<p><strong>ಗಂಗಾವತಿ:</strong> ಭರಪೂರ ನುಗ್ಗೆ ಬೆಳೆದಿದ್ದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಅರಳಹಳ್ಳಿ ಗ್ರಾಮದ ರೈತರೊಬ್ಬರು ಲಾಕ್ಡೌನ್ ನಡುವೆಯೂ ಲಾಭ ಕಂಡಿದ್ದಾರೆ. ರೈತ ಬಸವರಾಜ್ ಅವರಿಗೆ ಲಕ್ಷಗಟ್ಟಲೇ ಆದಾಯ ತಂದುಕೊಡುವಲ್ಲಿ ತೋಟಗಾರಿಕೆ ಇಲಾಖೆಯೂ ಪ್ರಮುಖ ಪಾತ್ರ ವಹಿಸಿದೆ.</p>.<p>ಕೇಸರಹಟ್ಟಿ ಗ್ರಾಮದ ಶರಣಪ್ಪ ಎಂಬುವವರಿಗೆ ಸೇರಿದ ಐದು ಎಕರೆ ಭೂಮಿಯನ್ನು ಗುತ್ತಿಗೆ ಪಡೆದ ರೈತ ಬಸವರಾಜ್ ಅವರು ತೋಟಗಾರಿಕೆ ಇಲಾಖೆಯ ಮಾರ್ಗದರ್ಶನದಲ್ಲಿ ಪಿಕೆಎಂ-ಒನ್ ಎಂಬ ತಳಿ ನಾಟಿ ಮಾಡಿದ್ದರು. ಹನಿ ನೀರಾವರಿ ಪದ್ಧತಿ ಅಳವಡಿಸಿದಲ್ಲದೇ ಸಾವಯವ ಗೊಬ್ಬರದ ಮೂಲಕ ನುಗ್ಗೆ ಬೆಳೆದಿದ್ದರು.</p>.<p>ನುಗ್ಗೆ ಇಳುವರಿ ಬಂದ ಸಮಯದಲ್ಲೇ ಲಾಕ್ಡೌನ್ ಜಾರಿಯಾಯಿತು. ಹಲವು ರೈತರು ಮಾರುಕಟ್ಟೆ ಇಲ್ಲದೆ ಸಂಕಷ್ಟ ಅನುಭವಿಸಿದರು. ಆದರೆ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಬಸವರಾಜ್, ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಇಲಾಖೆಯ ಅಧಿಕಾರಿಗಳು ನೆರವಿಗೆ ಧಾವಿಸಿದಲ್ಲದೇ ಮಾರುಕಟ್ಟೆಯ ವ್ಯವಸ್ಥೆ ಮಾಡಿದರು.</p>.<p><strong>ಲಾಕ್ಡೌನ್ನಲ್ಲಿಯೇ 70 ಟನ್ ನುಗ್ಗೆ ಮಾರಾಟ:</strong> ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ನೆರವಿನಿಂದ ಬೆಳಗಾವಿ, ಬೆಂಗಳೂರು, ರಾಯಚೂರು, ಸಿಂಧನೂರು, ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳಿಗೆ 70 ಟನ್ಗಿಂತ ಅಧಿಕ ನುಗ್ಗೆ ರಫ್ತು ಮಾಡಿದ್ದಾರೆ.</p>.<p>’ಡಿಸೆಂಬರ್ ಹಾಗೂ ಜನವರಿಯಲ್ಲಿ ಕೆ.ಜಿಗೆ ₹60 ರಿಂದ ₹70 ರೂಪಾಯಿಯಂತೆ ನುಗ್ಗೆ ಮಾರಾಟ ಮಾಡಿದ್ದೆವು. ಸದ್ಯ ಕೆ.ಜಿ.ಗೆ ₹25 ರಿಂದ ₹30 ರೂಪಾಯಿಗೆ ಮಾರಾಟ ಮಾಡಿದೆವು. ಇದರಿಂದ ಏಳರಿಂದ ಎಂಟು ಲಕ್ಷ ಆದಾಯ ಸಿಕ್ಕಿದೆ. ಕೊರೊನಾದಿಂದ ನಮಗೆ ಲಾಭವಾಗಿದೆ ಹೊರತು ನಷ್ಟವಾಗಿಲ್ಲ‘ ಎನ್ನುತ್ತಾರೆ ರೈತ ಬಸವರಾಜ್.</p>.<p>*<br />ಕೊರೊನಾ ಲಾಕ್ಡೌನ್ನಿಂದಾಗಿ ಮಾರುಕಟ್ಟೆ ಇರದೇ ಇದ್ದಾಗ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ನೆರವಿಗೆ ಧಾವಿಸಿ ಮಾರುಕಟ್ಟೆ ಒದಗಿಸಿದ ಪರಿಣಾಮ ಆಧಿಕ ಲಾಭ ಗಳಿಸಲು ಸಾಧ್ಯವಾಗಿದೆ.<br /><em><strong>-ಬಸವರಾಜ್, ರೈತ ಅರಳಹಳ್ಳಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ:</strong> ಭರಪೂರ ನುಗ್ಗೆ ಬೆಳೆದಿದ್ದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಅರಳಹಳ್ಳಿ ಗ್ರಾಮದ ರೈತರೊಬ್ಬರು ಲಾಕ್ಡೌನ್ ನಡುವೆಯೂ ಲಾಭ ಕಂಡಿದ್ದಾರೆ. ರೈತ ಬಸವರಾಜ್ ಅವರಿಗೆ ಲಕ್ಷಗಟ್ಟಲೇ ಆದಾಯ ತಂದುಕೊಡುವಲ್ಲಿ ತೋಟಗಾರಿಕೆ ಇಲಾಖೆಯೂ ಪ್ರಮುಖ ಪಾತ್ರ ವಹಿಸಿದೆ.</p>.<p>ಕೇಸರಹಟ್ಟಿ ಗ್ರಾಮದ ಶರಣಪ್ಪ ಎಂಬುವವರಿಗೆ ಸೇರಿದ ಐದು ಎಕರೆ ಭೂಮಿಯನ್ನು ಗುತ್ತಿಗೆ ಪಡೆದ ರೈತ ಬಸವರಾಜ್ ಅವರು ತೋಟಗಾರಿಕೆ ಇಲಾಖೆಯ ಮಾರ್ಗದರ್ಶನದಲ್ಲಿ ಪಿಕೆಎಂ-ಒನ್ ಎಂಬ ತಳಿ ನಾಟಿ ಮಾಡಿದ್ದರು. ಹನಿ ನೀರಾವರಿ ಪದ್ಧತಿ ಅಳವಡಿಸಿದಲ್ಲದೇ ಸಾವಯವ ಗೊಬ್ಬರದ ಮೂಲಕ ನುಗ್ಗೆ ಬೆಳೆದಿದ್ದರು.</p>.<p>ನುಗ್ಗೆ ಇಳುವರಿ ಬಂದ ಸಮಯದಲ್ಲೇ ಲಾಕ್ಡೌನ್ ಜಾರಿಯಾಯಿತು. ಹಲವು ರೈತರು ಮಾರುಕಟ್ಟೆ ಇಲ್ಲದೆ ಸಂಕಷ್ಟ ಅನುಭವಿಸಿದರು. ಆದರೆ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಬಸವರಾಜ್, ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಇಲಾಖೆಯ ಅಧಿಕಾರಿಗಳು ನೆರವಿಗೆ ಧಾವಿಸಿದಲ್ಲದೇ ಮಾರುಕಟ್ಟೆಯ ವ್ಯವಸ್ಥೆ ಮಾಡಿದರು.</p>.<p><strong>ಲಾಕ್ಡೌನ್ನಲ್ಲಿಯೇ 70 ಟನ್ ನುಗ್ಗೆ ಮಾರಾಟ:</strong> ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ನೆರವಿನಿಂದ ಬೆಳಗಾವಿ, ಬೆಂಗಳೂರು, ರಾಯಚೂರು, ಸಿಂಧನೂರು, ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳಿಗೆ 70 ಟನ್ಗಿಂತ ಅಧಿಕ ನುಗ್ಗೆ ರಫ್ತು ಮಾಡಿದ್ದಾರೆ.</p>.<p>’ಡಿಸೆಂಬರ್ ಹಾಗೂ ಜನವರಿಯಲ್ಲಿ ಕೆ.ಜಿಗೆ ₹60 ರಿಂದ ₹70 ರೂಪಾಯಿಯಂತೆ ನುಗ್ಗೆ ಮಾರಾಟ ಮಾಡಿದ್ದೆವು. ಸದ್ಯ ಕೆ.ಜಿ.ಗೆ ₹25 ರಿಂದ ₹30 ರೂಪಾಯಿಗೆ ಮಾರಾಟ ಮಾಡಿದೆವು. ಇದರಿಂದ ಏಳರಿಂದ ಎಂಟು ಲಕ್ಷ ಆದಾಯ ಸಿಕ್ಕಿದೆ. ಕೊರೊನಾದಿಂದ ನಮಗೆ ಲಾಭವಾಗಿದೆ ಹೊರತು ನಷ್ಟವಾಗಿಲ್ಲ‘ ಎನ್ನುತ್ತಾರೆ ರೈತ ಬಸವರಾಜ್.</p>.<p>*<br />ಕೊರೊನಾ ಲಾಕ್ಡೌನ್ನಿಂದಾಗಿ ಮಾರುಕಟ್ಟೆ ಇರದೇ ಇದ್ದಾಗ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ನೆರವಿಗೆ ಧಾವಿಸಿ ಮಾರುಕಟ್ಟೆ ಒದಗಿಸಿದ ಪರಿಣಾಮ ಆಧಿಕ ಲಾಭ ಗಳಿಸಲು ಸಾಧ್ಯವಾಗಿದೆ.<br /><em><strong>-ಬಸವರಾಜ್, ರೈತ ಅರಳಹಳ್ಳಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>