<p><strong>ಕೊಪ್ಪಳ: </strong>ಜಿಲ್ಲೆಯ ಹಲವು ಸ್ಮಾರಕಗಳು ಮತ್ತು ಕೋಟೆಗಳು ಸ್ವಾತಂತ್ರ್ಯೋತ್ಸವದ ಹೋರಾಟಕ್ಕೆ ಸಾಕ್ಷಿಯಂತಿವೆ.</p>.<p>ಅದರಲ್ಲಿ ಕೊಪ್ಪಳದ ಕೋಟೆ (ಕಿಲ್ಲಾ) ಪ್ರಮುಖವಾದದ್ದು. ಈ ಕೋಟೆಯ ಕೆಲ ಭಾಗಗಳು ಎರಡನೇ ಇಬ್ರಾಹಿಂನ ಆದಿಲ್ಶಾಹನ ಕಾಲದಲ್ಲಿ ನಿರ್ಮಾಣವಾದವು. ಏಳು ಸುತ್ತಿನ ಕೋಟೆ ಇದಾಗಿದ್ದು, ಮೊದಲ ಸುತ್ತಿನಲ್ಲಿ ಎರಡು ವೃತ್ತಾಕಾರದ ಬುರ್ಜುಗಳಿವೆ. ಬಾವಿ ಮತ್ತು ವಿಶ್ರಾಂತಿಗೆ ಮಂಟಪ ನಿರ್ಮಿಸಿದಂತಿದೆ.</p>.<p>ಸ್ವಾತಂತ್ರ್ಯ ಹೋರಾಟಕ್ಕೆ ನೆರವಾದ ಹಿನ್ನೆಲೆ ಹೊಂದಿರುವ ಈ ಕೋಟೆ ಕೊಪ್ಪಳ ನಗರದಿಂದ 4 ಕಿ.ಮೀ. ದೂರದಲ್ಲಿದೆ. ಪ್ರಮುಖ ಆಕರ್ಷಣೆಯ ತಾಣವೂ ಹೌದು.</p>.<p>ಜಿಲ್ಲೆಗೆ ಸಂಬಂಧಿಸಿದ ಕೆಲ ಶಾಸನಗಳಲ್ಲಿ ಕೋಟೆಯ ಮಾಹಿತಿಯಿದ್ದು, ಇಬ್ರಾಹಿಂ ಆದಿಲ್ ಶಾ ಅವಧಿಯಲ್ಲಿ ನಿರ್ಮಿತ ಮಂಟಪವನ್ನು ಈ ರಾಜನ ಬಂಟ ಸುಲ್ತಾನ್ ಅಲಿ ನವೀಕರಣ ಮಾಡಿದ. ಕ್ರಿ.ಶ. 1609ರ ಅವಧಿಯಲ್ಲಿ ಎರಡನೇ ಇಬ್ರಾಹಿಂ ಆದಿಲ್ ಶಾ ಗುಲಾಮರಾದ ಯಕ್ಕೂತ್ ಖಾನ್ ಮತ್ತು ಫಾಜೀಖಾನ್ ಇಬ್ಬರೂ ಕೊಪ್ಪಳ ಕೋಟೆಯ ಅಧಿಕಾರಿಗಳು ಇದ್ದಂತೆ ಎನ್ನುವುದು ಶಾಸನಗಳಿಂದ ತಿಳಿದುಬರುತ್ತದೆ.</p>.<p>1857ರ ಸ್ವಾತಂತ್ರ್ಯ ಸಂಗ್ರಾಮದ ವೇಳೆ ದಕ್ಷಿಣ ಭಾರತದ ಈ ಕೋಟೆ ಪ್ರದೇಶದಲ್ಲಿ ಜಮೀನ್ದಾರ ವೀರಪ್ಪ ದೇಸಾಯಿ ಅವರು ಹೋರಾಟದ ಕಿಡಿ ಹೊತ್ತಿಸಿದ್ದರು. ಮುಂಡರಗಿಯ ಭೀಮರಾಯ, ಹಮ್ಮಗಿಯ ಕೆಂಚನಗೌಡ ದೇಸಾಯಿ ಅವರು ಬ್ರಿಟಿಷರ ವಿರುದ್ಧ ಸೆಣಸಾಡಿ, ಕೋಟೆ ವಶಪಡಿಸಿಕೊಂಡಿದ್ದರು.</p>.<p class="Subhead">ಬಹದ್ದೂರ್ ಬಂಡೆ ಕೋಟೆ:‘ಹೈದರ್ ಅಲಿ ಆಳ್ವಿಕೆಯಲ್ಲಿ ಶೇಖ್ ಮಹಮ್ಮದ್ ಖಾನ್ ಎಂಬ ಮೇಲ್ವಿಚಾರಕನ ಉಸ್ತುವಾರಿಯಲ್ಲಿ ಬಹದ್ದೂರ್ ಬಂಡೆ ಕೋಟೆ ನಿರ್ಮಿಸಲಾಯಿತು. 1782ರಲ್ಲಿ ಮರಾಠರು ಮತ್ತು ನಿಜಾಮರು ತಮ್ಮ ಸೈನ್ಯದ ಜೊತೆ ಬಹದ್ದೂರ್ ಬಂಡಿ ಕೋಟೆಯ ಮೇಲೆ ದಾಳಿ ನಡೆಸಿದರು.</p>.<p>ಈ ಕೋಟೆಯನ್ನು ಕ್ರಿ.ಶ. 1786ರಲ್ಲಿ ಟಿಪ್ಪು ಸುಲ್ತಾನ ಮುತ್ತಿಗೆ ಹಾಕಿ ವಶಪಡಿಸಿಕೊಂಡ. ಆನಂತರ ಫ್ರೆಂಚ್ ಎಂಜಿನಿಯರ್ಗಳ ನೆರವಿನಿಂದ ಕ್ರಿ.ಶ. 1790 ರಲ್ಲಿ ಕೋಟೆ ಉನ್ನತೀಕರಿಸಲಾಯಿತು’ ಎಂದು ಇತಿಹಾಸದ ಪುಟಗಳು ಹೇಳುತ್ತವೆ.</p>.<p>ಸ್ವಾತಂತ್ರ್ಯ ಹೋರಾಟಕ್ಕೆ ನೆರವಾದ ಹಿನ್ನೆಲೆ ಹೊಂದಿರುವ ಈ ಕೋಟೆ ಕೊಪ್ಪಳ ನಗರದಿಂದ ನಾಲ್ಕು ಕಿ.ಮೀ. ದೂರದಲ್ಲಿದೆ. ಪ್ರಮುಖ ಆಕರ್ಷಣೆಯ ತಾಣವೂ ಆಗಿದೆ.</p>.<p>ಎರಡು ಸುತ್ತಿನಲ್ಲಿ ಕೋಟೆ ಕಟ್ಟಲಾಗಿದೆ. ಚೌಕಾಕಾರದ ದಪ್ಪನೆಯ ಕಲ್ಲುಗಳನ್ನು ಬಳಸಲಾಗಿದೆ. ಬಾಗಿಲಿನ ಪಶ್ಚಿಮದ ಬಂಡೆಯೊಂದರ ಮೇಲೆ ಅರೇಬಿಕ್ ಶಾಸನವಿದೆ. ವೈರಿಯ ಕಣ್ಣಿಗೆ ಕಾಣದಂತೆ ಅಡಗಿಕೊಂಡು ಯುದ್ಧ ಮಾಡುವ ತಂತ್ರದ ಕಾರಣಕ್ಕಾಗಿ ‘ನಿಟು’ಗಳನ್ನು ನಿರ್ಮಿಸಲಾಗಿದೆ.</p>.<p>ಕೋಟೆಯಲ್ಲಿ ಕೊಳಗಳು ಇವೆ. ಕೊಪ್ಪಳ ಜಿಲ್ಲೆಯ ಬಹದ್ದೂರ ಬಂಡಿ ಕೋಟೆ ನಿಜಾಮರ ಜತೆಗಿನ ಹೋರಾಟವಷ್ಟೇ ಅಲ್ಲ, ರೈತ ಬಂಡಾಯದ ಮೂಲಕ ನಡೆದ ಸ್ವಾತಂತ್ರ್ಯ ಹೋರಾಟಕ್ಕೂ ಸಾಕ್ಷಿಯಾಗಿ ನಿಂತಿದೆ ಎನ್ನುತ್ತಾರೆ ಇತಿಹಾಸ ತಜ್ಞರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ: </strong>ಜಿಲ್ಲೆಯ ಹಲವು ಸ್ಮಾರಕಗಳು ಮತ್ತು ಕೋಟೆಗಳು ಸ್ವಾತಂತ್ರ್ಯೋತ್ಸವದ ಹೋರಾಟಕ್ಕೆ ಸಾಕ್ಷಿಯಂತಿವೆ.</p>.<p>ಅದರಲ್ಲಿ ಕೊಪ್ಪಳದ ಕೋಟೆ (ಕಿಲ್ಲಾ) ಪ್ರಮುಖವಾದದ್ದು. ಈ ಕೋಟೆಯ ಕೆಲ ಭಾಗಗಳು ಎರಡನೇ ಇಬ್ರಾಹಿಂನ ಆದಿಲ್ಶಾಹನ ಕಾಲದಲ್ಲಿ ನಿರ್ಮಾಣವಾದವು. ಏಳು ಸುತ್ತಿನ ಕೋಟೆ ಇದಾಗಿದ್ದು, ಮೊದಲ ಸುತ್ತಿನಲ್ಲಿ ಎರಡು ವೃತ್ತಾಕಾರದ ಬುರ್ಜುಗಳಿವೆ. ಬಾವಿ ಮತ್ತು ವಿಶ್ರಾಂತಿಗೆ ಮಂಟಪ ನಿರ್ಮಿಸಿದಂತಿದೆ.</p>.<p>ಸ್ವಾತಂತ್ರ್ಯ ಹೋರಾಟಕ್ಕೆ ನೆರವಾದ ಹಿನ್ನೆಲೆ ಹೊಂದಿರುವ ಈ ಕೋಟೆ ಕೊಪ್ಪಳ ನಗರದಿಂದ 4 ಕಿ.ಮೀ. ದೂರದಲ್ಲಿದೆ. ಪ್ರಮುಖ ಆಕರ್ಷಣೆಯ ತಾಣವೂ ಹೌದು.</p>.<p>ಜಿಲ್ಲೆಗೆ ಸಂಬಂಧಿಸಿದ ಕೆಲ ಶಾಸನಗಳಲ್ಲಿ ಕೋಟೆಯ ಮಾಹಿತಿಯಿದ್ದು, ಇಬ್ರಾಹಿಂ ಆದಿಲ್ ಶಾ ಅವಧಿಯಲ್ಲಿ ನಿರ್ಮಿತ ಮಂಟಪವನ್ನು ಈ ರಾಜನ ಬಂಟ ಸುಲ್ತಾನ್ ಅಲಿ ನವೀಕರಣ ಮಾಡಿದ. ಕ್ರಿ.ಶ. 1609ರ ಅವಧಿಯಲ್ಲಿ ಎರಡನೇ ಇಬ್ರಾಹಿಂ ಆದಿಲ್ ಶಾ ಗುಲಾಮರಾದ ಯಕ್ಕೂತ್ ಖಾನ್ ಮತ್ತು ಫಾಜೀಖಾನ್ ಇಬ್ಬರೂ ಕೊಪ್ಪಳ ಕೋಟೆಯ ಅಧಿಕಾರಿಗಳು ಇದ್ದಂತೆ ಎನ್ನುವುದು ಶಾಸನಗಳಿಂದ ತಿಳಿದುಬರುತ್ತದೆ.</p>.<p>1857ರ ಸ್ವಾತಂತ್ರ್ಯ ಸಂಗ್ರಾಮದ ವೇಳೆ ದಕ್ಷಿಣ ಭಾರತದ ಈ ಕೋಟೆ ಪ್ರದೇಶದಲ್ಲಿ ಜಮೀನ್ದಾರ ವೀರಪ್ಪ ದೇಸಾಯಿ ಅವರು ಹೋರಾಟದ ಕಿಡಿ ಹೊತ್ತಿಸಿದ್ದರು. ಮುಂಡರಗಿಯ ಭೀಮರಾಯ, ಹಮ್ಮಗಿಯ ಕೆಂಚನಗೌಡ ದೇಸಾಯಿ ಅವರು ಬ್ರಿಟಿಷರ ವಿರುದ್ಧ ಸೆಣಸಾಡಿ, ಕೋಟೆ ವಶಪಡಿಸಿಕೊಂಡಿದ್ದರು.</p>.<p class="Subhead">ಬಹದ್ದೂರ್ ಬಂಡೆ ಕೋಟೆ:‘ಹೈದರ್ ಅಲಿ ಆಳ್ವಿಕೆಯಲ್ಲಿ ಶೇಖ್ ಮಹಮ್ಮದ್ ಖಾನ್ ಎಂಬ ಮೇಲ್ವಿಚಾರಕನ ಉಸ್ತುವಾರಿಯಲ್ಲಿ ಬಹದ್ದೂರ್ ಬಂಡೆ ಕೋಟೆ ನಿರ್ಮಿಸಲಾಯಿತು. 1782ರಲ್ಲಿ ಮರಾಠರು ಮತ್ತು ನಿಜಾಮರು ತಮ್ಮ ಸೈನ್ಯದ ಜೊತೆ ಬಹದ್ದೂರ್ ಬಂಡಿ ಕೋಟೆಯ ಮೇಲೆ ದಾಳಿ ನಡೆಸಿದರು.</p>.<p>ಈ ಕೋಟೆಯನ್ನು ಕ್ರಿ.ಶ. 1786ರಲ್ಲಿ ಟಿಪ್ಪು ಸುಲ್ತಾನ ಮುತ್ತಿಗೆ ಹಾಕಿ ವಶಪಡಿಸಿಕೊಂಡ. ಆನಂತರ ಫ್ರೆಂಚ್ ಎಂಜಿನಿಯರ್ಗಳ ನೆರವಿನಿಂದ ಕ್ರಿ.ಶ. 1790 ರಲ್ಲಿ ಕೋಟೆ ಉನ್ನತೀಕರಿಸಲಾಯಿತು’ ಎಂದು ಇತಿಹಾಸದ ಪುಟಗಳು ಹೇಳುತ್ತವೆ.</p>.<p>ಸ್ವಾತಂತ್ರ್ಯ ಹೋರಾಟಕ್ಕೆ ನೆರವಾದ ಹಿನ್ನೆಲೆ ಹೊಂದಿರುವ ಈ ಕೋಟೆ ಕೊಪ್ಪಳ ನಗರದಿಂದ ನಾಲ್ಕು ಕಿ.ಮೀ. ದೂರದಲ್ಲಿದೆ. ಪ್ರಮುಖ ಆಕರ್ಷಣೆಯ ತಾಣವೂ ಆಗಿದೆ.</p>.<p>ಎರಡು ಸುತ್ತಿನಲ್ಲಿ ಕೋಟೆ ಕಟ್ಟಲಾಗಿದೆ. ಚೌಕಾಕಾರದ ದಪ್ಪನೆಯ ಕಲ್ಲುಗಳನ್ನು ಬಳಸಲಾಗಿದೆ. ಬಾಗಿಲಿನ ಪಶ್ಚಿಮದ ಬಂಡೆಯೊಂದರ ಮೇಲೆ ಅರೇಬಿಕ್ ಶಾಸನವಿದೆ. ವೈರಿಯ ಕಣ್ಣಿಗೆ ಕಾಣದಂತೆ ಅಡಗಿಕೊಂಡು ಯುದ್ಧ ಮಾಡುವ ತಂತ್ರದ ಕಾರಣಕ್ಕಾಗಿ ‘ನಿಟು’ಗಳನ್ನು ನಿರ್ಮಿಸಲಾಗಿದೆ.</p>.<p>ಕೋಟೆಯಲ್ಲಿ ಕೊಳಗಳು ಇವೆ. ಕೊಪ್ಪಳ ಜಿಲ್ಲೆಯ ಬಹದ್ದೂರ ಬಂಡಿ ಕೋಟೆ ನಿಜಾಮರ ಜತೆಗಿನ ಹೋರಾಟವಷ್ಟೇ ಅಲ್ಲ, ರೈತ ಬಂಡಾಯದ ಮೂಲಕ ನಡೆದ ಸ್ವಾತಂತ್ರ್ಯ ಹೋರಾಟಕ್ಕೂ ಸಾಕ್ಷಿಯಾಗಿ ನಿಂತಿದೆ ಎನ್ನುತ್ತಾರೆ ಇತಿಹಾಸ ತಜ್ಞರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>