ಯಲಬುರ್ಗಾದಲ್ಲಿ ಕುಷ್ಟಗಿ ಕ್ಷೇತ್ರದ ಸಭೆ!
ಕುಷ್ಟಗಿ ವಿಧಾನಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕೃಷ್ಣಾ ಭಾಗ್ಯ ಜಲ ನಿಗಮದ ಕೆರೆ ತುಂಬಿಸುವ ಯೋಜನೆಯ ಪ್ರಗತಿ ಪರಿಶೀಲನೆಯನ್ನು ಪಟ್ಟಣದಲ್ಲಿಯೇ ನಡೆಸಬಹುದಾಗಿದ್ದರೂ ಯಲಬುರ್ಗಾ ಕ್ಷೇತ್ರದ ಹಿರೇವಂಕಲಕುಂಟಾ ಬಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಪ್ರವಾಸಿ ಮಂದಿರದಲ್ಲಿ ನಡೆಸಿದ್ದು ಚರ್ಚೆಗೆ ಗ್ರಾಸ ಒದಗಿಸಿತು. ವಿಶೇಷ ಭೂ ಸ್ವಾಧೀನ ಅಧಿಕಾರಿಗಳು ಕೆಬಿಜೆಎನ್ಎಲ್ ಹಿರಿಯ ಎಂಜಿನಿಯರ್ಗಳು ಬಂದಿದ್ದರಿಂದ ಇಲ್ಲಿಯ ರೈತರು ತಮ್ಮ ಅಹವಾಲುಗಳನ್ನು ಹೇಳಿಕೊಳ್ಳುವುದಕ್ಕೆ ಅನುಕೂಲವಾಗುತ್ತಿತ್ತು. ಅಲ್ಲದೆ ದೂರದ ಪ್ರದೇಶದಲ್ಲಿ ಸಭೆ ಇರುವುದು ಬಹುತೇಕ ರೈತರಿಗೆ ಗೊತ್ತಾಗಲಿಲ್ಲ ಗೊತ್ತಿದ್ದರೂ ಅಲ್ಲಿಗೆ ಹೋಗಲು ಸಾಧ್ಯವಾಗಲಿಲ್ಲ ಎಂದು ಕೆಲ ರೈತರು ನಂತರ ಅಸಮಾಧಾನ ಹೊರಹಾಕಿದರು.