<p><strong>ಶ್ರೀರಂಗಪಟ್ಟಣ:</strong> ಗುರುವಾರ ಇಡೀ ರಾತ್ರಿ ಸುರಿದ ಕುಂಭದ್ರೋಣ ಮಳೆಯಿಂದಾಗಿ ತಾಲ್ಲೂಕಿನ ಕೂಡಲಕುಪ್ಪೆ ಗ್ರಾಮದ ಬಳಿ, ಎರಮಣಿ ನಾಲೆ ಮತ್ತು ಅಡ್ಡಹಳ್ಳ ಉಕ್ಕಿ ಹರಿದು 20 ಎಕರೆಗೂ ಹೆಚ್ಚು ಬೆಳೆ ಜಲಾವೃತವಾಗಿದೆ.</p><p>ಗ್ರಾಮದ ಲಕ್ಷ್ಮೇಗೌಡ ಮತ್ತು ಗುರುಮೂರ್ತಿ ಎಂಬವರ ಭತ್ತದ ಬೆಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಹೊಯ್ಸಳ ಎಂಬವರ ಜೋಳ ಮತ್ತು ತೆಂಗಿನ ಸಸಿಗಳು ಮುಳುಗಿವೆ. ಶಿವಲಿಂಗೇಗೌಡ, ಕೆ.ಪಿ. ಸ್ವಾಮಿ, ಇತರರ ಕಬ್ಬು, ಬಾಳೆ, ಅಡಿಕೆ ತೋಟಗಳು ಜಲಾವೃತವಾಗಿವೆ.</p><p>ಕೂಡಲಕುಪ್ಪೆ ಗೇಟ್- ಕೂಡಲಕುಪ್ಪೆ ಸಂಪರ್ಕ ಸೇತುವೆ ಮೇಲೆ ಎರಡು ಅಡಿಗಳಷ್ಟು ನೀರು ಹರಿದಿದೆ. '75 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕೂಡಲಕುಪ್ಪೆ ಅಡ್ಡಹಳ್ಳ ಈ ಪರಿ ಉಕ್ಕಿ ಹರಿದಿದೆ' ಎಂದು ಗ್ರಾಮದ ಗೋಪಾಲಗೌಡ ತಿಳಿಸಿದ್ದಾರೆ.</p><p><strong>ಮಳೆಗೆ ಮನೆ ಗೋಡೆ ಕುಸಿತ: ಯುವಕ ಪಾರು</strong></p><p>ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಶ್ರೀರಂಗಪಟ್ಟಣ ತಾಲ್ಲೂಕಿನ ಚಿಕ್ಕಪಾಳ್ಯ ಗ್ರಾಮದಲ್ಲಿ ಮನೆಯ ಗೋಡೆ ಕುಸಿದಿದೆ.</p><p>ಗ್ರಾಮದ ದಿವಂಗತ ಗೋಪಾಲ್ ಅವರ ಮಗ ಪುನೀತ್ ಕುಮಾರ ಅವರ ಮನೆಯ ಗೋಡೆ 25 ಅಡಿಗಳಷ್ಟು ಕುಸಿದು ಬಿದ್ದಿದೆ. ಪುನೀತ್ ಮಲಗಿದ್ದ ವೇಳೆ ಗೋಡೆ ದಿಢೀರ್ ಕುಸಿದಿದ್ದು, ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.</p><p>ಮಣ್ಣಿನ ಗೋಡೆ ಕುಸಿದು ಪಾತ್ರೆ, ಟಿವಿ, ಫ್ಯಾನ್, ಬಟ್ಟೆ, ದವಸ- ಧಾನ್ಯ ಹಾಳಾಗಿವೆ.</p><p>ಪುನೀತ್ ಕುಮಾರ್ ಮನೆಯಲ್ಲಿ ಒಬ್ಬರೇ ವಾಸವಾಗಿದ್ದು, ಸದ್ಯ ಅವರಿಗೆ ಇರಲು ಮನೆ ಇಲ್ಲದ ಪರಿಸ್ಥಿತಿ ಬಂದಿದೆ ಎಂದು ಗ್ರಾಮದ ಮುಖಂಡ ಪುರುಷೋತ್ತಮ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀರಂಗಪಟ್ಟಣ:</strong> ಗುರುವಾರ ಇಡೀ ರಾತ್ರಿ ಸುರಿದ ಕುಂಭದ್ರೋಣ ಮಳೆಯಿಂದಾಗಿ ತಾಲ್ಲೂಕಿನ ಕೂಡಲಕುಪ್ಪೆ ಗ್ರಾಮದ ಬಳಿ, ಎರಮಣಿ ನಾಲೆ ಮತ್ತು ಅಡ್ಡಹಳ್ಳ ಉಕ್ಕಿ ಹರಿದು 20 ಎಕರೆಗೂ ಹೆಚ್ಚು ಬೆಳೆ ಜಲಾವೃತವಾಗಿದೆ.</p><p>ಗ್ರಾಮದ ಲಕ್ಷ್ಮೇಗೌಡ ಮತ್ತು ಗುರುಮೂರ್ತಿ ಎಂಬವರ ಭತ್ತದ ಬೆಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಹೊಯ್ಸಳ ಎಂಬವರ ಜೋಳ ಮತ್ತು ತೆಂಗಿನ ಸಸಿಗಳು ಮುಳುಗಿವೆ. ಶಿವಲಿಂಗೇಗೌಡ, ಕೆ.ಪಿ. ಸ್ವಾಮಿ, ಇತರರ ಕಬ್ಬು, ಬಾಳೆ, ಅಡಿಕೆ ತೋಟಗಳು ಜಲಾವೃತವಾಗಿವೆ.</p><p>ಕೂಡಲಕುಪ್ಪೆ ಗೇಟ್- ಕೂಡಲಕುಪ್ಪೆ ಸಂಪರ್ಕ ಸೇತುವೆ ಮೇಲೆ ಎರಡು ಅಡಿಗಳಷ್ಟು ನೀರು ಹರಿದಿದೆ. '75 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕೂಡಲಕುಪ್ಪೆ ಅಡ್ಡಹಳ್ಳ ಈ ಪರಿ ಉಕ್ಕಿ ಹರಿದಿದೆ' ಎಂದು ಗ್ರಾಮದ ಗೋಪಾಲಗೌಡ ತಿಳಿಸಿದ್ದಾರೆ.</p><p><strong>ಮಳೆಗೆ ಮನೆ ಗೋಡೆ ಕುಸಿತ: ಯುವಕ ಪಾರು</strong></p><p>ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಶ್ರೀರಂಗಪಟ್ಟಣ ತಾಲ್ಲೂಕಿನ ಚಿಕ್ಕಪಾಳ್ಯ ಗ್ರಾಮದಲ್ಲಿ ಮನೆಯ ಗೋಡೆ ಕುಸಿದಿದೆ.</p><p>ಗ್ರಾಮದ ದಿವಂಗತ ಗೋಪಾಲ್ ಅವರ ಮಗ ಪುನೀತ್ ಕುಮಾರ ಅವರ ಮನೆಯ ಗೋಡೆ 25 ಅಡಿಗಳಷ್ಟು ಕುಸಿದು ಬಿದ್ದಿದೆ. ಪುನೀತ್ ಮಲಗಿದ್ದ ವೇಳೆ ಗೋಡೆ ದಿಢೀರ್ ಕುಸಿದಿದ್ದು, ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.</p><p>ಮಣ್ಣಿನ ಗೋಡೆ ಕುಸಿದು ಪಾತ್ರೆ, ಟಿವಿ, ಫ್ಯಾನ್, ಬಟ್ಟೆ, ದವಸ- ಧಾನ್ಯ ಹಾಳಾಗಿವೆ.</p><p>ಪುನೀತ್ ಕುಮಾರ್ ಮನೆಯಲ್ಲಿ ಒಬ್ಬರೇ ವಾಸವಾಗಿದ್ದು, ಸದ್ಯ ಅವರಿಗೆ ಇರಲು ಮನೆ ಇಲ್ಲದ ಪರಿಸ್ಥಿತಿ ಬಂದಿದೆ ಎಂದು ಗ್ರಾಮದ ಮುಖಂಡ ಪುರುಷೋತ್ತಮ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>