ಸಾಹಿತ್ಯದ ಬಗ್ಗೆ ಸಾಕಷ್ಟು ಅಭಿರುಚಿ ಹೊಂದಿರುವ ಅವರು ಆಧುನಿಕ ವಚನಗಳು, ಮಹದೇಶ್ವರ ಭಕ್ತಿಗೀತೆ, ಮನೆಯಂಗಳ, ವಚನಜ್ಯೋತಿ, ಬಸವ ಸ್ಮರಣೆ, ಶ್ರೀ ಸಿದ್ದಗಂಗಾ ಶಿವಯೋಗಿ, ಹೃದಯಗೀತೆ ಸೇರಿದಂತೆ ಹಲವು ಗ್ರಂಥಗಳನ್ನು ರಚಿಸಿದ್ದಾರೆ. ಜೊತೆಗೆ ಕವನ ಸಂಕಲನ, ಕಾದಂಬರಿಗಳಲ್ಲಿ ಬೆಳಕು ಚೆಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ.