<p><strong>ಮಂಡ್ಯ</strong>: ವಿದ್ಯುತ್ ಚಾಲಿತ ವಾಹನಗಳಿಗೆ ಉತ್ತೇಜನ ನೀಡಲು ರಾಜ್ಯದ ವಿವಿಧೆಡೆ 2,500 ‘ಇವಿ ಚಾರ್ಜಿಂಗ್ ಕೇಂದ್ರ’ಗಳನ್ನು ಸಾರ್ವಜನಿಕ– ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ರದ್ದಾಗಿದೆ.</p>.<p>22 ಜಿಲ್ಲೆಗಳಿಗೆ 605 ಇವಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಟೆಂಡರ್ ಕರೆಯಲಾಗಿತ್ತು. ಅದರಲ್ಲಿ 4 ಜಿಲ್ಲೆಗಳಿಗೆ ಕೇವಲ ಒಬ್ಬ ಬಿಡ್ಡುದಾರ ಭಾಗವಹಿಸಿದ್ದು, ಉಳಿದ 18 ಜಿಲ್ಲೆಗಳಲ್ಲಿ ಬಿಡ್ಗಳೇ ಸ್ವೀಕೃತವಾಗಿಲ್ಲ. ಹೀಗಾಗಿ ಯೋಜನೆಯನ್ನೇ ಕೈಬಿಡಲು ಸರ್ಕಾರ ಆದೇಶ ಹೊರಡಿಸಿದೆ.</p>.<p>ಮೊದಲ ಹಂತದಲ್ಲಿ 1,190 ಮತ್ತು 2ನೇ ಹಂತದಲ್ಲಿ 1,310 ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರ ಆದೇಶ ಹೊರಡಿಸಿತ್ತು. ಯೋಜನೆಯ ನೋಡಲ್ ಸಂಸ್ಥೆಯಾದ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯು ‘ಕ್ರಿಯಾಯೋಜನೆ’ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿತ್ತು. </p>.<p>2023–24ನೇ ಸಾಲಿನಲ್ಲಿ ರಾಜ್ಯದ 9 ಜಿಲ್ಲೆಗಳಲ್ಲಿ ಒಟ್ಟು 585 ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಕಾರ್ಯಾದೇಶ ನೀಡಲಾಗಿದ್ದರೂ ಒಂದೂ ಸ್ಥಾಪನೆಯಾಗಲಿಲ್ಲ. 2024–25ರಲ್ಲಿ ಇನ್ನುಳಿದ 22 ಜಿಲ್ಲೆಗಳಲ್ಲಿ 605 ಕೇಂದ್ರಗಳ ಸ್ಥಾಪನೆಗೆ ಟೆಂಡರ್ ಕರೆಯಲಾಗಿತ್ತು. ಅದರಲ್ಲಿ 4 ಜಿಲ್ಲೆಗಳಿಗೆ ಒಬ್ಬರಷ್ಟೇ ಭಾಗವಹಿಸಿದ್ದರು.</p>.<p><strong>ಪ್ರತಿ ಯೂನಿಟ್ಗೆ ₹1 ಆದಾಯ:</strong> </p>.<p>ಸರ್ಕಾರಿ ಸಂಸ್ಥೆ ಮತ್ತು ಸಾರ್ವಜನಿಕ ವಲಯ ಉದ್ಯಮಗಳಿಂದ ಸ್ಥಾಪಿಸಲಾಗುವ ಚಾರ್ಜಿಂಗ್ ಕೇಂದ್ರಗಳಿಗೆ ಸ್ಥಳ ಒದಗಿಸುವ ಸರ್ಕಾರಿ ಇಲಾಖೆಗಳಿಗೆ ಚಾರ್ಜಿಂಗ್ನಿಂದ ದಾಖಲಾಗುವ ಪ್ರತಿ ಯೂನಿಟ್ ಮೇಲೆ ₹1 ಆದಾಯ ಮತ್ತು ಪಿಪಿಪಿ ಮಾದರಿಯಲ್ಲಿ ಕರೆಯಲಾಗುವ ಟೆಂಡರ್ನಲ್ಲಿ ಪ್ರತಿ ಯೂನಿಟ್ ಮೇಲೆ ₹1 ಆದಾಯ ಹಂಚಲು ಆದೇಶ ಹೊರಡಿಸಲಾಗಿತ್ತು.</p>.<div><blockquote>ವಿದ್ಯುತ್ ಚಾಲಿತ ವಾಹನಗಳ ಖರೀದಿಗೆ ಸಬ್ಸಿಡಿ ಇಳಿಕೆಯಾಗಿದೆ. ಮತ್ತೊಂದು ಕಡೆ ಚಾರ್ಜಿಂಗ್ ಸ್ಟೇಷನ್ಗಳ ಕೊರತೆಯಿದೆ. ಹೀಗಾಗಿ ಉದ್ಯಮಕ್ಕೆ ದೊಡ್ಡ ಹೊಡೆತ ಬೀಳುತ್ತದೆ</blockquote><span class="attribution">ವಿನಯಕುಮಾರ್, ಮಾಲೀಕರು ಇ–ಮಾಂಡವ್ಯ ಮೋಟಾರ್ಸ್ ಮಂಡ್ಯ</span></div>.<p><strong>ಹಿನ್ನಡೆಗೆ ಕಾರಣಗಳೇನು?</strong> </p><ul><li><p>ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಸರ್ಕಾರಕ್ಕೆ ವರದಿ ಸಲ್ಲಿಸಿ ಹಿನ್ನಡೆಗೆ ಕಾರಣಗಳನ್ನು ವಿವರಿಸಿದ್ದಾರೆ </p></li><li><p>ಕಾರ್ಯಾದೇಶ ಪಡೆದ ಏಜೆನ್ಸಿಗಳಿಗೆ ಇತರೆ ಇಲಾಖೆಗಳು ಭೂಗುತ್ತಿಗೆ ಒಪ್ಪಂದವನ್ನು ಕಾರ್ಯಗತಗೊಳಿಸಲು ಸಹಕಾರ ನೀಡಲಿಲ್ಲ </p></li><li><p>ಏಜೆನ್ಸಿ ನಿಯಮಗಳ ಪ್ರಕಾರ ಅನೂಕೂಲಕರ ಸ್ಥಳಗಳನ್ನು ಗುರುತಿಸುವುದು ಸಾಧ್ಯವಾಗಲಿಲ್ಲ </p></li><li><p>ಎಲೆಕ್ಟ್ರಿಕ್ ವಾಹನಗಳು ನಿರೀಕ್ಷಿತ ಮಟ್ಟದಲ್ಲಿ ಬಳಕೆಯಲ್ಲಿರದ ಕಾರಣ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವುದರಿಂದ ಏಜೆನ್ಸಿಗಳಿಗೆ ಆರ್ಥಿಕ ಹೊರೆಯಾಗುತ್ತದೆ </p></li></ul>.<p><strong>100 ಕೇಂದ್ರ ಸ್ಥಾಪನೆ: ಬೆಸ್ಕಾಂಗೆ ಆದೇಶ</strong></p><p> ಪಿಪಿಪಿ ಮಾದರಿಯಲ್ಲಿ ‘ಇ.ವಿ ಚಾರ್ಜಿಂಗ್ ಕೇಂದ್ರ’ಗಳನ್ನು ತೆರೆಯಲು ಹಿನ್ನಡೆಯಾದ ಬೆನ್ನಲ್ಲೇ ವಿದ್ಯುತ್ ಸರಬರಾಜು ಕಂಪನಿಗಳ ಮೂಲಕ ₹35 ಕೋಟಿ ವೆಚ್ಚದಲ್ಲಿ ರಾಜ್ಯದ ವಿವಿಧೆಡೆ 100 ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಅಗತ್ಯ ಕ್ರಮ ವಹಿಸುವಂತೆ ನೋಡಲ್ ಸಂಸ್ಥೆಯಾದ ಬೆಸ್ಕಾಂಗೆ ಸರ್ಕಾರ ಆದೇಶಿಸಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ</strong>: ವಿದ್ಯುತ್ ಚಾಲಿತ ವಾಹನಗಳಿಗೆ ಉತ್ತೇಜನ ನೀಡಲು ರಾಜ್ಯದ ವಿವಿಧೆಡೆ 2,500 ‘ಇವಿ ಚಾರ್ಜಿಂಗ್ ಕೇಂದ್ರ’ಗಳನ್ನು ಸಾರ್ವಜನಿಕ– ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ರದ್ದಾಗಿದೆ.</p>.<p>22 ಜಿಲ್ಲೆಗಳಿಗೆ 605 ಇವಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಟೆಂಡರ್ ಕರೆಯಲಾಗಿತ್ತು. ಅದರಲ್ಲಿ 4 ಜಿಲ್ಲೆಗಳಿಗೆ ಕೇವಲ ಒಬ್ಬ ಬಿಡ್ಡುದಾರ ಭಾಗವಹಿಸಿದ್ದು, ಉಳಿದ 18 ಜಿಲ್ಲೆಗಳಲ್ಲಿ ಬಿಡ್ಗಳೇ ಸ್ವೀಕೃತವಾಗಿಲ್ಲ. ಹೀಗಾಗಿ ಯೋಜನೆಯನ್ನೇ ಕೈಬಿಡಲು ಸರ್ಕಾರ ಆದೇಶ ಹೊರಡಿಸಿದೆ.</p>.<p>ಮೊದಲ ಹಂತದಲ್ಲಿ 1,190 ಮತ್ತು 2ನೇ ಹಂತದಲ್ಲಿ 1,310 ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರ ಆದೇಶ ಹೊರಡಿಸಿತ್ತು. ಯೋಜನೆಯ ನೋಡಲ್ ಸಂಸ್ಥೆಯಾದ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯು ‘ಕ್ರಿಯಾಯೋಜನೆ’ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿತ್ತು. </p>.<p>2023–24ನೇ ಸಾಲಿನಲ್ಲಿ ರಾಜ್ಯದ 9 ಜಿಲ್ಲೆಗಳಲ್ಲಿ ಒಟ್ಟು 585 ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಕಾರ್ಯಾದೇಶ ನೀಡಲಾಗಿದ್ದರೂ ಒಂದೂ ಸ್ಥಾಪನೆಯಾಗಲಿಲ್ಲ. 2024–25ರಲ್ಲಿ ಇನ್ನುಳಿದ 22 ಜಿಲ್ಲೆಗಳಲ್ಲಿ 605 ಕೇಂದ್ರಗಳ ಸ್ಥಾಪನೆಗೆ ಟೆಂಡರ್ ಕರೆಯಲಾಗಿತ್ತು. ಅದರಲ್ಲಿ 4 ಜಿಲ್ಲೆಗಳಿಗೆ ಒಬ್ಬರಷ್ಟೇ ಭಾಗವಹಿಸಿದ್ದರು.</p>.<p><strong>ಪ್ರತಿ ಯೂನಿಟ್ಗೆ ₹1 ಆದಾಯ:</strong> </p>.<p>ಸರ್ಕಾರಿ ಸಂಸ್ಥೆ ಮತ್ತು ಸಾರ್ವಜನಿಕ ವಲಯ ಉದ್ಯಮಗಳಿಂದ ಸ್ಥಾಪಿಸಲಾಗುವ ಚಾರ್ಜಿಂಗ್ ಕೇಂದ್ರಗಳಿಗೆ ಸ್ಥಳ ಒದಗಿಸುವ ಸರ್ಕಾರಿ ಇಲಾಖೆಗಳಿಗೆ ಚಾರ್ಜಿಂಗ್ನಿಂದ ದಾಖಲಾಗುವ ಪ್ರತಿ ಯೂನಿಟ್ ಮೇಲೆ ₹1 ಆದಾಯ ಮತ್ತು ಪಿಪಿಪಿ ಮಾದರಿಯಲ್ಲಿ ಕರೆಯಲಾಗುವ ಟೆಂಡರ್ನಲ್ಲಿ ಪ್ರತಿ ಯೂನಿಟ್ ಮೇಲೆ ₹1 ಆದಾಯ ಹಂಚಲು ಆದೇಶ ಹೊರಡಿಸಲಾಗಿತ್ತು.</p>.<div><blockquote>ವಿದ್ಯುತ್ ಚಾಲಿತ ವಾಹನಗಳ ಖರೀದಿಗೆ ಸಬ್ಸಿಡಿ ಇಳಿಕೆಯಾಗಿದೆ. ಮತ್ತೊಂದು ಕಡೆ ಚಾರ್ಜಿಂಗ್ ಸ್ಟೇಷನ್ಗಳ ಕೊರತೆಯಿದೆ. ಹೀಗಾಗಿ ಉದ್ಯಮಕ್ಕೆ ದೊಡ್ಡ ಹೊಡೆತ ಬೀಳುತ್ತದೆ</blockquote><span class="attribution">ವಿನಯಕುಮಾರ್, ಮಾಲೀಕರು ಇ–ಮಾಂಡವ್ಯ ಮೋಟಾರ್ಸ್ ಮಂಡ್ಯ</span></div>.<p><strong>ಹಿನ್ನಡೆಗೆ ಕಾರಣಗಳೇನು?</strong> </p><ul><li><p>ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಸರ್ಕಾರಕ್ಕೆ ವರದಿ ಸಲ್ಲಿಸಿ ಹಿನ್ನಡೆಗೆ ಕಾರಣಗಳನ್ನು ವಿವರಿಸಿದ್ದಾರೆ </p></li><li><p>ಕಾರ್ಯಾದೇಶ ಪಡೆದ ಏಜೆನ್ಸಿಗಳಿಗೆ ಇತರೆ ಇಲಾಖೆಗಳು ಭೂಗುತ್ತಿಗೆ ಒಪ್ಪಂದವನ್ನು ಕಾರ್ಯಗತಗೊಳಿಸಲು ಸಹಕಾರ ನೀಡಲಿಲ್ಲ </p></li><li><p>ಏಜೆನ್ಸಿ ನಿಯಮಗಳ ಪ್ರಕಾರ ಅನೂಕೂಲಕರ ಸ್ಥಳಗಳನ್ನು ಗುರುತಿಸುವುದು ಸಾಧ್ಯವಾಗಲಿಲ್ಲ </p></li><li><p>ಎಲೆಕ್ಟ್ರಿಕ್ ವಾಹನಗಳು ನಿರೀಕ್ಷಿತ ಮಟ್ಟದಲ್ಲಿ ಬಳಕೆಯಲ್ಲಿರದ ಕಾರಣ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವುದರಿಂದ ಏಜೆನ್ಸಿಗಳಿಗೆ ಆರ್ಥಿಕ ಹೊರೆಯಾಗುತ್ತದೆ </p></li></ul>.<p><strong>100 ಕೇಂದ್ರ ಸ್ಥಾಪನೆ: ಬೆಸ್ಕಾಂಗೆ ಆದೇಶ</strong></p><p> ಪಿಪಿಪಿ ಮಾದರಿಯಲ್ಲಿ ‘ಇ.ವಿ ಚಾರ್ಜಿಂಗ್ ಕೇಂದ್ರ’ಗಳನ್ನು ತೆರೆಯಲು ಹಿನ್ನಡೆಯಾದ ಬೆನ್ನಲ್ಲೇ ವಿದ್ಯುತ್ ಸರಬರಾಜು ಕಂಪನಿಗಳ ಮೂಲಕ ₹35 ಕೋಟಿ ವೆಚ್ಚದಲ್ಲಿ ರಾಜ್ಯದ ವಿವಿಧೆಡೆ 100 ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಅಗತ್ಯ ಕ್ರಮ ವಹಿಸುವಂತೆ ನೋಡಲ್ ಸಂಸ್ಥೆಯಾದ ಬೆಸ್ಕಾಂಗೆ ಸರ್ಕಾರ ಆದೇಶಿಸಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>