<p><strong>ನಂಜನಗೂಡು:</strong> ನಗರದ ಶ್ರೀಕಂಠೇಶ್ವರ ದೇವಾಲಯದ ಬಳಿ ಗುರುವಾರ ಭಿಕ್ಷುಕಿಯ 3 ವರ್ಷದ ಹೆಣ್ಣು ಮಗಳನ್ನು ದುಷ್ಕರ್ಮಿಯೊಬ್ಬ ಅಪಹರಿಸಿದ್ದಾನೆ.</p>.<p>ಕೆ.ಆರ್.ನಗರ ಮೂಲದ ಪಾರ್ವತಿ ಕಳೆದ 9 ವರ್ಷಗಳಿಂದ ನಗರದ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಬಳಿ ತನ್ನ ತಾಯಿ ಹಾಗೂ ಮಗುವಿನೊಂದಿಗೆ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದಾಳೆ.</p>.<p>ಗುರುವಾರ ವ್ಯಕ್ತಿಯೊಬ್ಬ ಪಾರ್ವತಿ ಕೈಗೆ ₹ 10 ನೀಡಿ ಮಗುವನ್ನು ಸಾಕಲು ಕೊಡುವೆಯಾ ಎಂದು ಕೇಳಿದ್ದ ಎನ್ನಲಾಗಿದೆ. ಆಗ ಅಂಜಿದ ಪಾರ್ವತಿ ಬೀಕ್ಷೆ ಬೇಡುವುದನ್ನು ಬಿಟ್ಟು ಮಗಳೊಂದಿಗೆ ದೊಡ್ಡದ ರಥದ ಅಡಿ ಹೋಗಿ ಮಲಗಿದ್ದಾಳೆ. ಸ್ವಲ್ವ ಸಮಯದ ನಂತರ ಎಚ್ಚರವಾದಾಗ ಜೊತೆಯಲ್ಲಿದ್ದ ಮಗಳು ಇರಲಿಲ್ಲ.</p>.<p>ಈ ಕುರಿತು ಸ್ಥಳೀಯ ಠಾಣೆಯಲ್ಲಿದ ದೂರ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಟೀ ಅಂಗಡಿ ನಡೆಸುತ್ತಿದ್ದ ಚಾಮಲಾಪುರ ಹುಂಡಿಯ ಶ್ರೀಕಂಠನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.</p>.<p>ಸಿಪಿಐ ಲಕ್ಷ್ಮಿಕಾಂತ್ ತಳವಾರ್ ಸುದ್ದಿಗಾರರೊಂದಿಗೆ ಮಾತನಾಡಿ, ‘ದೇವಾಲಯದ ಸುತ್ತಲಿನ ಸಿಸಿಟಿವಿ ಕ್ಯಾಮೆರಾದ ದೃಶ್ಯಗಳನ್ನು ಪರಿಶೀಲಿಸಿ ಅಪಹರಣಕಾರನನ್ನು ಗುರುತಿಸುವ ಪ್ರಯತ್ನ ನಡೆಸಿದ್ದೇವೆ’ ಎಂದು ತಿಳಿಸಿದರು.</p>.<p class="Subhead"><strong>ಹಿಂದೆಯೂ ಮಗನ ಅಪಹರಣ:</strong> 2016ರಲ್ಲಿ ಇದೇ ಭಿಕ್ಷುಕಿಯ ಮಗನನ್ನು ಅಪಹರಿಸಿ ಮಾರಾಟ ಮಾಡಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಮಕ್ಕಳ ಕಳ್ಳರ ಜಾಲ ಭೇದಿಸಿ, ಬಾಲಕನನ್ನು ರಕ್ಷಿಸಿದ್ದರು. ಅಲ್ಲದೇ ಆತನನ್ನು ಮೈಸೂರಿನ ಮಕ್ಕಳ ಬಾಲ ಮಂದಿರದಲ್ಲಿ ಇರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಂಜನಗೂಡು:</strong> ನಗರದ ಶ್ರೀಕಂಠೇಶ್ವರ ದೇವಾಲಯದ ಬಳಿ ಗುರುವಾರ ಭಿಕ್ಷುಕಿಯ 3 ವರ್ಷದ ಹೆಣ್ಣು ಮಗಳನ್ನು ದುಷ್ಕರ್ಮಿಯೊಬ್ಬ ಅಪಹರಿಸಿದ್ದಾನೆ.</p>.<p>ಕೆ.ಆರ್.ನಗರ ಮೂಲದ ಪಾರ್ವತಿ ಕಳೆದ 9 ವರ್ಷಗಳಿಂದ ನಗರದ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಬಳಿ ತನ್ನ ತಾಯಿ ಹಾಗೂ ಮಗುವಿನೊಂದಿಗೆ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದಾಳೆ.</p>.<p>ಗುರುವಾರ ವ್ಯಕ್ತಿಯೊಬ್ಬ ಪಾರ್ವತಿ ಕೈಗೆ ₹ 10 ನೀಡಿ ಮಗುವನ್ನು ಸಾಕಲು ಕೊಡುವೆಯಾ ಎಂದು ಕೇಳಿದ್ದ ಎನ್ನಲಾಗಿದೆ. ಆಗ ಅಂಜಿದ ಪಾರ್ವತಿ ಬೀಕ್ಷೆ ಬೇಡುವುದನ್ನು ಬಿಟ್ಟು ಮಗಳೊಂದಿಗೆ ದೊಡ್ಡದ ರಥದ ಅಡಿ ಹೋಗಿ ಮಲಗಿದ್ದಾಳೆ. ಸ್ವಲ್ವ ಸಮಯದ ನಂತರ ಎಚ್ಚರವಾದಾಗ ಜೊತೆಯಲ್ಲಿದ್ದ ಮಗಳು ಇರಲಿಲ್ಲ.</p>.<p>ಈ ಕುರಿತು ಸ್ಥಳೀಯ ಠಾಣೆಯಲ್ಲಿದ ದೂರ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಟೀ ಅಂಗಡಿ ನಡೆಸುತ್ತಿದ್ದ ಚಾಮಲಾಪುರ ಹುಂಡಿಯ ಶ್ರೀಕಂಠನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.</p>.<p>ಸಿಪಿಐ ಲಕ್ಷ್ಮಿಕಾಂತ್ ತಳವಾರ್ ಸುದ್ದಿಗಾರರೊಂದಿಗೆ ಮಾತನಾಡಿ, ‘ದೇವಾಲಯದ ಸುತ್ತಲಿನ ಸಿಸಿಟಿವಿ ಕ್ಯಾಮೆರಾದ ದೃಶ್ಯಗಳನ್ನು ಪರಿಶೀಲಿಸಿ ಅಪಹರಣಕಾರನನ್ನು ಗುರುತಿಸುವ ಪ್ರಯತ್ನ ನಡೆಸಿದ್ದೇವೆ’ ಎಂದು ತಿಳಿಸಿದರು.</p>.<p class="Subhead"><strong>ಹಿಂದೆಯೂ ಮಗನ ಅಪಹರಣ:</strong> 2016ರಲ್ಲಿ ಇದೇ ಭಿಕ್ಷುಕಿಯ ಮಗನನ್ನು ಅಪಹರಿಸಿ ಮಾರಾಟ ಮಾಡಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಮಕ್ಕಳ ಕಳ್ಳರ ಜಾಲ ಭೇದಿಸಿ, ಬಾಲಕನನ್ನು ರಕ್ಷಿಸಿದ್ದರು. ಅಲ್ಲದೇ ಆತನನ್ನು ಮೈಸೂರಿನ ಮಕ್ಕಳ ಬಾಲ ಮಂದಿರದಲ್ಲಿ ಇರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>