<p><strong>ಮಂಡ್ಯ:</strong> ಮುಂಗಾರು ಮಳೆ ಮತ್ತು ಗಾಳಿಯ ಅಬ್ಬರದಿಂದ ವಿದ್ಯುತ್ ಜಾಲಕ್ಕೆ ತೀವ್ರ ಹಾನಿಯಾಗಿದ್ದು, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಕ್ಕೆ (ಸೆಸ್ಕ್) ಬರೋಬ್ಬರಿ ₹17.88 ಕೋಟಿ ನಷ್ಟವಾಗಿದೆ. </p>.<p>ಸೆಸ್ಕ್ ವ್ಯಾಪ್ತಿಯ ಮೈಸೂರು– ₹3.80 ಕೋಟಿ, ಚಾಮರಾಜನಗರ– ₹1.07 ಕೋಟಿ, ಕೊಡಗು– ₹5.02 ಕೋಟಿ, ಮಂಡ್ಯ– ₹4.42 ಕೋಟಿ ಹಾಗೂ ಹಾಸನ– ₹3.54 ಕೋಟಿಯಷ್ಟು ನಷ್ಟವಾಗಿದೆ. </p>.<p>ಒಟ್ಟು 10,713 ಕಂಬಗಳು ಹಾಳಾಗಿದ್ದು, ₹14.89 ಕೋಟಿ ನಷ್ಟವಾಗಿದೆ. 265 ಪರಿವರ್ತಕಗಳು ಹಾಳಾಗಿದ್ದು, ಅಂದಾಜು ₹2.68 ಕೋಟಿ ನಷ್ಟವಾಗಿದೆ. ಭಾರಿ ಮಳೆ–ಗಾಳಿಗೆ ಸುಮಾರು 57 ಕಿ.ಮೀ.ನಷ್ಟು ತಂತಿಗಳು ಹಾಳಾಗಿದ್ದು ₹29 ಲಕ್ಷ ನಷ್ಟವಾಗಿದೆ. </p>.<p>ದುರಸ್ತಿಗೆ ಆದ್ಯತೆ: ‘ಸಾರ್ವಜನಿಕರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಸಲೆಂದೇ ಸಿಬ್ಬಂದಿಯು ಸುರಿಯುವ ಮಳೆಯನ್ನು ಲೆಕ್ಕಿಸದೆ ದುರಸ್ತಿ ಮಾಡಿದ್ದಾರೆ. ಚಾಮರಾಜನಗರ ಮತ್ತು ಕೊಡಗಿನ ಬೆಟ್ಟ–ಗುಡ್ಡಗಳಲ್ಲಿ, ಕಡಿದಾದ ಕಣಿವೆ ಪ್ರದೇಶಗಳಲ್ಲಿ ಹರಸಾಹಸಪಟ್ಟಿದ್ದಾರೆ’ ಎಂದು ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕಿ ಶೀಲಾ ಜಿ. ತಿಳಿಸಿದರು. </p>.<p>ಮಂಡ್ಯದಲ್ಲಿ ₹19.23 ಕೋಟಿ ನಷ್ಟ: ‘ಮಂಡ್ಯ ಜಿಲ್ಲೆಯಲ್ಲಿ ಐದು ವರ್ಷಗಳಲ್ಲಿ ಒಟ್ಟು ₹19.23 ಕೋಟಿ ನಷ್ಟವಾಗಿದೆ. 2019–20ರಲ್ಲಿ ₹93.75 ಲಕ್ಷ, 2020–21ರಲ್ಲಿ ₹2.20 ಕೋಟಿ, 2021–22ರಲ್ಲಿ ₹3.16 ಕೋಟಿ, 2022–23ರಲ್ಲಿ ₹6.08 ಕೋಟಿ ನಷ್ಟವಾಗಿದೆ. 5 ವರ್ಷಗಳಲ್ಲಿ 12,122 ಕಂಬಗಳು, 220 ಪರಿವರ್ತಕಗಳು ಹಾಗೂ 76.63 ಕಿ.ಮೀ.ನಷ್ಟು ವಿದ್ಯುತ್ ಮಾರ್ಗ ಹಾಳಾಗಿದೆ’ ಎಂದು ಸೆಸ್ಕ್ ಇಲಾಖೆ ಮಾಹಿತಿ ನೀಡಿದೆ. </p>.<p>ಜಿಲ್ಲಾಧಿಕಾರಿಗಳಿಗೆ ಪತ್ರ: ಪ್ರತಿ ವರ್ಷ ಮಳೆ–ಗಾಳಿ ಮತ್ತು ನೈಸರ್ಗಿಕ ವಿಕೋಪದಿಂದ ಹಾನಿಯಾಗುವ ವಿದ್ಯುತ್ ಜಾಲವನ್ನು ಸರಿಪಡಿಸುವ ವೆಚ್ಚವನ್ನು ಭರಿಸುವುದು ಕಷ್ಟಸಾಧ್ಯವಾಗಿದೆ. ಹೀಗಾಗಿ ಎಸ್ಡಿಆರ್ಎಫ್ ಮತ್ತು ಎನ್ಡಿಆರ್ಎಫ್ ಅಡಿ ಅನುದಾನ ಬಿಡುಗಡೆ ಮಾಡಬೇಕು ಎಂದು ಐದು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೆಸ್ಕ್ ಪ್ರಧಾನ ವ್ಯವಸ್ಥಾಪಕರು ಪತ್ರ ಬರೆದಿದ್ದಾರೆ.</p>.<p>‘ಪ್ರತಿ ವರ್ಷ ಪತ್ರ ಬರೆದರೂ ಅನುದಾನ ದೊರೆಯುತ್ತಿಲ್ಲ’ ಎಂದು ಸೆಸ್ಕ್ ಎಂಜಿನಿಯರ್ಗಳು ತಿಳಿಸಿದರು. </p>.<p>ಉಪ ಮುಖ್ಯಮಂತ್ರಿಗೂ ಮನವಿ: ಸೆಸ್ಕ್ ಅಧ್ಯಕ್ಷ, ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಅವರು, ಈಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೂ ಇದೇ ಮನವಿ ಮಾಡಿದ್ದರು. ಕ್ರಮ ಕೈಗೊಳ್ಳುವ ಬಗ್ಗೆ ಡಿಸಿಎಂ ಭರವಸೆ ನೀಡಿದ್ದರು.</p>.<div><blockquote>ಎನ್ಡಿಆರ್ಎಫ್ನಿಂದ ಹಣ ಬಿಡುಗಡೆಗೆ ಐದು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಮೈಸೂರು ಡಿಸಿ ₹50 ಲಕ್ಷ ಕೊಟ್ಟಿದ್ದಾರೆ. ಉಳಿದ ಜಿಲ್ಲೆಗಳಿಂದ ಹಣ ಬಂದಿಲ್ಲ </blockquote><span class="attribution">– ಶೀಲಾ ಜಿ ವ್ಯವಸ್ಥಾಪಕ ನಿರ್ದೇಶಕರು ಸೆಸ್ಕ್</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ:</strong> ಮುಂಗಾರು ಮಳೆ ಮತ್ತು ಗಾಳಿಯ ಅಬ್ಬರದಿಂದ ವಿದ್ಯುತ್ ಜಾಲಕ್ಕೆ ತೀವ್ರ ಹಾನಿಯಾಗಿದ್ದು, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಕ್ಕೆ (ಸೆಸ್ಕ್) ಬರೋಬ್ಬರಿ ₹17.88 ಕೋಟಿ ನಷ್ಟವಾಗಿದೆ. </p>.<p>ಸೆಸ್ಕ್ ವ್ಯಾಪ್ತಿಯ ಮೈಸೂರು– ₹3.80 ಕೋಟಿ, ಚಾಮರಾಜನಗರ– ₹1.07 ಕೋಟಿ, ಕೊಡಗು– ₹5.02 ಕೋಟಿ, ಮಂಡ್ಯ– ₹4.42 ಕೋಟಿ ಹಾಗೂ ಹಾಸನ– ₹3.54 ಕೋಟಿಯಷ್ಟು ನಷ್ಟವಾಗಿದೆ. </p>.<p>ಒಟ್ಟು 10,713 ಕಂಬಗಳು ಹಾಳಾಗಿದ್ದು, ₹14.89 ಕೋಟಿ ನಷ್ಟವಾಗಿದೆ. 265 ಪರಿವರ್ತಕಗಳು ಹಾಳಾಗಿದ್ದು, ಅಂದಾಜು ₹2.68 ಕೋಟಿ ನಷ್ಟವಾಗಿದೆ. ಭಾರಿ ಮಳೆ–ಗಾಳಿಗೆ ಸುಮಾರು 57 ಕಿ.ಮೀ.ನಷ್ಟು ತಂತಿಗಳು ಹಾಳಾಗಿದ್ದು ₹29 ಲಕ್ಷ ನಷ್ಟವಾಗಿದೆ. </p>.<p>ದುರಸ್ತಿಗೆ ಆದ್ಯತೆ: ‘ಸಾರ್ವಜನಿಕರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಸಲೆಂದೇ ಸಿಬ್ಬಂದಿಯು ಸುರಿಯುವ ಮಳೆಯನ್ನು ಲೆಕ್ಕಿಸದೆ ದುರಸ್ತಿ ಮಾಡಿದ್ದಾರೆ. ಚಾಮರಾಜನಗರ ಮತ್ತು ಕೊಡಗಿನ ಬೆಟ್ಟ–ಗುಡ್ಡಗಳಲ್ಲಿ, ಕಡಿದಾದ ಕಣಿವೆ ಪ್ರದೇಶಗಳಲ್ಲಿ ಹರಸಾಹಸಪಟ್ಟಿದ್ದಾರೆ’ ಎಂದು ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕಿ ಶೀಲಾ ಜಿ. ತಿಳಿಸಿದರು. </p>.<p>ಮಂಡ್ಯದಲ್ಲಿ ₹19.23 ಕೋಟಿ ನಷ್ಟ: ‘ಮಂಡ್ಯ ಜಿಲ್ಲೆಯಲ್ಲಿ ಐದು ವರ್ಷಗಳಲ್ಲಿ ಒಟ್ಟು ₹19.23 ಕೋಟಿ ನಷ್ಟವಾಗಿದೆ. 2019–20ರಲ್ಲಿ ₹93.75 ಲಕ್ಷ, 2020–21ರಲ್ಲಿ ₹2.20 ಕೋಟಿ, 2021–22ರಲ್ಲಿ ₹3.16 ಕೋಟಿ, 2022–23ರಲ್ಲಿ ₹6.08 ಕೋಟಿ ನಷ್ಟವಾಗಿದೆ. 5 ವರ್ಷಗಳಲ್ಲಿ 12,122 ಕಂಬಗಳು, 220 ಪರಿವರ್ತಕಗಳು ಹಾಗೂ 76.63 ಕಿ.ಮೀ.ನಷ್ಟು ವಿದ್ಯುತ್ ಮಾರ್ಗ ಹಾಳಾಗಿದೆ’ ಎಂದು ಸೆಸ್ಕ್ ಇಲಾಖೆ ಮಾಹಿತಿ ನೀಡಿದೆ. </p>.<p>ಜಿಲ್ಲಾಧಿಕಾರಿಗಳಿಗೆ ಪತ್ರ: ಪ್ರತಿ ವರ್ಷ ಮಳೆ–ಗಾಳಿ ಮತ್ತು ನೈಸರ್ಗಿಕ ವಿಕೋಪದಿಂದ ಹಾನಿಯಾಗುವ ವಿದ್ಯುತ್ ಜಾಲವನ್ನು ಸರಿಪಡಿಸುವ ವೆಚ್ಚವನ್ನು ಭರಿಸುವುದು ಕಷ್ಟಸಾಧ್ಯವಾಗಿದೆ. ಹೀಗಾಗಿ ಎಸ್ಡಿಆರ್ಎಫ್ ಮತ್ತು ಎನ್ಡಿಆರ್ಎಫ್ ಅಡಿ ಅನುದಾನ ಬಿಡುಗಡೆ ಮಾಡಬೇಕು ಎಂದು ಐದು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೆಸ್ಕ್ ಪ್ರಧಾನ ವ್ಯವಸ್ಥಾಪಕರು ಪತ್ರ ಬರೆದಿದ್ದಾರೆ.</p>.<p>‘ಪ್ರತಿ ವರ್ಷ ಪತ್ರ ಬರೆದರೂ ಅನುದಾನ ದೊರೆಯುತ್ತಿಲ್ಲ’ ಎಂದು ಸೆಸ್ಕ್ ಎಂಜಿನಿಯರ್ಗಳು ತಿಳಿಸಿದರು. </p>.<p>ಉಪ ಮುಖ್ಯಮಂತ್ರಿಗೂ ಮನವಿ: ಸೆಸ್ಕ್ ಅಧ್ಯಕ್ಷ, ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಅವರು, ಈಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೂ ಇದೇ ಮನವಿ ಮಾಡಿದ್ದರು. ಕ್ರಮ ಕೈಗೊಳ್ಳುವ ಬಗ್ಗೆ ಡಿಸಿಎಂ ಭರವಸೆ ನೀಡಿದ್ದರು.</p>.<div><blockquote>ಎನ್ಡಿಆರ್ಎಫ್ನಿಂದ ಹಣ ಬಿಡುಗಡೆಗೆ ಐದು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಮೈಸೂರು ಡಿಸಿ ₹50 ಲಕ್ಷ ಕೊಟ್ಟಿದ್ದಾರೆ. ಉಳಿದ ಜಿಲ್ಲೆಗಳಿಂದ ಹಣ ಬಂದಿಲ್ಲ </blockquote><span class="attribution">– ಶೀಲಾ ಜಿ ವ್ಯವಸ್ಥಾಪಕ ನಿರ್ದೇಶಕರು ಸೆಸ್ಕ್</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>