‘ಸಾರ್ವಜನಿಕರೂ ಕೈಜೋಡಿಸಲಿ’
ಸಸಿಗಳನ್ನು ನೆಟ್ಟು ಕೆಲವೆಡೆ ರಸ್ತೆಗೆ ಬಾಗಿದ, ಮುರಿದ, ತುಂಡರಿಸಿದ ಬಗ್ಗೆ ಮಾಹಿತಿ ಬಂದಿದೆ. ಈಗಾಗಲೇ ನೂತನ ಮುಖ್ಯಾಧಿಕಾರಿ ಬಳಿ ಚರ್ಚಿಸಲಾಗಿದೆ. ಶೀಘ್ರದಲ್ಲೇ ಸಸಿಗಳ ಬೆಳವಣಿಗೆಗೆ ಬೇಕಾದ ಅಗತ್ಯ ಕ್ರಮ ಹಾಗೂ ಬಿದಿರಿನ ಕಂಬ ಹಾಕಿ ರಕ್ಷಣೆಗೆ ಆದ್ಯತೆ ನೀಡಲಾಗುವುದು. ಸಾರ್ವಜನಿಕರೂ ಸಸಿಗಳ ಪೋಷಣೆಗೆ ಮುಂದಾಗಬೇಕು. ನಮ್ಮೊಂದಿಗೆ ಕೈ ಜೋಡಿಸಬೇಕು ಎಂದು ಪುರಸಭೆ ಅಧ್ಯಕ್ಷೆ ರೇಖಾ ಆನೆಹೊಸೂರು ಮನವಿ ಮಾಡಿದ್ದಾರೆ.