<p><strong>ಕೆ.ಆರ್.ಪೇಟೆ:</strong> ತಾಲ್ಲೂಕಿನ ಕೈಗೋನಹಳ್ಳಿ – ಸಾರಂಗಿ –ಗೊರವಿ ಮಾರ್ಗದಲ್ಲಿ ಅಘಲಯಕ್ಕೆ ಹೋಗುವ ಹಾದಿಯಲ್ಲಿ ಶ್ಯಾರಹಳ್ಳಿಯ ಬಳಿ ಹೇಮಾವತಿ ನಾಲೆಯ ಏರಿಗೆ ತಡೆಗೋಡೆ ಇಲ್ಲವಾಗಿದ್ದು ಅಪಾಯಕ್ಕೆ ಆಹ್ವಾನಿಸುತ್ತಿದೆ.</p>.<p>ಈ ಮಾರ್ಗದಲ್ಲಿ ಸರ್ಕಾರಿ ಬಸ್ ಅಘಲಯದ ಸಮೀಪ ಇರುವ ನಾರಾಯಣಪುರಕ್ಕೆ ನಿತ್ಯವೂ ಸಂಚರಿಸುತ್ತದೆ.</p>.<p>ಸಾರಂಗಿ, ಮಾಚಹಳ್ಳಿ, ಶ್ಯಾರಹಳ್ಳಿ, ಹೆತ್ತಗೋನಹಳ್ಳಿ, ಗೊರವಿ ಮಾರ್ಗವಾಗಿ ನಾರಾಯಣಪುರದವರೆಗೆ ಸಂಚರಿಸುವ ಈ ಬಸ್ಸಿನಲ್ಲಿ ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಪ್ರಯಾಣಿಸುತ್ತಾರೆ.</p>.<p>‘ನಾಲೆಯ ಬದಿಯಲ್ಲಿ ತಡೆಗೋಡೆ ನಿರ್ಮಿಸಿ ಎಂಬುದು ಶ್ಯಾರಹಳ್ಳಿ, ಸಾರಂಗಿ, ಗೊರವಿ ಗ್ರಾಮಸ್ಥರ ಬಹುದಿನಗಳ ಬೇಡಿಕೆ. ಆದರೆ ಇವರ ಬೇಡಿಕೆ ಅಧಿಕಾರಿಗಳ ಕಿವಿಗೆ ಕೇಳುತ್ತಲೇ ಇಲ್ಲ’ ಎಂದು ದೂರುತ್ತಾರೆ ಗ್ರಾಮಸ್ಥರಾದ ರಾಮೇಗೌಡ.</p>.<p>‘ಈಚೆಗೆ ಪಾಂಡವಪುರ ತಾಲ್ಲೂಕಿನ ಕನಗನಮರಡಿಯಲ್ಲಿ ನಡೆದ ಬಸ್ ದುರಂತದಿಂದಾಗಿ ಭಯದ ವಾತಾವರಣ ಉಂಟಾಗಿದೆ’ ಎನ್ನುತ್ತಾರೆ ಪ್ರಯಾಣಿಕ ಜಗದೀಶ್. ‘ಈ ದಾರಿಯ ಒಂದು ಭಾಗದಲ್ಲಿ ನೀರಿನಿಂದ ತುಂಬಿರುವ ಕಾಲುವೆ, ಮತ್ತೊಂದು ಭಾಗದಲ್ಲಿ ಆಳವಾದ ಹಳ್ಳವಿದೆ. ರಸ್ತೆಗೆ ತಡೆಗೋಡೆ ಇಲ್ಲ. ರಸ್ತೆ ಕಿರಿದಾಗಿದ್ದು ಆಟೊ ಪ್ರಯಾಣಿಸಲು ಯೋಗ್ಯವಿಲ್ಲದಂತಾಗಿದೆ’ ಎನ್ನುತ್ತಾರೆ ಅವರು.</p>.<p>‘ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ತಡೆಗೋಡೆ ನಿರ್ಮಿಸಲು ಚಿಂತಿಸಬೇಕು. ಅಪಘಾತವಾದ ನಂತರ ಕ್ರಮ ಕೈಗೊಳ್ಳುವ ಬದಲು ಈಗಲೇ ಕ್ರಮ ವಹಿಸಿ ರಸ್ತೆ ದುರಸ್ತಿಗೊಳಿಸಿದರೆ ಸಾರ್ವಜನಿಕರು ನಿರಾಳವಾಗಿ ಪ್ರಯಾಣಿಸಬಹುದು’ ಎನ್ನುತ್ತಾರೆ ಗ್ರಾಮಸ್ಥರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆ.ಆರ್.ಪೇಟೆ:</strong> ತಾಲ್ಲೂಕಿನ ಕೈಗೋನಹಳ್ಳಿ – ಸಾರಂಗಿ –ಗೊರವಿ ಮಾರ್ಗದಲ್ಲಿ ಅಘಲಯಕ್ಕೆ ಹೋಗುವ ಹಾದಿಯಲ್ಲಿ ಶ್ಯಾರಹಳ್ಳಿಯ ಬಳಿ ಹೇಮಾವತಿ ನಾಲೆಯ ಏರಿಗೆ ತಡೆಗೋಡೆ ಇಲ್ಲವಾಗಿದ್ದು ಅಪಾಯಕ್ಕೆ ಆಹ್ವಾನಿಸುತ್ತಿದೆ.</p>.<p>ಈ ಮಾರ್ಗದಲ್ಲಿ ಸರ್ಕಾರಿ ಬಸ್ ಅಘಲಯದ ಸಮೀಪ ಇರುವ ನಾರಾಯಣಪುರಕ್ಕೆ ನಿತ್ಯವೂ ಸಂಚರಿಸುತ್ತದೆ.</p>.<p>ಸಾರಂಗಿ, ಮಾಚಹಳ್ಳಿ, ಶ್ಯಾರಹಳ್ಳಿ, ಹೆತ್ತಗೋನಹಳ್ಳಿ, ಗೊರವಿ ಮಾರ್ಗವಾಗಿ ನಾರಾಯಣಪುರದವರೆಗೆ ಸಂಚರಿಸುವ ಈ ಬಸ್ಸಿನಲ್ಲಿ ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಪ್ರಯಾಣಿಸುತ್ತಾರೆ.</p>.<p>‘ನಾಲೆಯ ಬದಿಯಲ್ಲಿ ತಡೆಗೋಡೆ ನಿರ್ಮಿಸಿ ಎಂಬುದು ಶ್ಯಾರಹಳ್ಳಿ, ಸಾರಂಗಿ, ಗೊರವಿ ಗ್ರಾಮಸ್ಥರ ಬಹುದಿನಗಳ ಬೇಡಿಕೆ. ಆದರೆ ಇವರ ಬೇಡಿಕೆ ಅಧಿಕಾರಿಗಳ ಕಿವಿಗೆ ಕೇಳುತ್ತಲೇ ಇಲ್ಲ’ ಎಂದು ದೂರುತ್ತಾರೆ ಗ್ರಾಮಸ್ಥರಾದ ರಾಮೇಗೌಡ.</p>.<p>‘ಈಚೆಗೆ ಪಾಂಡವಪುರ ತಾಲ್ಲೂಕಿನ ಕನಗನಮರಡಿಯಲ್ಲಿ ನಡೆದ ಬಸ್ ದುರಂತದಿಂದಾಗಿ ಭಯದ ವಾತಾವರಣ ಉಂಟಾಗಿದೆ’ ಎನ್ನುತ್ತಾರೆ ಪ್ರಯಾಣಿಕ ಜಗದೀಶ್. ‘ಈ ದಾರಿಯ ಒಂದು ಭಾಗದಲ್ಲಿ ನೀರಿನಿಂದ ತುಂಬಿರುವ ಕಾಲುವೆ, ಮತ್ತೊಂದು ಭಾಗದಲ್ಲಿ ಆಳವಾದ ಹಳ್ಳವಿದೆ. ರಸ್ತೆಗೆ ತಡೆಗೋಡೆ ಇಲ್ಲ. ರಸ್ತೆ ಕಿರಿದಾಗಿದ್ದು ಆಟೊ ಪ್ರಯಾಣಿಸಲು ಯೋಗ್ಯವಿಲ್ಲದಂತಾಗಿದೆ’ ಎನ್ನುತ್ತಾರೆ ಅವರು.</p>.<p>‘ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ತಡೆಗೋಡೆ ನಿರ್ಮಿಸಲು ಚಿಂತಿಸಬೇಕು. ಅಪಘಾತವಾದ ನಂತರ ಕ್ರಮ ಕೈಗೊಳ್ಳುವ ಬದಲು ಈಗಲೇ ಕ್ರಮ ವಹಿಸಿ ರಸ್ತೆ ದುರಸ್ತಿಗೊಳಿಸಿದರೆ ಸಾರ್ವಜನಿಕರು ನಿರಾಳವಾಗಿ ಪ್ರಯಾಣಿಸಬಹುದು’ ಎನ್ನುತ್ತಾರೆ ಗ್ರಾಮಸ್ಥರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>