<p>ಮೈಸೂರು: ಇಲ್ಲಿನ ಹೂಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಎಚ್ಡಿಎಫ್ಸಿ ಬ್ಯಾಂಕಿನ ಎಟಿಎಂನಿಂದ ಕಳ್ಳರು ₹12 ಲಕ್ಷ ನಗದನ್ನು ದೋಚಿದ್ದಾರೆ.</p>.<p>ರಾಣಿ ಮದ್ರಾಸ್ ಫ್ಯಾಕ್ಟರಿ ಸಮೀಪ ಇರುವ ಈ ಎಟಿಎಂನಲ್ಲಿ ಭದ್ರತಾ ಸಿಬ್ಬಂದಿ ಇರಲಿಲ್ಲ. ಗುರುವಾರ ರಾತ್ರಿ ಕಳ್ಳರು ಎಟಿಎಂ ಶೆಟರ್ನ ಬೀಗ ಮುರಿದು, ಗ್ಯಾಸ್ ಕಟರ್ ಮೂಲಕ ಎಟಿಎಂನ ಭದ್ರತಾ ಬಾಗಿಲನ್ನು ಕೊರೆದು ಹಣವನ್ನೆಲ್ಲ ಕಳವು ಮಾಡಿದ್ದಾರೆ.</p>.<p>ಎಟಿಎಂನಲ್ಲಿದ್ದ ಎಲ್ಲ ಸಿಸಿಟಿವಿ ಕ್ಯಾಮೆರಾಗಳಿಗೆ ರಾಸಾಯನಿಕವನ್ನು ಸಿಂಪಡಿಸುವ ಮೂಲಕ ದೃಶ್ಯಾವಳಿಗಳನ್ನು ಮಸುಕುಗೊಳಿಸುವ ಪ್ರಯತ್ನವನ್ನು ಕಳ್ಳರು ನಡೆಸಿದ್ದಾರೆ. ಜತೆಗೆ, ಗ್ಯಾಸ್ ಕಟರ್, ವೆಲ್ಟಿಂಗ್ ಗ್ಯಾಸ್ ಸಿಲಿಂಡರ್, ಎಲ್ಪಿಜಿ ಸಿಲಿಂಡರ್ ಮತ್ತು 1 ಹಾರೆಯನ್ನು ಎಟಿಎಂ ಮಳಿಗೆಯಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.</p>.<p>ಕಳ್ಳತನವನ್ನು ಗಮನಿಸಿದರೆ ಇವರು ವೃತ್ತಿಪರ ಕಳ್ಳರೇ ಇರಬಹುದು ಎಂಬ ಅನುಮಾನಗಳು ಮೂಡಿವೆ. ಸಾಕಷ್ಟು ಪೂರ್ವಸಿದ್ಧತೆ ನಡೆಸಿಯೇ ಕಳ್ಳರು ಕಳ್ಳತನಕ್ಕೆ ಕೈ ಹಾಕಿರುವುದು ಖಚಿತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p class="Briefhead"><strong>ಬಾಲಕನ ಮೃತದೇಹ ಪತ್ತೆ<br />ಮೈಸೂರು:</strong> ಗೋಕರ್ಣದ ಮೇನ್ ಬೀಚ್ನಲ್ಲಿ ಗುರುವಾರ ನೀರು ಪಾಲಾಗಿದ್ದ ಇಲ್ಲಿನ ಕೆ.ಆರ್.ಮೊಹಲ್ಲಾದ ಬಾಲಕ ಜಿ.ವಿ. ಉಲ್ಲಾಸ (15) ಮೃತದೇಹವು ಶುಕ್ರವಾರ ಪತ್ತೆಯಾಯಿತು. ಇಲ್ಲಿಂದ ಪ್ರವಾಸಕ್ಕೆ ಹೊರಟಿದ್ದ 8 ಮಂದಿಯ ತಂಡದಲ್ಲಿದ್ದ ಇಬ್ಬರು ರಭಸದ ಅಲೆಯ ಹೊಡೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದರು. ಮತ್ತೊಬ್ಬ ಬಾಲಕ ಸುಹಾಸ (16) ಮೃತದೇಹವು ಗುರುವಾರ ಪತ್ತೆಯಾಗಿತ್ತು.</p>.<p>ಈ ಮಧ್ಯೆ ಇವರು ವಿದ್ಯಾಭ್ಯಾಸ ನಡೆಸುತ್ತಿದ್ದ ಬನ್ನೂರಿನ ವಿವೇಕಾನಂದ ವಿದ್ಯಾಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಪ್ರಕಾಶ್ ಪ್ರತಿಕ್ರಿಯಿಸಿದ್ದು, ‘ವಿದ್ಯಾರ್ಥಿಗಳನ್ನು ಲಾಕ್ಡೌನ್ ಸಮಯದಲ್ಲೇ ಅವರವರ ಮನೆಗೆ ಕಳುಹಿಸಲಾಗಿತ್ತು. ವಿದ್ಯಾರ್ಥಿಗಳು ಅವರ ಮನೆಯಿಂದಲೇ ಪ್ರವಾಸ ಹೊರಟಿದ್ದರು. ಪ್ರವಾಸಕ್ಕೂ ವಿದ್ಯಾಸಂಸ್ಥೆಗೂ ಯಾವುದೇ ಸಂಬಂಧ ಇಲ್ಲ’ ಎಂದು ತಿಳಿಸಿದ್ದಾರೆ.</p>.<p class="Briefhead"><strong>ಕೊಲೆ ಆರೋಪಿಗಳ ಬಂಧನ<br />ಮೈಸೂರು:</strong> ತಿ.ನರಸೀಪುರ ತಾಲ್ಲೂಕಿನ ಕೇತುಪುರ ಗ್ರಾಮದಲ್ಲಿ ಸೆ.12ರ ರಾತ್ರಿ ನಡೆದ ಸಿದ್ಧರಾಜು ಎಂಬುವರ ಕೊಲೆ ಪ್ರಕರಣದ 7 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.</p>.<p>ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ಕೆ.ಆರ್.ಸುಭಾಷ್ (23), ಚಂದನ್ (22), ಸಂಜಯ್ (24), ಪುನೀತ್ (22), ವಿನಯ್ (30), ರವಿ (24), ಚಂದ್ರು (25) ಬಂಧಿತರು. ಇವರಿಂದ ಮಾರಕಾಸ್ತ್ರಗಳು, ಬೈಕ್ಗಳು, ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ಇಲ್ಲಿನ ಹೂಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಎಚ್ಡಿಎಫ್ಸಿ ಬ್ಯಾಂಕಿನ ಎಟಿಎಂನಿಂದ ಕಳ್ಳರು ₹12 ಲಕ್ಷ ನಗದನ್ನು ದೋಚಿದ್ದಾರೆ.</p>.<p>ರಾಣಿ ಮದ್ರಾಸ್ ಫ್ಯಾಕ್ಟರಿ ಸಮೀಪ ಇರುವ ಈ ಎಟಿಎಂನಲ್ಲಿ ಭದ್ರತಾ ಸಿಬ್ಬಂದಿ ಇರಲಿಲ್ಲ. ಗುರುವಾರ ರಾತ್ರಿ ಕಳ್ಳರು ಎಟಿಎಂ ಶೆಟರ್ನ ಬೀಗ ಮುರಿದು, ಗ್ಯಾಸ್ ಕಟರ್ ಮೂಲಕ ಎಟಿಎಂನ ಭದ್ರತಾ ಬಾಗಿಲನ್ನು ಕೊರೆದು ಹಣವನ್ನೆಲ್ಲ ಕಳವು ಮಾಡಿದ್ದಾರೆ.</p>.<p>ಎಟಿಎಂನಲ್ಲಿದ್ದ ಎಲ್ಲ ಸಿಸಿಟಿವಿ ಕ್ಯಾಮೆರಾಗಳಿಗೆ ರಾಸಾಯನಿಕವನ್ನು ಸಿಂಪಡಿಸುವ ಮೂಲಕ ದೃಶ್ಯಾವಳಿಗಳನ್ನು ಮಸುಕುಗೊಳಿಸುವ ಪ್ರಯತ್ನವನ್ನು ಕಳ್ಳರು ನಡೆಸಿದ್ದಾರೆ. ಜತೆಗೆ, ಗ್ಯಾಸ್ ಕಟರ್, ವೆಲ್ಟಿಂಗ್ ಗ್ಯಾಸ್ ಸಿಲಿಂಡರ್, ಎಲ್ಪಿಜಿ ಸಿಲಿಂಡರ್ ಮತ್ತು 1 ಹಾರೆಯನ್ನು ಎಟಿಎಂ ಮಳಿಗೆಯಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.</p>.<p>ಕಳ್ಳತನವನ್ನು ಗಮನಿಸಿದರೆ ಇವರು ವೃತ್ತಿಪರ ಕಳ್ಳರೇ ಇರಬಹುದು ಎಂಬ ಅನುಮಾನಗಳು ಮೂಡಿವೆ. ಸಾಕಷ್ಟು ಪೂರ್ವಸಿದ್ಧತೆ ನಡೆಸಿಯೇ ಕಳ್ಳರು ಕಳ್ಳತನಕ್ಕೆ ಕೈ ಹಾಕಿರುವುದು ಖಚಿತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p class="Briefhead"><strong>ಬಾಲಕನ ಮೃತದೇಹ ಪತ್ತೆ<br />ಮೈಸೂರು:</strong> ಗೋಕರ್ಣದ ಮೇನ್ ಬೀಚ್ನಲ್ಲಿ ಗುರುವಾರ ನೀರು ಪಾಲಾಗಿದ್ದ ಇಲ್ಲಿನ ಕೆ.ಆರ್.ಮೊಹಲ್ಲಾದ ಬಾಲಕ ಜಿ.ವಿ. ಉಲ್ಲಾಸ (15) ಮೃತದೇಹವು ಶುಕ್ರವಾರ ಪತ್ತೆಯಾಯಿತು. ಇಲ್ಲಿಂದ ಪ್ರವಾಸಕ್ಕೆ ಹೊರಟಿದ್ದ 8 ಮಂದಿಯ ತಂಡದಲ್ಲಿದ್ದ ಇಬ್ಬರು ರಭಸದ ಅಲೆಯ ಹೊಡೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದರು. ಮತ್ತೊಬ್ಬ ಬಾಲಕ ಸುಹಾಸ (16) ಮೃತದೇಹವು ಗುರುವಾರ ಪತ್ತೆಯಾಗಿತ್ತು.</p>.<p>ಈ ಮಧ್ಯೆ ಇವರು ವಿದ್ಯಾಭ್ಯಾಸ ನಡೆಸುತ್ತಿದ್ದ ಬನ್ನೂರಿನ ವಿವೇಕಾನಂದ ವಿದ್ಯಾಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಪ್ರಕಾಶ್ ಪ್ರತಿಕ್ರಿಯಿಸಿದ್ದು, ‘ವಿದ್ಯಾರ್ಥಿಗಳನ್ನು ಲಾಕ್ಡೌನ್ ಸಮಯದಲ್ಲೇ ಅವರವರ ಮನೆಗೆ ಕಳುಹಿಸಲಾಗಿತ್ತು. ವಿದ್ಯಾರ್ಥಿಗಳು ಅವರ ಮನೆಯಿಂದಲೇ ಪ್ರವಾಸ ಹೊರಟಿದ್ದರು. ಪ್ರವಾಸಕ್ಕೂ ವಿದ್ಯಾಸಂಸ್ಥೆಗೂ ಯಾವುದೇ ಸಂಬಂಧ ಇಲ್ಲ’ ಎಂದು ತಿಳಿಸಿದ್ದಾರೆ.</p>.<p class="Briefhead"><strong>ಕೊಲೆ ಆರೋಪಿಗಳ ಬಂಧನ<br />ಮೈಸೂರು:</strong> ತಿ.ನರಸೀಪುರ ತಾಲ್ಲೂಕಿನ ಕೇತುಪುರ ಗ್ರಾಮದಲ್ಲಿ ಸೆ.12ರ ರಾತ್ರಿ ನಡೆದ ಸಿದ್ಧರಾಜು ಎಂಬುವರ ಕೊಲೆ ಪ್ರಕರಣದ 7 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.</p>.<p>ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ಕೆ.ಆರ್.ಸುಭಾಷ್ (23), ಚಂದನ್ (22), ಸಂಜಯ್ (24), ಪುನೀತ್ (22), ವಿನಯ್ (30), ರವಿ (24), ಚಂದ್ರು (25) ಬಂಧಿತರು. ಇವರಿಂದ ಮಾರಕಾಸ್ತ್ರಗಳು, ಬೈಕ್ಗಳು, ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>