ಚುನಾವಣೆ ರಣರಂಗವಾಗಬಾರದು. ಪ್ರಜಾಪ್ರಭುತ್ವದ ಆಟವಾಗಬೇಕು. ಹಣ ನೀರಿನಂತೆ ಸುರಿದು ಗೆಲುವು ಸಾಧಿಸಿದ ರಾಜಕಾರಣಿಗಳು ಅನಿವಾರ್ಯವಾಗಿ ಭ್ರಷ್ಟಾಚಾರಕ್ಕೆ ಇಳಿಯುತ್ತಾರೆ. ಹಾಗಾಗಿ, ಮತದಾರು ಪ್ರಜ್ಞಾವಂತರು, ಪ್ರಾಮಾಣಿಕರಿಗೆ ಮಣೆ ಹಾಕಬೇಕು. ಆಮಿಷಕ್ಕೆ ಬಲಿಯಾಗಿ ಅಪ್ರಮಾಣಿಕರ ಆಯ್ಕೆ ಮಾಡಬಾರದು. ಜನ ಜಾಗೃತಿಗಾಗಿಯೇ ಚುನಾವಣಾ ಕಣಕ್ಕೆ ಇಳಿದಿದ್ದೇನೆ ಎಂದರು.