ಬಸವರಾಜ ಹರಿಜನ, ಮಾರ್ಕಂಡಪ್ಪ ಹರಿಜನ, ಹುಲಿಗೆಮ್ಮ ಹರಿಜನ ಮತ್ತು ಬಸವರಾಜ ಹರಿಜನ ಇವರ ಗದ್ದೆಗಳ ಸುತ್ತ ಈ ವಿಗ್ರಹಗಳು ಪತ್ತೆಯಾಗಿವೆ. ಇಲ್ಲಿನ ರೈತರು ಲಭ್ಯವಾದ ವಿಗ್ರಹಗಳನ್ನು ಸಂರಕ್ಷಿಸಿ ಪೂಜಿಸುವ ಮೂಲಕ ರಕ್ಷಣೆ ಮಾಡಿದ್ದು, ಅವರಿಗೆ ಅಭಿನಂದಿಸುವುದಾಗಿ ಹೇಳಿದ ಫಕ್ಕಿರಪ್ಪ ಮತ್ತು ವೀರಣ್ಣ ಅವರು, ಕೊಪ್ಪಳ ಜಿಲ್ಲಾಡಳಿತ ಇಂತಹ ಅಪರೂಪದ ವಿಗ್ರಹಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಬೇಕಾದ ಅಗತ್ಯವಿದೆ ಎಂದೂ ಹೇಳಿದ್ದಾರೆ.