಿಗೆ ಊಟ ಮಾಡಿದ್ದರು. ಕುಟುಂಬದವರೆಲ್ಲ ಸೇರಿ ಫೋಟೊ ತೆಗೆಯಿಸಿಕೊಂಡಿದ್ದರು. 10.30ರ ಸುಮಾರಿಗೆ ಕಾರ್ಯಕ್ರಮ ಮುಗಿದಿದ್ದು, ಮುಂದಿನ ಅರ್ಧ ಗಂಟೆಯಲ್ಲಿಯೇ ಅಪಘಾತ ನಡೆದಿದೆ.</p>.<p>ಅಪಾಯಕಾರಿ ರಸ್ತೆ ಎನ್ನುವ ಕಾರಣಕ್ಕೆ ಬಿನ್ನಾಳ ಗ್ರಾಮದಿಂದ ಬಂದಿದ್ದ ಒಂಬತ್ತು ಜನ ಊಟ ಮುಗಿಸಿಕೊಂಡವರೇ ಊರಿಗೆ ವಾಪಸ್ ಹೊರಟಿದ್ದರು. ಅವರಲ್ಲಿ ಐದು ಜನ ಜಿಲ್ಲೆಯ ಭಾನಾಪುರ ಬಳಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.</p>.<p><strong>ಓದಿ...<a href="https://www.prajavani.net/district/koppal/horrible-road-accident-near-koppal-six-people-dead-957070.html" target="_blank">ಕುಕನೂರು ಸಮೀಪ ಭೀಕರ ರಸ್ತೆ ಅಪಘಾತ: ಐದು ಮಂದಿ ದಾರುಣ ಸಾವು</a></strong></p>.<p><strong>ಆಕ್ರಂದನ:</strong> ಘಟನಾ ಸ್ಥಳಕ್ಕೆ ಬಂದ ಕುಟುಂಬದವರು ಹಾಗೂ ಬಿನ್ನಾಳ ಗ್ರಾಮಸ್ಥರು ಮೃತ ದೇಹಗಳನ್ನು ಕಂಡು ತತ್ತರಿಸಿ ಹೋದರು. ಹಲವರು ಜಿಲ್ಲಾಸ್ಪತ್ರೆಗೆ ಬಂದರೆ, ಇನ್ನು ಕೆಲವರು ಶವಪರೀಕ್ಷೆ ನಡೆಯಲಿರುವ ಕುಕನೂರು ತಾಲ್ಲೂಕು ಆಸ್ಪತ್ರೆ ಮುಂದೆ ಜಮಾಯಿಸಿದ್ದಾರೆ.</p>.<p>ಮೃತಪಟ್ಟ ದೇವಪ್ಪ ಕೊಪ್ಪದ ಅವರ ಪುತ್ರ ಶಿವು ಕೊಪ್ಪದ ಮಾತನಾಡಿ ‘ಮನೆ ಸ್ಮಶಾನವಾಗಿ ಹೋಯ್ತು. ಆ ದೇವರಿಗೆ ಕರುಣೆಯೇ ಇಲ್ಲ’ ಎಂದು ಬಿಕ್ಕಿ ಬಿಕ್ಕಿ ಅತ್ತರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>