<p><strong>ಕೊಪ್ಪಳ</strong>: ಜಿಲ್ಲೆಯ ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಮದ್ ನಗರದ ಸೀಮೆಯಲ್ಲಿ ವಿಜಯನಗರ ಕಾಲದ ಅವಧಿಯಲ್ಲಿದ್ದವು ಎನ್ನಲಾದ ಶಿಲಾ ವಿಗ್ರಹಗಳು ಮತ್ತು ವೀರಗಲ್ಲುಗಳು ಪತ್ತೆಯಾಗಿವೆ.</p>.<p>ತುಂಗಭದ್ರಾ ನದಿ ಗಡ್ಡೆಯಲ್ಲಿ ರಾಮದೇವರು, ಶಕ್ತಿ ದೇವತೆಯ ಮಂದಿರಗಳನ್ನು ನಿರ್ಮಾಣ ಮಾಡಲಾಗಿದ್ದು, ಕಾಲಗರ್ಭದಲ್ಲಿ ಸಿಲುಕಿ ಇದೀಗ ದೇವಾಲಯಗಳು ಶಿಥಿಲಾವಸ್ಥೆಗೆ ತಲುಪಿವೆ. ಕೋಟೆ ಕೊತ್ತಗಳು, ಹುಡೇವುಗಳಿದ್ದು ಅವುಗಳು ಸಹ ಜೀರ್ಣಾವಸ್ಥೆಗೆ ತಲುಪಿವೆ.</p>.<p>ಯುದ್ಧಕ್ಕೆ ತೆರಳುವ ಸೈನಿಕರ ಚಿತ್ರಗಳುಳ್ಳ ಶಿಲ್ಪಗಳು, ಆಂಜನೇಯನ ವಿಗ್ರಹ, ಕತ್ತಿ ಗುರಾಣಿ ಹಿಡಿದ ಸೈನಿಕರ ಚಿತ್ರವುಳ್ಳ ವೀರಗಲ್ಲುಗಳ ವಿಗ್ರಹಗಳು ಪತ್ತೆಯಾಗಿವೆ. ಈ ನದಿಗಡ್ಡೆಯಲ್ಲಿ ಇಂತಹ ಅಪರೂಪದ ಇನ್ನೂ ಅನೇಕ ವಿಗ್ರಹಗಳು ನೆಲದಲ್ಲಿ ಹುದುಗಿವೆ.</p>.<p>ಈ ಸ್ಥಳದಲ್ಲಿ ಉತ್ಖನನ ನಡೆಸಿದರೆ ಇಲ್ಲಿ ಇನ್ನಷ್ಟು ಅನೇಕ ವಿಗ್ರಹಗಳು ಲಭ್ಯವಾಗುವ ಸಂಭವವಿದೆ. ಪುರಾತನ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳು, ಇತಿಹಾಸ ಸಂಶೋಧಕರು ಇನ್ನಷ್ಟು ಸಂಶೋಧನೆ ನಡೆಸಿದಲ್ಲಿ ಈ ವಿಗ್ರಹಗಳ ನಿಖರ ಕಾಲಮಾನ ತಿಳಿಯಲು ಸಾಧ್ಯವಾಗುತ್ತದೆ ಎಂದು ಸಮಾಜ ಸೇವಕರಾದ ಫಕ್ಕಿರಪ್ಪ ಲಾಚನಕೇರಿ ಮತ್ತು ವೀರಣ್ಣ ಕೋಮಲಾಪುರ ಹೇಳಿದ್ದಾರೆ.</p>.<p>ನದಿ ಗಡ್ಡೆಯ ಸುತ್ತಮುತ್ತಲು ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದು ಅಳಿದುಳಿದ ವಿಗ್ರಹಗಳನ್ನು ಪತ್ತೆ ಹಚ್ಚಿ ರಕ್ಷಣೆ ಮಾಡಿದ್ದಾರೆ. ಈಗ ದೊರೆತಿರುವ ವಿಗ್ರಹಗಳು ಹನುಮಂತ ದೇವರು ಮತ್ತು ರಾಮ ದೇವರ ವಿಗ್ರಹಗಳೆಂದು ಹೇಳಲಾಗುತ್ತಿದ್ದು, ಇತಿಹಾಸ ಸಂಶೋಧಕರು ಇಲ್ಲಿಗೆ ಆಗಮಿಸಿ ಇನ್ನಷ್ಟು ಸಂಶೋಧನೆ ನಡೆಸಬೇಕಿದೆ.</p>.<p>ಬಸವರಾಜ ಹರಿಜನ, ಮಾರ್ಕಂಡಪ್ಪ ಹರಿಜನ, ಹುಲಿಗೆಮ್ಮ ಹರಿಜನ ಮತ್ತು ಬಸವರಾಜ ಹರಿಜನ ಇವರ ಗದ್ದೆಗಳ ಸುತ್ತ ಈ ವಿಗ್ರಹಗಳು ಪತ್ತೆಯಾಗಿವೆ. ಇಲ್ಲಿನ ರೈತರು ಲಭ್ಯವಾದ ವಿಗ್ರಹಗಳನ್ನು ಸಂರಕ್ಷಿಸಿ ಪೂಜಿಸುವ ಮೂಲಕ ರಕ್ಷಣೆ ಮಾಡಿದ್ದು, ಅವರಿಗೆ ಅಭಿನಂದಿಸುವುದಾಗಿ ಹೇಳಿದ ಫಕ್ಕಿರಪ್ಪ ಮತ್ತು ವೀರಣ್ಣ ಅವರು, ಕೊಪ್ಪಳ ಜಿಲ್ಲಾಡಳಿತ ಇಂತಹ ಅಪರೂಪದ ವಿಗ್ರಹಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಬೇಕಾದ ಅಗತ್ಯವಿದೆ ಎಂದೂ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ</strong>: ಜಿಲ್ಲೆಯ ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಮದ್ ನಗರದ ಸೀಮೆಯಲ್ಲಿ ವಿಜಯನಗರ ಕಾಲದ ಅವಧಿಯಲ್ಲಿದ್ದವು ಎನ್ನಲಾದ ಶಿಲಾ ವಿಗ್ರಹಗಳು ಮತ್ತು ವೀರಗಲ್ಲುಗಳು ಪತ್ತೆಯಾಗಿವೆ.</p>.<p>ತುಂಗಭದ್ರಾ ನದಿ ಗಡ್ಡೆಯಲ್ಲಿ ರಾಮದೇವರು, ಶಕ್ತಿ ದೇವತೆಯ ಮಂದಿರಗಳನ್ನು ನಿರ್ಮಾಣ ಮಾಡಲಾಗಿದ್ದು, ಕಾಲಗರ್ಭದಲ್ಲಿ ಸಿಲುಕಿ ಇದೀಗ ದೇವಾಲಯಗಳು ಶಿಥಿಲಾವಸ್ಥೆಗೆ ತಲುಪಿವೆ. ಕೋಟೆ ಕೊತ್ತಗಳು, ಹುಡೇವುಗಳಿದ್ದು ಅವುಗಳು ಸಹ ಜೀರ್ಣಾವಸ್ಥೆಗೆ ತಲುಪಿವೆ.</p>.<p>ಯುದ್ಧಕ್ಕೆ ತೆರಳುವ ಸೈನಿಕರ ಚಿತ್ರಗಳುಳ್ಳ ಶಿಲ್ಪಗಳು, ಆಂಜನೇಯನ ವಿಗ್ರಹ, ಕತ್ತಿ ಗುರಾಣಿ ಹಿಡಿದ ಸೈನಿಕರ ಚಿತ್ರವುಳ್ಳ ವೀರಗಲ್ಲುಗಳ ವಿಗ್ರಹಗಳು ಪತ್ತೆಯಾಗಿವೆ. ಈ ನದಿಗಡ್ಡೆಯಲ್ಲಿ ಇಂತಹ ಅಪರೂಪದ ಇನ್ನೂ ಅನೇಕ ವಿಗ್ರಹಗಳು ನೆಲದಲ್ಲಿ ಹುದುಗಿವೆ.</p>.<p>ಈ ಸ್ಥಳದಲ್ಲಿ ಉತ್ಖನನ ನಡೆಸಿದರೆ ಇಲ್ಲಿ ಇನ್ನಷ್ಟು ಅನೇಕ ವಿಗ್ರಹಗಳು ಲಭ್ಯವಾಗುವ ಸಂಭವವಿದೆ. ಪುರಾತನ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳು, ಇತಿಹಾಸ ಸಂಶೋಧಕರು ಇನ್ನಷ್ಟು ಸಂಶೋಧನೆ ನಡೆಸಿದಲ್ಲಿ ಈ ವಿಗ್ರಹಗಳ ನಿಖರ ಕಾಲಮಾನ ತಿಳಿಯಲು ಸಾಧ್ಯವಾಗುತ್ತದೆ ಎಂದು ಸಮಾಜ ಸೇವಕರಾದ ಫಕ್ಕಿರಪ್ಪ ಲಾಚನಕೇರಿ ಮತ್ತು ವೀರಣ್ಣ ಕೋಮಲಾಪುರ ಹೇಳಿದ್ದಾರೆ.</p>.<p>ನದಿ ಗಡ್ಡೆಯ ಸುತ್ತಮುತ್ತಲು ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದು ಅಳಿದುಳಿದ ವಿಗ್ರಹಗಳನ್ನು ಪತ್ತೆ ಹಚ್ಚಿ ರಕ್ಷಣೆ ಮಾಡಿದ್ದಾರೆ. ಈಗ ದೊರೆತಿರುವ ವಿಗ್ರಹಗಳು ಹನುಮಂತ ದೇವರು ಮತ್ತು ರಾಮ ದೇವರ ವಿಗ್ರಹಗಳೆಂದು ಹೇಳಲಾಗುತ್ತಿದ್ದು, ಇತಿಹಾಸ ಸಂಶೋಧಕರು ಇಲ್ಲಿಗೆ ಆಗಮಿಸಿ ಇನ್ನಷ್ಟು ಸಂಶೋಧನೆ ನಡೆಸಬೇಕಿದೆ.</p>.<p>ಬಸವರಾಜ ಹರಿಜನ, ಮಾರ್ಕಂಡಪ್ಪ ಹರಿಜನ, ಹುಲಿಗೆಮ್ಮ ಹರಿಜನ ಮತ್ತು ಬಸವರಾಜ ಹರಿಜನ ಇವರ ಗದ್ದೆಗಳ ಸುತ್ತ ಈ ವಿಗ್ರಹಗಳು ಪತ್ತೆಯಾಗಿವೆ. ಇಲ್ಲಿನ ರೈತರು ಲಭ್ಯವಾದ ವಿಗ್ರಹಗಳನ್ನು ಸಂರಕ್ಷಿಸಿ ಪೂಜಿಸುವ ಮೂಲಕ ರಕ್ಷಣೆ ಮಾಡಿದ್ದು, ಅವರಿಗೆ ಅಭಿನಂದಿಸುವುದಾಗಿ ಹೇಳಿದ ಫಕ್ಕಿರಪ್ಪ ಮತ್ತು ವೀರಣ್ಣ ಅವರು, ಕೊಪ್ಪಳ ಜಿಲ್ಲಾಡಳಿತ ಇಂತಹ ಅಪರೂಪದ ವಿಗ್ರಹಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಬೇಕಾದ ಅಗತ್ಯವಿದೆ ಎಂದೂ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>