‘ ವೃದ್ದೆ ತಾಲ್ಲೂಕು ಕಚೇರಿಗೆ ಬಂದು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ರೈತಸಂಘದ ಮುಖಂಡರು ವೃದ್ದೆಯ ದಾಖಲೆ ಪರಿಶೀಲಿಸಿದಾಗ ವೃದ್ದೆ ಮರಣ ಹೊಂದಿರುವ ಬಗ್ಗೆ ಆ ಭಾಗದ ಗ್ರಾಮ ಆಡಳಿತ ಅಧಿಕಾರಿ(ವಿಎ) ವರದಿ ನೀಡಿರುವುದು ಬೆಳಕಿಗೆ ಬಂದಿದೆ. ತಾಲ್ಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ನೇತೃತ್ವದ ರೈತಸಂಘದ ನಿಯೋಗ ತಹಶೀಲ್ದಾರ್ ಲೋಕೇಶ್ ಅವರನ್ನು ಭೇಟಿ ಮಾಡಿ ನೈಜಸ್ಥಿತಿ ತಿಳಿಸಿದಾಗ , ಸಮಸ್ಯೆ ಆಲಿಸಿದ ತಹಶೀಲ್ದಾರ್, ಸೂಕ್ತ ಕ್ರಮ ವಹಿಸುವದಲ್ಲದೆ , ವೃದ್ದೆಗೆ ಪಿಂಚಣಿ ಹಣವನ್ನು ಮರು ಜಾರಿಗೊಳಿಸುವ ಭರವಸೆ ನೀಡಿದ್ದಾರೆ.