ಸಾಣಾಪುರ (ಗಂಗಾವತಿ): ತಾಲ್ಲೂಕಿನ ಸಾಣಾಪುರ ಗ್ರಾಮದಲ್ಲಿ ಕಳ್ಳರು ಭಾನುವಾರ ಮಧ್ಯರಾತ್ರಿ ಮನೆಯ ಬೀಗ ಮುರಿದು ಕಳ್ಳತನ ಮಾಡಿದ್ದಾರೆ. ಚಿರಂಜೀವಿರಾಮ ಕೋಟಯ್ಯ ಎಂಬುವರಿಗೆ ಈ ಮನೆ ಸೇರಿದ್ದು,ವಿರುಪಾಪುರ ಗಡ್ಡೆಯ ಜಮೀನಿನಲ್ಲಿಯೇ ತರಕಾರಿಬೆಳೆ ಕಾಯಲುಗುಡಿಸಲು ಹಾಕಿಕೊಂಡು ಅಲ್ಲಿಯೇ ವಾಸವಾಗಿದ್ದರು. ಸೋಮವಾರ ಬೆಳಿಗ್ಗೆ ಮನೆಗೆ ಬಂದಾಗ ಕಳ್ಳತನವಾಗಿರುವುದು ತಿಳಿದಿದೆ.