ಕೆ.ಆರ್.ಪೇಟೆ ತಾಲ್ಲೂಕಿನ ಕೂಡಲಕುಪ್ಪೆ ಗ್ರಾಮದ ಯಶಸ್ವಿ ರೈತ ಮಹಿಳೆ ಲಕ್ಷ್ಮಿ ಅವರನ್ನು ಮಂಡ್ಯದಲ್ಲಿ ಶನಿವಾರ ನಡೆದ ‘ಭೂಮಿಕಾ ಕ್ಲಬ್’ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಅತಿಥಿಗಳಾದ ರೈತ ನಾಯಕಿ ಸುನಂದಾ ಜಯರಾಂ ಮಂಡ್ಯ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ರೆಡ್ಕ್ರಾಸ್ ಸೊಸೈಟಿಯ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕಿ ಎಸ್.ಎಚ್. ನಿರ್ಮಲ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ಲೋಕಪಾವನಿ ಮಹಿಳಾ ಸಹಕಾರಿ ಬ್ಯಾಂಕ್ ಅಧ್ಯಕ್ಷೆ ಸುಜಾತಾ ಕೃಷ್ಣ ಪಾಲ್ಗೊಂಡಿದ್ದರು
‘ಭೂಮಿಕಾ ಕ್ಲಬ್’ ಕಾರ್ಯಕ್ರಮದಲ್ಲಿ ವೇಷಭೂಷಣ ಸ್ಪರ್ಧೆಯಲ್ಲಿ ಪಾಲ್ಗೊಂಡ ಮಕ್ಕಳಿಗೆ ಪ್ರಜಾವಾಣಿಯ ಮೈಸೂರು ಬ್ಯೂರೊ ಮುಖ್ಯಸ್ಥ ಕೆ.ನರಸಿಂಹಮೂರ್ತಿ ಅವರು ಪ್ರಮಾಣಪತ್ರ ವಿತರಿಸಿದರು. ಮಕ್ಕಳ ತಾಯಂದಿರು ಇದ್ದಾರೆ
ಭೂಮಿಕಾ ಕ್ಲಬ್ ಕಾರ್ಯಕ್ರಮದಲ್ಲಿ ‘ಫ್ಯಾಷನ್ ಷೋ’ ಪ್ರದರ್ಶಿಸಿದ ಯುವತಿಯರು
ಫ್ರೀಡಂ ಅಡುಗೆ ಎಣ್ಣೆ ‘ಪಾಕ ಸ್ಪರ್ಧೆ’ಯಲ್ಲಿ ಪ್ರೇಕ್ಷಕರ ಮನಗೆದ್ದ ಮದ್ದೂರಿನ ಎಂ.ಸಿ.ಐಶ್ವರ್ಯ ಮತ್ತು ಮಂಡ್ಯದ ಪದ್ಮಾ ಸಾಗರ್
ಭರತನಾಟ್ಯ ಮನಮೋಹಕ ಪ್ರದರ್ಶನ ನೀಡಿದ ಪ್ರಜ್ಞಾ ಜಿ.