ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ವೀರೇಶ ವಿಶ್ವಕರ್ಮ ಮಾತನಾಡಿ,‘ವಿಶ್ವಕರ್ಮ ಈ ಗೋಚರವಾದ ವಿಶ್ವದ ವಿಕಸನಕ್ಕಾಗಿ ತನ್ನನು ಬಲಿಕೊಟ್ಟವನು. ಇಂಥ ಆದರ್ಶ ಪುರುಷರನ್ನು ನಾವು ಸದಾ ನೆನೆಯಬೇಕು. ನಾವೆಲ್ಲರೂ ದೇಶಭಕ್ತಿಯುಳ್ಳ ಸಮಾಜವನ್ನು ನಿರ್ಮಿಸಬೇಕು. ದುಷ್ಟ ಶಕ್ತಿ ನಿಗ್ರಹಿಸಬೇಕು. ಯುವಜನರು ರಾಷ್ಟ್ರೀಯತೆಯನ್ನು ಮೈಗೂಡಿಸಿಕೊಂಡು ಬಲಿಷ್ಠ ರಾಷ್ಟ್ರ ನಿರ್ಮಿಸಲು ಮುಂದೆ ಬರಬೇಕು’ ಎಂದರು.