<p><strong>ಕಿಕ್ಕೇರಿ:</strong> ಹೋಬಳಿಯ ಕಾಳೇನಹಳ್ಳಿ ಗ್ರಾಮಕ್ಕೆ ನ್ಯಾಯಾಲಯದ ಅಮೀನ್ ಆರೋಪಿಗೆ ಆರೆಸ್ಟ್ ವಾರೆಂಟು ನೀಡಲು ತೆರಳಿದ್ದ ವೇಳೆ ಆರೋಪಿತ ವ್ಯಕ್ತಿಯ ಪತ್ನಿ ಈಚೆಗೆ ಅಮೀನ್ಗೆ ಖಾರದ ಪುಡಿ ಎರಚಿ ಪರಾರಿಯಾಗಿದ್ದಳು. ಈಕೆಯನ್ನು ಕಿಕ್ಕೇರಿ ಪೊಲೀಸರು ಬಂಧಿಸಿ ಕೆ.ಆರ್. ಪೇಟೆ ನ್ಯಾಯಾಲಯಕ್ಕೆ ಹಾಜರುಪಡಿಸಿದರು. </p><p>ಆರೋಪಿತ ವ್ಯಕ್ತಿ ಗ್ರಾಮದ ಚಿಕ್ಕಈರೇಗೌಡ ಹಾಗೂ ಅಮೀನ್ ಕಣ್ಣಿಗೆ ಖಾರದಪುಡಿ ಎರಚಿತ ಮಹಿಳೆ ಆರೋಪಿಯ ಪತ್ನಿ ಸಾಕಮ್ಮ ಆಗಿದ್ದಾರೆ. </p><p>ಚಿಕ್ಕಮಗಳೂರಿನ ಸಿವಿಲ್ ನ್ಯಾಯಾಲಯದಲ್ಲಿ ಅಪಘಾತ ಪ್ರಕರಣ ಚಿಕ್ಕಈರೇಗೌಡರ ವಿರುದ್ಧ ದಾಖಲಾಗಿತ್ತು. ಇತ್ತೀಚೆಗೆ ಕೆ.ಆರ್. ಪೇಟೆ ಸಿವಿಲ್ ನ್ಯಾಯಾಲಯಕ್ಕೆ ಪ್ರಕರಣ ವರ್ಗಾವಣೆಯಾಗಿತ್ತು. ಪ್ರಕರಣ ಇತ್ಯಾರ್ಥವಾಗಿ ಚಿಕ್ಕಈರೇಗೌಡನಿಗೆ ಆರೆಸ್ಟ್ ವಾರೆಂಟ್ ಜಾರಿಯಾಗಿತ್ತು.</p><p>ನ್ಯಾಯಾಲಯದ ಆದೇಶದಂತೆ ಬಂಧನ ವಾರೆಂಟ್ ನೀಡಲು ಅಮೀನ್ ಸೆ.6ರಂದು ಕಾಳೇನಹಳ್ಳಿ ಗ್ರಾಮಕ್ಕೆ ತೆರಳಿದ್ದ ವೇಳೆ ಆರೋಪಿ ವ್ಯಕ್ತಿಯ ಪತ್ನಿ ಸಾಕಮ್ಮ ಅಮೀನ್ ಕಣ್ಣಿಗೆ ಖಾರದಪುಡಿ ಎರಚಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಪರಾರಿಯಾಗಿದ್ದಳು.</p><p>ಅಮೀನ್ ಕಿಕ್ಕೇರಿ ಪೊಲೀಸರಿಗೆ ಈ ಸಂಬಂಧ ದೂರು ನೀಡಿದ್ದರು. ಕಿಕ್ಕೇರಿ ಪೊಲೀಸರು ದೂರು ದಾಖಲಿಸಿಕೊಂಡು ಆರೋಪಿ ಸಾಕಮ್ಮಳನ್ನು ಕೆ.ಆರ್. ಪೇಟೆ ನ್ಯಾಯಾಲಯಕ್ಕೆ ಒಪ್ಪಿಸಿದ್ದರು. ತಾ. ಸಿವಿಲ್ ನ್ಯಾಯಾಧೀಶ ಸುಧೀರ್ ಆರೋಪಿಗೆ ೧೪ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಿಕ್ಕೇರಿ:</strong> ಹೋಬಳಿಯ ಕಾಳೇನಹಳ್ಳಿ ಗ್ರಾಮಕ್ಕೆ ನ್ಯಾಯಾಲಯದ ಅಮೀನ್ ಆರೋಪಿಗೆ ಆರೆಸ್ಟ್ ವಾರೆಂಟು ನೀಡಲು ತೆರಳಿದ್ದ ವೇಳೆ ಆರೋಪಿತ ವ್ಯಕ್ತಿಯ ಪತ್ನಿ ಈಚೆಗೆ ಅಮೀನ್ಗೆ ಖಾರದ ಪುಡಿ ಎರಚಿ ಪರಾರಿಯಾಗಿದ್ದಳು. ಈಕೆಯನ್ನು ಕಿಕ್ಕೇರಿ ಪೊಲೀಸರು ಬಂಧಿಸಿ ಕೆ.ಆರ್. ಪೇಟೆ ನ್ಯಾಯಾಲಯಕ್ಕೆ ಹಾಜರುಪಡಿಸಿದರು. </p><p>ಆರೋಪಿತ ವ್ಯಕ್ತಿ ಗ್ರಾಮದ ಚಿಕ್ಕಈರೇಗೌಡ ಹಾಗೂ ಅಮೀನ್ ಕಣ್ಣಿಗೆ ಖಾರದಪುಡಿ ಎರಚಿತ ಮಹಿಳೆ ಆರೋಪಿಯ ಪತ್ನಿ ಸಾಕಮ್ಮ ಆಗಿದ್ದಾರೆ. </p><p>ಚಿಕ್ಕಮಗಳೂರಿನ ಸಿವಿಲ್ ನ್ಯಾಯಾಲಯದಲ್ಲಿ ಅಪಘಾತ ಪ್ರಕರಣ ಚಿಕ್ಕಈರೇಗೌಡರ ವಿರುದ್ಧ ದಾಖಲಾಗಿತ್ತು. ಇತ್ತೀಚೆಗೆ ಕೆ.ಆರ್. ಪೇಟೆ ಸಿವಿಲ್ ನ್ಯಾಯಾಲಯಕ್ಕೆ ಪ್ರಕರಣ ವರ್ಗಾವಣೆಯಾಗಿತ್ತು. ಪ್ರಕರಣ ಇತ್ಯಾರ್ಥವಾಗಿ ಚಿಕ್ಕಈರೇಗೌಡನಿಗೆ ಆರೆಸ್ಟ್ ವಾರೆಂಟ್ ಜಾರಿಯಾಗಿತ್ತು.</p><p>ನ್ಯಾಯಾಲಯದ ಆದೇಶದಂತೆ ಬಂಧನ ವಾರೆಂಟ್ ನೀಡಲು ಅಮೀನ್ ಸೆ.6ರಂದು ಕಾಳೇನಹಳ್ಳಿ ಗ್ರಾಮಕ್ಕೆ ತೆರಳಿದ್ದ ವೇಳೆ ಆರೋಪಿ ವ್ಯಕ್ತಿಯ ಪತ್ನಿ ಸಾಕಮ್ಮ ಅಮೀನ್ ಕಣ್ಣಿಗೆ ಖಾರದಪುಡಿ ಎರಚಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಪರಾರಿಯಾಗಿದ್ದಳು.</p><p>ಅಮೀನ್ ಕಿಕ್ಕೇರಿ ಪೊಲೀಸರಿಗೆ ಈ ಸಂಬಂಧ ದೂರು ನೀಡಿದ್ದರು. ಕಿಕ್ಕೇರಿ ಪೊಲೀಸರು ದೂರು ದಾಖಲಿಸಿಕೊಂಡು ಆರೋಪಿ ಸಾಕಮ್ಮಳನ್ನು ಕೆ.ಆರ್. ಪೇಟೆ ನ್ಯಾಯಾಲಯಕ್ಕೆ ಒಪ್ಪಿಸಿದ್ದರು. ತಾ. ಸಿವಿಲ್ ನ್ಯಾಯಾಧೀಶ ಸುಧೀರ್ ಆರೋಪಿಗೆ ೧೪ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>