ಜಿಲ್ಲೆಯಾದ್ಯಂತ ಅಂದಾಜು 125 ಕಿ.ಮೀಗೂ ಹೆಚ್ಚು ನಾಲಾ ವ್ಯಾಪ್ತಿ ಇದೆ. ಎಲ್ಲದಕ್ಕೂ ತಡೆಗೋಡೆ ನಿರ್ಮಾಣ ಮಾಡುವ ಅವಶ್ಯಕತೆ ಇಲ್ಲ. ರಸ್ತೆ ಇರುವ ಕಡೆಯಲ್ಲಷ್ಟೇ ತಡೆಗೋಡೆಯ ಅಗತ್ಯತೆ ಇದೆ. ಆದರೆ ಅನುದಾನ ಕೊರತೆ ಕಾರಣ ಹೇಳುವ ಅಧಿಕಾರಿಗಳು ತಡೆಗೋಡೆ ಅಳವಡಿಕೆ ಕಾರ್ಯವನ್ನು ನಿರ್ಲಕ್ಷ್ಯ ಮಾಡಿದ್ದಾರೆ. ‘ಲೋಕೋಪಯೋಗಿ ಇಲಾಖಾ ವ್ಯಾಪ್ತಿಯಲ್ಲಿರುವ ನಾಲೆ ರಸ್ತೆಗಳ ಸರ್ವೇ ಮಾಡಲು ಚಿಂತನೆ ನಡೆಸಲಾಗಿದೆ. ಈ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ತುರ್ತು ಅವಶ್ಯಕತೆ ಇರುವೆಡೆ ಸದ್ಯದಲ್ಲೇ ತಡೆಗೋಡೆ ಹಾಕಲಾಗುವುದು’ ಎಂದು ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಎಂಜಿನಿಯರ್ ರಘುರಾಂ ತಿಳಿಸಿದರು.