<p><strong>ಕೊಪ್ಪಳ:</strong> ಕರ್ತವ್ಯ ಲೋಪದ ಆರೋಪದ ಮೇರೆಗೆ ಮೂರು ತಿಂಗಳ ಹಿಂದೆ ಅಮಾನತಾಗಿದ್ದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಕೊಪ್ಪಳ ಘಟಕದ ಚಾಲಕ ಕಂ ನಿರ್ವಾಹಕ ಮುತ್ತುರಾಜ ಕುಲಕರ್ಣಿ ಅವರ ಅಮಾನತು ರದ್ದುಪಡಿಸಿದ ಅಧಿಕಾರಿಗಳು, ಅವರನ್ನು ಸನ್ಮಾನಿಸಿ ಕೆಲಸಕ್ಕೆ ನಿಯೋಜಿಸಿದರು.</p>.<p>‘ಅಮಾನತು ಆದೇಶ ವಾಪಸ್ ಪಡೆದು ಕೆಲಸಕ್ಕೆ ನಿಯೋಜಿಸುವಂತೆ ಎರಡು ತಿಂಗಳಿನಿಂದಕಚೇರಿಗೆ ಅಲೆದರೂ ಪ್ರಯೋಜನವಾಗಿರಲಿಲ್ಲ. ಆದರೆ, ಮಂಗಳವಾರ ಕೆಲಸಕ್ಕೆ ಹಾಜರಾದರೆ ಅಮಾನತು ಆದೇಶ ರದ್ದುಪಡಿಸುವುದಾಗಿ ಅಧಿಕಾರಿಗಳು ಹೇಳಿದ್ದರಿಂದ ಕೆಲಸಕ್ಕೆ ಹಾಜರಾಗಿದ್ದೇನೆ’ ಎಂದು ಮುತ್ತುರಾಜ ಪ್ರತಿಕ್ರಿಯಿಸಿದರು.</p>.<p>ಹೊಸಪೇಟೆ ಮಾರ್ಗದ ಬಸ್ನಲ್ಲಿ ಮುತ್ತುರಾಜ ಕಾರ್ಯನಿರ್ವಹಿಸಿದರು.</p>.<p><strong>‘6ನೇ ವೇತನ ಆಯೋಗದ ಶಿಫಾರಸು ಜಾರಿ ಇಲ್ಲ’<br />ರಾಮನಗರ:</strong> ಕೆಎಸ್ಆರ್ಟಿಸಿ ನೌಕರರಿಗೆ ಆರನೇ ವೇತನ ಆಯೋಗದಂತೆ ವೇತನ ನೀಡಲು ಆಗದು. ಶೇ 8ರಷ್ಟು ವೇತನ ಹೆಚ್ಚಳಕ್ಕೆ ಒಪ್ಪಿ ಸಾರಿಗೆ ನೌಕರರು ಕೆಲಸಕ್ಕೆ ಹಾಜರಾಗಬೇಕು ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.</p>.<p>ನಗರದಲ್ಲಿ ಬುಧವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ಕೆಎಸ್ಆರ್ಟಿಸಿ ಒಂದು ಸ್ವಾಯತ್ತ ಸಂಸ್ಥೆ. ಹೀಗಾಗಿ ಅವುಗಳ ಆದಾಯ ಆಧರಿಸಿ ವೇತನ ನೀಡಲು ಸಾಧ್ಯ’ ಎಂದರು.</p>.<p><strong>ಕೆಎಸ್ಆರ್ಟಿಸಿ ಖಾಸಗೀಕರಣ ಇಲ್ಲ:</strong> ‘ಸಂಸ್ಥೆ ಲಾಭದಲ್ಲಿ ನಡೆದರೆ ಕಾರ್ಮಿಕರಿಗೆ ಅನುಕೂಲ ಆಗಲಿದೆ. ಕೆಎಸ್ಆರ್ಟಿಸಿಯನ್ನು ಖಾಸಗೀಕರಣ ಮಾಡಲು ಸರ್ಕಾರ ಮುಂದಾಗಿಲ್ಲ. ಆದರೆ, ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಖಾಸಗಿ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ’ ಎಂದು ಅವರು ಸ್ಪಷ್ಟನೆ ನೀಡಿದರು.</p>.<p><strong>‘ಸಂಬಳ ಸಾಕಾಗದಿದ್ದರೆ ಕೆಲಸ ಬಿಡಲಿ’</strong><br />ತಿಪಟೂರು: ಸಾರಿಗೆ ನೌಕರರ ಮುಷ್ಕರದಿಂದ ಬಸ್ ಇಲ್ಲ ಎಂದು ಕರೆ ಮಾಡಿದ ಪ್ರಯಾಣಿಕನಿಗೆ ‘ಸಾರಿಗೆ ನೌಕರರಿಗೆ ಸಂಬಳ ಸಾಕಾಗದಿದ್ದರೆ ಕೆಲಸ ಬಿಡಲಿ’ ಎಂದು ತಿಪಟೂರು ಶಾಸಕ ಬಿ.ಸಿ.ನಾಗೇಶ್ ಹೇಳಿರುವ ಆಡಿಯೊ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.</p>.<p>ಪ್ರಯಾಣಿಕರೊಬ್ಬರು ತಿಪಟೂರಿನಿಂದ ಚನ್ನರಾಯಪಟ್ಟಣಕ್ಕೆ ತೆರಳಲು ಬಸ್ ಇಲ್ಲ ಎಂದು ಕರೆ ಮಾಡಿದಾಗ, ‘ಯಾರದ್ದೋ ಮಾತು ಕೇಳಿ ಪ್ರತಿಭಟನೆ ಮಾಡುತ್ತಿರುವ ಕಂಡಕ್ಟರನ್ನು ಹಿಡಿದು ಹೊಡೆಯಿರಿ’ ಎಂದು ಹೇಳಿದ್ದಾರೆ.</p>.<p>‘ಕೋವಿಡ್ ಸಂದರ್ಭದಲ್ಲಿ ಮನೆಯಲ್ಲಿದ್ದವರಿಗೆ ಸಂಬಳ ಕೊಡಲಾಗಿದೆ. ಚುನಾವಣೆ ನಂತರ ಸಂಬಳ ಏರಿಕೆ ಮಾಡುವುದಾಗಿ ತಿಳಿಸಿದ್ದರೂ ಪ್ರತಿಭಟನೆ ಮಾಡಿದರೆ ಏನು ಮಾಡುವುದು. ಕೆಲಸ ಬಿಟ್ಟರೆ ಇತರರಿಗಾದರೂ ಕೆಲಸ ಸಿಗುತ್ತದೆ’ ಎಂದು ಹೇಳಿರುವುದು ಆಡಿಯೊದಲ್ಲಿದೆ.</p>.<p><strong>21 ನೌಕರರ ವಿರುದ್ಧ ಎಫ್ಐಆರ್</strong><br />ಸಾರಿಗೆ ನೌಕರರ ಮುಷ್ಕರಕ್ಕೆ ಬೆಂಬಲ ನೀಡಿದ್ದಕ್ಕೆ ಮುಂಜಾಗ್ರತಾ ಕ್ರಮವಾಗಿ ಮತ್ತು ಶಾಂತಿ ಪಾಲನೆಗಾಗಿ ಕುಷ್ಟಗಿ ಸಾರಿಗೆ ಘಟಕದ 21 ನೌಕರರ ವಿರುದ್ಧ ಎಫ್ಐಆರ್ ದಾಖಲಾಗಿದೆ.</p>.<p>ನೌಕರರನ್ನು ತಾಲ್ಲೂಕು ದಂಡಾಧಿಕಾರಿ ಎದುರು ಹಾಜರುಪಡಿಸಿ, ನಂತರ ಬಿಡಲಾಗಿದೆಎಂದು ಕುಷ್ಟಗಿ ಠಾಣೆ ಸಬ್ಇನ್ಸ್ಪೆಕ್ಟರ್ ತಿಮ್ಮಣ್ಣ ನಾಯಕ ತಿಳಿಸಿದರು.</p>.<p>ಈ ಕುರಿತು ಮಾಹಿತಿ ನೀಡಿದ ತಹಶೀಲ್ದಾರ್ ಎಂ.ಸಿದ್ದೇಶ, ‘ಕೆಲ ನೌಕರರನ್ನು ಪೊಲೀಸರು ಹಾಜರುಪಡಿಸಿದ್ದರು. ಅವರು ಕರ್ತವ್ಯಕ್ಕೆ ಹಾಜರಾಗುತ್ತೇವೆ ಎಂದು ಒಪ್ಪಿದ್ದರಿಂದ ಅವರಿಂದ ಮುಚ್ಚಳಿಕೆ ಬರೆಸಿಕೊಂಡಿಲ್ಲ’ ಎಂದರು.</p>.<p>‘ಒಬ್ಬರು ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದರೆ, ಉಳಿದವರು ಗೈರಾಗಿದ್ದರು’ ಎಂದು ಘಟಕ ವ್ಯವಸ್ಥಾಪಕ ಸಂತೋಷ್ಕುಮಾರ್ ಶೆಟ್ಟಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ:</strong> ಕರ್ತವ್ಯ ಲೋಪದ ಆರೋಪದ ಮೇರೆಗೆ ಮೂರು ತಿಂಗಳ ಹಿಂದೆ ಅಮಾನತಾಗಿದ್ದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಕೊಪ್ಪಳ ಘಟಕದ ಚಾಲಕ ಕಂ ನಿರ್ವಾಹಕ ಮುತ್ತುರಾಜ ಕುಲಕರ್ಣಿ ಅವರ ಅಮಾನತು ರದ್ದುಪಡಿಸಿದ ಅಧಿಕಾರಿಗಳು, ಅವರನ್ನು ಸನ್ಮಾನಿಸಿ ಕೆಲಸಕ್ಕೆ ನಿಯೋಜಿಸಿದರು.</p>.<p>‘ಅಮಾನತು ಆದೇಶ ವಾಪಸ್ ಪಡೆದು ಕೆಲಸಕ್ಕೆ ನಿಯೋಜಿಸುವಂತೆ ಎರಡು ತಿಂಗಳಿನಿಂದಕಚೇರಿಗೆ ಅಲೆದರೂ ಪ್ರಯೋಜನವಾಗಿರಲಿಲ್ಲ. ಆದರೆ, ಮಂಗಳವಾರ ಕೆಲಸಕ್ಕೆ ಹಾಜರಾದರೆ ಅಮಾನತು ಆದೇಶ ರದ್ದುಪಡಿಸುವುದಾಗಿ ಅಧಿಕಾರಿಗಳು ಹೇಳಿದ್ದರಿಂದ ಕೆಲಸಕ್ಕೆ ಹಾಜರಾಗಿದ್ದೇನೆ’ ಎಂದು ಮುತ್ತುರಾಜ ಪ್ರತಿಕ್ರಿಯಿಸಿದರು.</p>.<p>ಹೊಸಪೇಟೆ ಮಾರ್ಗದ ಬಸ್ನಲ್ಲಿ ಮುತ್ತುರಾಜ ಕಾರ್ಯನಿರ್ವಹಿಸಿದರು.</p>.<p><strong>‘6ನೇ ವೇತನ ಆಯೋಗದ ಶಿಫಾರಸು ಜಾರಿ ಇಲ್ಲ’<br />ರಾಮನಗರ:</strong> ಕೆಎಸ್ಆರ್ಟಿಸಿ ನೌಕರರಿಗೆ ಆರನೇ ವೇತನ ಆಯೋಗದಂತೆ ವೇತನ ನೀಡಲು ಆಗದು. ಶೇ 8ರಷ್ಟು ವೇತನ ಹೆಚ್ಚಳಕ್ಕೆ ಒಪ್ಪಿ ಸಾರಿಗೆ ನೌಕರರು ಕೆಲಸಕ್ಕೆ ಹಾಜರಾಗಬೇಕು ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.</p>.<p>ನಗರದಲ್ಲಿ ಬುಧವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ಕೆಎಸ್ಆರ್ಟಿಸಿ ಒಂದು ಸ್ವಾಯತ್ತ ಸಂಸ್ಥೆ. ಹೀಗಾಗಿ ಅವುಗಳ ಆದಾಯ ಆಧರಿಸಿ ವೇತನ ನೀಡಲು ಸಾಧ್ಯ’ ಎಂದರು.</p>.<p><strong>ಕೆಎಸ್ಆರ್ಟಿಸಿ ಖಾಸಗೀಕರಣ ಇಲ್ಲ:</strong> ‘ಸಂಸ್ಥೆ ಲಾಭದಲ್ಲಿ ನಡೆದರೆ ಕಾರ್ಮಿಕರಿಗೆ ಅನುಕೂಲ ಆಗಲಿದೆ. ಕೆಎಸ್ಆರ್ಟಿಸಿಯನ್ನು ಖಾಸಗೀಕರಣ ಮಾಡಲು ಸರ್ಕಾರ ಮುಂದಾಗಿಲ್ಲ. ಆದರೆ, ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಖಾಸಗಿ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ’ ಎಂದು ಅವರು ಸ್ಪಷ್ಟನೆ ನೀಡಿದರು.</p>.<p><strong>‘ಸಂಬಳ ಸಾಕಾಗದಿದ್ದರೆ ಕೆಲಸ ಬಿಡಲಿ’</strong><br />ತಿಪಟೂರು: ಸಾರಿಗೆ ನೌಕರರ ಮುಷ್ಕರದಿಂದ ಬಸ್ ಇಲ್ಲ ಎಂದು ಕರೆ ಮಾಡಿದ ಪ್ರಯಾಣಿಕನಿಗೆ ‘ಸಾರಿಗೆ ನೌಕರರಿಗೆ ಸಂಬಳ ಸಾಕಾಗದಿದ್ದರೆ ಕೆಲಸ ಬಿಡಲಿ’ ಎಂದು ತಿಪಟೂರು ಶಾಸಕ ಬಿ.ಸಿ.ನಾಗೇಶ್ ಹೇಳಿರುವ ಆಡಿಯೊ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.</p>.<p>ಪ್ರಯಾಣಿಕರೊಬ್ಬರು ತಿಪಟೂರಿನಿಂದ ಚನ್ನರಾಯಪಟ್ಟಣಕ್ಕೆ ತೆರಳಲು ಬಸ್ ಇಲ್ಲ ಎಂದು ಕರೆ ಮಾಡಿದಾಗ, ‘ಯಾರದ್ದೋ ಮಾತು ಕೇಳಿ ಪ್ರತಿಭಟನೆ ಮಾಡುತ್ತಿರುವ ಕಂಡಕ್ಟರನ್ನು ಹಿಡಿದು ಹೊಡೆಯಿರಿ’ ಎಂದು ಹೇಳಿದ್ದಾರೆ.</p>.<p>‘ಕೋವಿಡ್ ಸಂದರ್ಭದಲ್ಲಿ ಮನೆಯಲ್ಲಿದ್ದವರಿಗೆ ಸಂಬಳ ಕೊಡಲಾಗಿದೆ. ಚುನಾವಣೆ ನಂತರ ಸಂಬಳ ಏರಿಕೆ ಮಾಡುವುದಾಗಿ ತಿಳಿಸಿದ್ದರೂ ಪ್ರತಿಭಟನೆ ಮಾಡಿದರೆ ಏನು ಮಾಡುವುದು. ಕೆಲಸ ಬಿಟ್ಟರೆ ಇತರರಿಗಾದರೂ ಕೆಲಸ ಸಿಗುತ್ತದೆ’ ಎಂದು ಹೇಳಿರುವುದು ಆಡಿಯೊದಲ್ಲಿದೆ.</p>.<p><strong>21 ನೌಕರರ ವಿರುದ್ಧ ಎಫ್ಐಆರ್</strong><br />ಸಾರಿಗೆ ನೌಕರರ ಮುಷ್ಕರಕ್ಕೆ ಬೆಂಬಲ ನೀಡಿದ್ದಕ್ಕೆ ಮುಂಜಾಗ್ರತಾ ಕ್ರಮವಾಗಿ ಮತ್ತು ಶಾಂತಿ ಪಾಲನೆಗಾಗಿ ಕುಷ್ಟಗಿ ಸಾರಿಗೆ ಘಟಕದ 21 ನೌಕರರ ವಿರುದ್ಧ ಎಫ್ಐಆರ್ ದಾಖಲಾಗಿದೆ.</p>.<p>ನೌಕರರನ್ನು ತಾಲ್ಲೂಕು ದಂಡಾಧಿಕಾರಿ ಎದುರು ಹಾಜರುಪಡಿಸಿ, ನಂತರ ಬಿಡಲಾಗಿದೆಎಂದು ಕುಷ್ಟಗಿ ಠಾಣೆ ಸಬ್ಇನ್ಸ್ಪೆಕ್ಟರ್ ತಿಮ್ಮಣ್ಣ ನಾಯಕ ತಿಳಿಸಿದರು.</p>.<p>ಈ ಕುರಿತು ಮಾಹಿತಿ ನೀಡಿದ ತಹಶೀಲ್ದಾರ್ ಎಂ.ಸಿದ್ದೇಶ, ‘ಕೆಲ ನೌಕರರನ್ನು ಪೊಲೀಸರು ಹಾಜರುಪಡಿಸಿದ್ದರು. ಅವರು ಕರ್ತವ್ಯಕ್ಕೆ ಹಾಜರಾಗುತ್ತೇವೆ ಎಂದು ಒಪ್ಪಿದ್ದರಿಂದ ಅವರಿಂದ ಮುಚ್ಚಳಿಕೆ ಬರೆಸಿಕೊಂಡಿಲ್ಲ’ ಎಂದರು.</p>.<p>‘ಒಬ್ಬರು ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದರೆ, ಉಳಿದವರು ಗೈರಾಗಿದ್ದರು’ ಎಂದು ಘಟಕ ವ್ಯವಸ್ಥಾಪಕ ಸಂತೋಷ್ಕುಮಾರ್ ಶೆಟ್ಟಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>