‘ಉದ್ರಿ ಹೇಳಿ ಕೆರೆ ಮಣ್ಣು, ಕಟ್ಟಿಗೆ ತಂದಿವಿ. ಮಣ್ಣಿಗೆ ಸೇರಿಸುವ ಕಟುಗ (ಜಿಗಟು ಮಣ್ಣು), ಕೂಲಿ ಆಳು, ದಿನದ ಖರ್ಚು ಹೀಗೆಲ್ಲ ಮೈಮ್ಯಾಲೆ ಬಂದಾವ್ರಿ, ಸಂತಿ ಚಾಲು ಆದ್ರ ನಮಗ ತೊಂದರೆ ಇಲ್ರಿ. ಮೂರು ತಿಂಗಳದಿಂದ ಕೈಯಾಗ ನಯಾಪೈಸೆ ಇಲ್ಲದೆ ಬದುಕು ನಡೆಸುವ ಕಷ್ಟ ನಮ್ಮದಾಗೈತೆ' ಎಂದು ಫಕೀರಪ್ಪ ಕುಂಬಾರ ಹಾಗೂ ಶಾಂತಮ್ಮ ಅವರು ಅಳಲು ತೋಡಿಕೊಂಡರು.