<p><strong>ಮೈಸೂರು: </strong>ಇಲ್ಲಿನ ವಿವೇಕಾನಂದ ವೃತ್ತದ ಸಮೀಪ ವಾಸವಿದ್ದ ವೃದ್ಧ ದಂಪತಿಯನ್ನು ದರೋಡೆ ಮಾಡಿದ್ದ ಐವರು ಆರೋಪಿಗಳನ್ನು ದೇವರಾಜ ಠಾಣೆ ಪೊಲೀಸರ ಬಂಧಿಸಿದ್ದಾರೆ. ಬಂಧಿತರಿಂದ ₹ 12 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ದರೋಡೆ ನಡೆದ 18 ದಿನಗಳಲ್ಲೇ ಆರೋಪಿಗಳನ್ನು ಬಂಧಿಸಿರುವುದು ವಿಶೇಷ.</p>.<p>ಈ ಕುರಿತು ಮಾಹಿತಿ ನೀಡಿದ ಡಿಸಿಪಿ ಡಾ.ಎ.ಎನ್.ಪ್ರಕಾಶಗೌಡ್, ‘ಆಗಸ್ಟ್ 29ರಂದು ಬೆಳಿಗ್ಗೆ ವಿವೇಕಾನಂದನಗರದಲ್ಲಿರುವ ಏಳನೇ ಕ್ರಾಸ್ನಲ್ಲಿ ವೀರಭದ್ರಯ್ಯ ಅವರ ಮನೆಗೆ ನುಗ್ಗಿದ ಆರೋಪಿಗಳು ಡ್ರ್ಯಾಗನ್ ತೋರಿಸಿ ಇರಿದು ಕೊಲೆ ಮಾಡುವುದಾಗಿ ಬೆದರಿಸಿ, ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದನ್ನು ದರೋಡೆ ಮಾಡಿದ್ದರು’ ಎಂದರು.</p>.<p>ಅಂಬೇಡ್ಕರ್ ನಗರದ ಜಬೀವುಲ್ಲಾ ಷರೀಫ್ (27), ಉದಯಗಿರಿಯ ಇಬ್ರಾಹಿಂ ಅಹಮದ್ (24), ಗೌಸಿಯಾನಗರದ ಖಾಸಿಫ್ (22), ಗಿರಿಯಾಭೋವಿಪಾಳ್ಯದ ಗವೀಗೌಡ (42), ವಿವೇಕಾನಂದನಗರದ ಬಿ.ಎಸ್.ಗಿರೀಶ್ (52) ಬಂಧಿತರು ಎಂದು ಹೇಳಿದರು.</p>.<p><strong>ಪತ್ತೆಯಾಗಿದ್ದು ಹೇಗೆ?</strong></p>.<p>ಆರೋಪಿಗಳು ಗಿರವಿ ಅಂಗಡಿಯೊಂದರಲ್ಲಿ ಕದ್ದ ಒಡವೆಗಳನ್ನು ಮಾರಾಟ ಮಾಡಲು ಹೋದಾಗ ಮಾಹಿತಿದಾರರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಒಟ್ಟು ಐವರು ತಂಡದಲ್ಲಿರುವುದು ಗೊತ್ತಾದ ನಂತರ ಪೊಲೀಸರು ಸ್ಥಳಕ್ಕೆ ಬಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ದರೋಡೆ ಮಾಡಿರುವುದು ಗೊತ್ತಾಗಿದೆ.</p>.<p>ದರೋಡೆ ಮಾಡುವ ತಂಡಕ್ಕೆ ವೃದ್ಧ ದಂಪತಿ ಇಬ್ಬರೇ ಮನೆಯಲ್ಲಿರುವ ಕುರಿತು ಆರೋಪಿ ಗಿರೀಶ್ ಎಂಬಾತ ಮಾಹಿತಿ ನೀಡಿದ್ದ ಅಂಶ ವಿಚಾರಣೆ ವೇಳೆ ಬಯಲಾಗಿದೆ.</p>.<p>ಐಷಾರಾಮಿ ಜೀವನ: ಆರೋಪಿಗಳು ಐಷಾರಾಮಿ ಜೀವನ ನಡೆಸುವ ಪ್ರವೃತ್ತಿ ಹೊಂದಿದವರಾಗಿದ್ದರು. ಅದಕ್ಕಾಗಿಯೇ ಜಬೀವುಲ್ಲಾ ಎಂಬಾತ ತನ್ನ ಪಾಲಿಗೆ ಬಂದ ಚಿನ್ನವನ್ನು ಮಾರಾಟ ಮಾಡಿ, ಬಂದ ಹಣದಲ್ಲಿ ಮನೆಗೆ ಟಿ.ವಿ, ಪ್ರಿಡ್ಜ್, ಮಂಚ, ಸೋಫಾ, ವಾಷಿಂಗ್ ಮೆಷಿನ್ಗಳನ್ನು ತೆಗೆದುಕೊಂಡಿದ್ದ ಎಂದು ಡಿಸಿಪಿ ತಿಳಿಸಿದ್ದಾರೆ.</p>.<p>ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಎಂ.ಎಸ್.ಗೀತಾ, ಇನ್ಸ್ಪೆಕ್ಟರ್ ಪ್ರಸನ್ನಕುಮಾರ್, ಪಿಎಸ್ಐ ಎಸ್.ರಾಜು, ಎಎಸ್ಐ ಉದಯಕುಮಾರ್, ಸಿಬ್ಬಂದಿಯಾದ ಸೋಮಶೆಟ್ಟಿ, ವೇಣುಗೋಪಾಲ, ನಂದೀಶ್, ಪ್ರದೀಪ್, ಚಂದ್ರು,ವೀರೇಶ್ ಬಾಗೇವಾಡಿ, ನಾಗರಾಜು, ವಸಂತಕುಮಾರ್, ಚಂದ್ರು, ಪ್ರಕಾಶ್, ಧನಂಜಯ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ಇಲ್ಲಿನ ವಿವೇಕಾನಂದ ವೃತ್ತದ ಸಮೀಪ ವಾಸವಿದ್ದ ವೃದ್ಧ ದಂಪತಿಯನ್ನು ದರೋಡೆ ಮಾಡಿದ್ದ ಐವರು ಆರೋಪಿಗಳನ್ನು ದೇವರಾಜ ಠಾಣೆ ಪೊಲೀಸರ ಬಂಧಿಸಿದ್ದಾರೆ. ಬಂಧಿತರಿಂದ ₹ 12 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ದರೋಡೆ ನಡೆದ 18 ದಿನಗಳಲ್ಲೇ ಆರೋಪಿಗಳನ್ನು ಬಂಧಿಸಿರುವುದು ವಿಶೇಷ.</p>.<p>ಈ ಕುರಿತು ಮಾಹಿತಿ ನೀಡಿದ ಡಿಸಿಪಿ ಡಾ.ಎ.ಎನ್.ಪ್ರಕಾಶಗೌಡ್, ‘ಆಗಸ್ಟ್ 29ರಂದು ಬೆಳಿಗ್ಗೆ ವಿವೇಕಾನಂದನಗರದಲ್ಲಿರುವ ಏಳನೇ ಕ್ರಾಸ್ನಲ್ಲಿ ವೀರಭದ್ರಯ್ಯ ಅವರ ಮನೆಗೆ ನುಗ್ಗಿದ ಆರೋಪಿಗಳು ಡ್ರ್ಯಾಗನ್ ತೋರಿಸಿ ಇರಿದು ಕೊಲೆ ಮಾಡುವುದಾಗಿ ಬೆದರಿಸಿ, ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದನ್ನು ದರೋಡೆ ಮಾಡಿದ್ದರು’ ಎಂದರು.</p>.<p>ಅಂಬೇಡ್ಕರ್ ನಗರದ ಜಬೀವುಲ್ಲಾ ಷರೀಫ್ (27), ಉದಯಗಿರಿಯ ಇಬ್ರಾಹಿಂ ಅಹಮದ್ (24), ಗೌಸಿಯಾನಗರದ ಖಾಸಿಫ್ (22), ಗಿರಿಯಾಭೋವಿಪಾಳ್ಯದ ಗವೀಗೌಡ (42), ವಿವೇಕಾನಂದನಗರದ ಬಿ.ಎಸ್.ಗಿರೀಶ್ (52) ಬಂಧಿತರು ಎಂದು ಹೇಳಿದರು.</p>.<p><strong>ಪತ್ತೆಯಾಗಿದ್ದು ಹೇಗೆ?</strong></p>.<p>ಆರೋಪಿಗಳು ಗಿರವಿ ಅಂಗಡಿಯೊಂದರಲ್ಲಿ ಕದ್ದ ಒಡವೆಗಳನ್ನು ಮಾರಾಟ ಮಾಡಲು ಹೋದಾಗ ಮಾಹಿತಿದಾರರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಒಟ್ಟು ಐವರು ತಂಡದಲ್ಲಿರುವುದು ಗೊತ್ತಾದ ನಂತರ ಪೊಲೀಸರು ಸ್ಥಳಕ್ಕೆ ಬಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ದರೋಡೆ ಮಾಡಿರುವುದು ಗೊತ್ತಾಗಿದೆ.</p>.<p>ದರೋಡೆ ಮಾಡುವ ತಂಡಕ್ಕೆ ವೃದ್ಧ ದಂಪತಿ ಇಬ್ಬರೇ ಮನೆಯಲ್ಲಿರುವ ಕುರಿತು ಆರೋಪಿ ಗಿರೀಶ್ ಎಂಬಾತ ಮಾಹಿತಿ ನೀಡಿದ್ದ ಅಂಶ ವಿಚಾರಣೆ ವೇಳೆ ಬಯಲಾಗಿದೆ.</p>.<p>ಐಷಾರಾಮಿ ಜೀವನ: ಆರೋಪಿಗಳು ಐಷಾರಾಮಿ ಜೀವನ ನಡೆಸುವ ಪ್ರವೃತ್ತಿ ಹೊಂದಿದವರಾಗಿದ್ದರು. ಅದಕ್ಕಾಗಿಯೇ ಜಬೀವುಲ್ಲಾ ಎಂಬಾತ ತನ್ನ ಪಾಲಿಗೆ ಬಂದ ಚಿನ್ನವನ್ನು ಮಾರಾಟ ಮಾಡಿ, ಬಂದ ಹಣದಲ್ಲಿ ಮನೆಗೆ ಟಿ.ವಿ, ಪ್ರಿಡ್ಜ್, ಮಂಚ, ಸೋಫಾ, ವಾಷಿಂಗ್ ಮೆಷಿನ್ಗಳನ್ನು ತೆಗೆದುಕೊಂಡಿದ್ದ ಎಂದು ಡಿಸಿಪಿ ತಿಳಿಸಿದ್ದಾರೆ.</p>.<p>ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಎಂ.ಎಸ್.ಗೀತಾ, ಇನ್ಸ್ಪೆಕ್ಟರ್ ಪ್ರಸನ್ನಕುಮಾರ್, ಪಿಎಸ್ಐ ಎಸ್.ರಾಜು, ಎಎಸ್ಐ ಉದಯಕುಮಾರ್, ಸಿಬ್ಬಂದಿಯಾದ ಸೋಮಶೆಟ್ಟಿ, ವೇಣುಗೋಪಾಲ, ನಂದೀಶ್, ಪ್ರದೀಪ್, ಚಂದ್ರು,ವೀರೇಶ್ ಬಾಗೇವಾಡಿ, ನಾಗರಾಜು, ವಸಂತಕುಮಾರ್, ಚಂದ್ರು, ಪ್ರಕಾಶ್, ಧನಂಜಯ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>