<p><strong>ಹನುಮಸಾಗರ:</strong> ತಾಲೂಕಿನಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ. ಹೋಬಳಿ ಸೇರಿದಂತೆ ಸುತ್ತಲಿನ ಗ್ರಾಮಗಳ ರೈತರು ಆಗ್ರೋ ಕೇಂದ್ರಗಳಿಗೆ ಮುಗಿಬೀಳುತ್ತಿದ್ದಾರೆ. </p>.<p>ಕಡಿಮೆ ದರದಲ್ಲಿ ಯೂರಿಯಾ ಲಭ್ಯವಿರುವುದರಿಂದ ಮೆಕ್ಕೆಜೋಳ, ತೊಗರಿ, ಸಜ್ಜೆ ಬೆಳೆದಿರುವ ರೈತರು ದೊಡ್ಡ ಪ್ರಮಾಣದಲ್ಲಿ ಖರೀದಿಗೆ ಮುಂದಾಗಿದ್ದಾರೆ.</p>.<p>ಗ್ರಾಮದ ಒಂದು ಅಂಗಡಿಯಲ್ಲಿ ಮಾತ್ರ ಗೊಬ್ಬರ ಲಭ್ಯವಿದ್ದು ಪ್ರತಿ ರೈತನಿಗೆ ಎರಡು ಪ್ಯಾಕೆಟ್ ವಿತರಣೆ ಮಾಡಲಾಗಿದೆ. ಬುಧವಾರ ಬೆಳಿಗ್ಗೆ 7 ಗಂಟೆಯಿಂದಲೇ ಅಂಗಡಿ ಮುಂದೆ ಸಾಲು ಕಂಡು ಬಂತು. ಗದ್ದಲ ಹೆಚ್ಚಾದಾಗ ಪೊಲೀಸ್ ಸಿಬ್ಬಂದಿ ರೈತರನ್ನು ಸರದಿಯಲ್ಲಿ ನಿಲ್ಲಿಸಿದರು.</p>.<p>ಇದಕ್ಕೊಂದು ಬದಲಿ ಮಾರ್ಗವಾಗಿ ಡಿಎಪಿ ಹಾಗೂ ಕಾಂಪ್ಲೆಕ್ಸ್ ಗೊಬ್ಬರದ ಬಳಕೆ ಕೂಡಾ ಹೆಚ್ಚಾಗಿದೆ. ಆದರೆ, ಕಾಂಪ್ಲೆಕ್ಸ್ ಹಾಕಿದ ನಂತರ ಯೂರಿಯಾ ಅಗತ್ಯವಿರುವುದರಿಂದ ಇದರ ಬೇಡಿಕೆ ಇನ್ನಷ್ಟು ಜೋರಾಗಿದೆ.</p>.<p>‘ಯೂರಿಯಾ ಮತ್ತು ಫಾಸ್ಫೇಟ್ ಗೊಬ್ಬರಗಳು ನೆಲ ಮತ್ತು ಜೀವಜಾಲಕ್ಕೆ ಹಾನಿಕರ. ರೈತರು ನ್ಯಾನೋ ಗೊಬ್ಬರದತ್ತ ಗಮನ ಹರಿಸಬೇಕು. ಇವು ಕಡಿಮೆ ಪ್ರಮಾಣದಲ್ಲಿಯೇ ಹೆಚ್ಚು ಫಲಿತಾಂಶ ನೀಡಬಹುದಾದ ಶಕ್ತಿಯುತ ಗೊಬ್ಬರಗಳಾಗಿವೆ’ ಎಂದು ಕೃಷಿತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.</p>.<p><strong>ನ್ಯಾನೊ ಯೂರಿಯಾ ಬಳಸಲು ಸಲಹೆ</strong></p>.<p><strong>ಅಳವಂಡಿ:</strong> ‘ನ್ಯಾನೊ ಯೂರಿಯಾ ದ್ರವರೂಪದ ರಸಗೊಬ್ಬರವಾಗಿದ್ದು ಸಾಂಪ್ರದಾಯಿಕ ಯೂರಿಯಾಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಜೀವನ ಸಾಬ್ ಕುಷ್ಟಗಿ ಹೇಳಿದರು.</p><p>ಗ್ರಾಮದ ಎಣ್ಣೆ ಬೀಜ ಸಹಕಾರ ಸಂಘದಲ್ಲಿ ನ್ಯಾನೊ ಯೂರಿಯಾ ಹಾಗೂ ಡಿಎಪಿ ಕುರಿತು ಮಾಹಿತಿ ಹಾಗೂ ರಾಸಾಯನಿಕ ಗೊಬ್ಬರ ಸಂಗ್ರಹ ಕುರಿತು ಪರಿಶೀಲನೆ ನಡೆಸಿ ಮಾತನಾಡಿದರು.</p><p>‘ಸಸ್ಯಗಳಿಗೆ ಸಾರಜನಕ ಒದಗಿಸುತ್ತದೆ. ನ್ಯಾನೊ ಯೂರಿಯಾ ಸಣ್ಣ ಕಣಗಳ ಗಾತ್ರ ಹೊಂದಿದ್ದು ಸಸ್ಯಗಳಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತದೆ. ಪರಿಸರಕ್ಕೆ ಹಾನಿಕಾರಕವಲ್ಲ. ಬೆಳೆಯ ಅಗತ್ಯಕ್ಕೆ ತಕ್ಕಂತೆ ಸರಿಯಾದ ಪ್ರಮಾಣದಲ್ಲಿ ನ್ಯಾನೊ ಯೂರಿಯಾ ಬಳಸಬೇಕು’ ಎಂದರು.</p><p>ಕೃಷಿ ಅಧಿಕಾರಿ ಪ್ರತಾಪಗೌಡ ನಂದನಗೌಡ ಮಾತನಾಡಿ, ‘ರೈತರು ಸಂಪ್ರದಾಯಕ ಯೂರಿಯಾವನ್ನು ಬಿಟ್ಟು ನ್ಯಾನೊ ಯೂರಿಯಾ ಬಳಸಬೇಕು. ಇದು ಇಳುವರಿಯನ್ನು ಹೆಚ್ಚಿಸುತ್ತದೆ ಎಂದು ಸಂಶೋಧನೆ ತೋರಿಸಿದೆ. ಖರ್ಚು ಕಡಿಮೆ ಆಗಲಿದೆ’ ಎಂದರು.</p><p>ರೈತರಾದ ಮಾಂತೇಶ ಇಟಗಿ, ಕರಿಯಪ್ಪ ಮ್ಯಾಗಡಿ, ಸಂಜು ರೆಡ್ಡಿ ನಾಗರಹಳ್ಳಿ, ಬಸವರಾಜ, ಶೇಷರೆಡ್ಡಿ ತವದಿ, ಖಾದರ ಸಾಬ, ವಿರುಪಣ್ಣ ಹಕ್ಕಂಡಿ, ಕೋಟೆಪ್ಪ ಇಟಗಿ, ಸತೀಶರೆಡ್ಡಿ, ಸುರೇಶಗೌಡ ಮಾಲಿ ಪಾಟೀಲ, ಈರಪ್ಪ, ಬಸನಗೌಡ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹನುಮಸಾಗರ:</strong> ತಾಲೂಕಿನಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ. ಹೋಬಳಿ ಸೇರಿದಂತೆ ಸುತ್ತಲಿನ ಗ್ರಾಮಗಳ ರೈತರು ಆಗ್ರೋ ಕೇಂದ್ರಗಳಿಗೆ ಮುಗಿಬೀಳುತ್ತಿದ್ದಾರೆ. </p>.<p>ಕಡಿಮೆ ದರದಲ್ಲಿ ಯೂರಿಯಾ ಲಭ್ಯವಿರುವುದರಿಂದ ಮೆಕ್ಕೆಜೋಳ, ತೊಗರಿ, ಸಜ್ಜೆ ಬೆಳೆದಿರುವ ರೈತರು ದೊಡ್ಡ ಪ್ರಮಾಣದಲ್ಲಿ ಖರೀದಿಗೆ ಮುಂದಾಗಿದ್ದಾರೆ.</p>.<p>ಗ್ರಾಮದ ಒಂದು ಅಂಗಡಿಯಲ್ಲಿ ಮಾತ್ರ ಗೊಬ್ಬರ ಲಭ್ಯವಿದ್ದು ಪ್ರತಿ ರೈತನಿಗೆ ಎರಡು ಪ್ಯಾಕೆಟ್ ವಿತರಣೆ ಮಾಡಲಾಗಿದೆ. ಬುಧವಾರ ಬೆಳಿಗ್ಗೆ 7 ಗಂಟೆಯಿಂದಲೇ ಅಂಗಡಿ ಮುಂದೆ ಸಾಲು ಕಂಡು ಬಂತು. ಗದ್ದಲ ಹೆಚ್ಚಾದಾಗ ಪೊಲೀಸ್ ಸಿಬ್ಬಂದಿ ರೈತರನ್ನು ಸರದಿಯಲ್ಲಿ ನಿಲ್ಲಿಸಿದರು.</p>.<p>ಇದಕ್ಕೊಂದು ಬದಲಿ ಮಾರ್ಗವಾಗಿ ಡಿಎಪಿ ಹಾಗೂ ಕಾಂಪ್ಲೆಕ್ಸ್ ಗೊಬ್ಬರದ ಬಳಕೆ ಕೂಡಾ ಹೆಚ್ಚಾಗಿದೆ. ಆದರೆ, ಕಾಂಪ್ಲೆಕ್ಸ್ ಹಾಕಿದ ನಂತರ ಯೂರಿಯಾ ಅಗತ್ಯವಿರುವುದರಿಂದ ಇದರ ಬೇಡಿಕೆ ಇನ್ನಷ್ಟು ಜೋರಾಗಿದೆ.</p>.<p>‘ಯೂರಿಯಾ ಮತ್ತು ಫಾಸ್ಫೇಟ್ ಗೊಬ್ಬರಗಳು ನೆಲ ಮತ್ತು ಜೀವಜಾಲಕ್ಕೆ ಹಾನಿಕರ. ರೈತರು ನ್ಯಾನೋ ಗೊಬ್ಬರದತ್ತ ಗಮನ ಹರಿಸಬೇಕು. ಇವು ಕಡಿಮೆ ಪ್ರಮಾಣದಲ್ಲಿಯೇ ಹೆಚ್ಚು ಫಲಿತಾಂಶ ನೀಡಬಹುದಾದ ಶಕ್ತಿಯುತ ಗೊಬ್ಬರಗಳಾಗಿವೆ’ ಎಂದು ಕೃಷಿತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.</p>.<p><strong>ನ್ಯಾನೊ ಯೂರಿಯಾ ಬಳಸಲು ಸಲಹೆ</strong></p>.<p><strong>ಅಳವಂಡಿ:</strong> ‘ನ್ಯಾನೊ ಯೂರಿಯಾ ದ್ರವರೂಪದ ರಸಗೊಬ್ಬರವಾಗಿದ್ದು ಸಾಂಪ್ರದಾಯಿಕ ಯೂರಿಯಾಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಜೀವನ ಸಾಬ್ ಕುಷ್ಟಗಿ ಹೇಳಿದರು.</p><p>ಗ್ರಾಮದ ಎಣ್ಣೆ ಬೀಜ ಸಹಕಾರ ಸಂಘದಲ್ಲಿ ನ್ಯಾನೊ ಯೂರಿಯಾ ಹಾಗೂ ಡಿಎಪಿ ಕುರಿತು ಮಾಹಿತಿ ಹಾಗೂ ರಾಸಾಯನಿಕ ಗೊಬ್ಬರ ಸಂಗ್ರಹ ಕುರಿತು ಪರಿಶೀಲನೆ ನಡೆಸಿ ಮಾತನಾಡಿದರು.</p><p>‘ಸಸ್ಯಗಳಿಗೆ ಸಾರಜನಕ ಒದಗಿಸುತ್ತದೆ. ನ್ಯಾನೊ ಯೂರಿಯಾ ಸಣ್ಣ ಕಣಗಳ ಗಾತ್ರ ಹೊಂದಿದ್ದು ಸಸ್ಯಗಳಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತದೆ. ಪರಿಸರಕ್ಕೆ ಹಾನಿಕಾರಕವಲ್ಲ. ಬೆಳೆಯ ಅಗತ್ಯಕ್ಕೆ ತಕ್ಕಂತೆ ಸರಿಯಾದ ಪ್ರಮಾಣದಲ್ಲಿ ನ್ಯಾನೊ ಯೂರಿಯಾ ಬಳಸಬೇಕು’ ಎಂದರು.</p><p>ಕೃಷಿ ಅಧಿಕಾರಿ ಪ್ರತಾಪಗೌಡ ನಂದನಗೌಡ ಮಾತನಾಡಿ, ‘ರೈತರು ಸಂಪ್ರದಾಯಕ ಯೂರಿಯಾವನ್ನು ಬಿಟ್ಟು ನ್ಯಾನೊ ಯೂರಿಯಾ ಬಳಸಬೇಕು. ಇದು ಇಳುವರಿಯನ್ನು ಹೆಚ್ಚಿಸುತ್ತದೆ ಎಂದು ಸಂಶೋಧನೆ ತೋರಿಸಿದೆ. ಖರ್ಚು ಕಡಿಮೆ ಆಗಲಿದೆ’ ಎಂದರು.</p><p>ರೈತರಾದ ಮಾಂತೇಶ ಇಟಗಿ, ಕರಿಯಪ್ಪ ಮ್ಯಾಗಡಿ, ಸಂಜು ರೆಡ್ಡಿ ನಾಗರಹಳ್ಳಿ, ಬಸವರಾಜ, ಶೇಷರೆಡ್ಡಿ ತವದಿ, ಖಾದರ ಸಾಬ, ವಿರುಪಣ್ಣ ಹಕ್ಕಂಡಿ, ಕೋಟೆಪ್ಪ ಇಟಗಿ, ಸತೀಶರೆಡ್ಡಿ, ಸುರೇಶಗೌಡ ಮಾಲಿ ಪಾಟೀಲ, ಈರಪ್ಪ, ಬಸನಗೌಡ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>