‘ಸ್ವಾಮಿ ವಿವೇಕಾನಂದರು ಸಮಗ್ರ ಕೃತಿಗಳ ಸಂಪುಟ 3ರ ಪುಟ 536ರಲ್ಲಿ ‘ನಿಮಗೆ ಆಶ್ಚರ್ಯವಾಗಬಹುದು. ಪ್ರಾಚೀನ ಹಿಂದೂ ವಿಧಿ ಮತ್ತು ಆಚರಣೆಗಳ ಪ್ರಕಾರ, ದನದ ಮಾಂಸ ತಿನ್ನದಿದ್ದರೆ ಆತ ಒಳ್ಳೆಯ ಹಿಂದೂ ಆಗಲು ಸಾಧ್ಯವಿರಲಿಲ್ಲ... ದನವನ್ನು ತಿನ್ನದೇ ಯಾವ ಬ್ರಾಹ್ಮಣನೂ ಬ್ರಾಹ್ಮಣನಾಗಿ ಇರಲು ಸಾಧ್ಯವಿರಲಿಲ್ಲ’ ಎಂದು ಹೇಳಿದ್ದಾರೆ. ಹಾಗಾದರೆ ಸ್ವಾಮಿ ವಿವೇಕಾನಂದರ ಬಳಿಯೂ ಕ್ಷಮೆ ಕೇಳಿಸಿ. ಯಜ್ಞ, ಯಾಗಾದಿಗಳಲ್ಲಿ ದನವನ್ನು ತಿಂದು, ಇದೀಗ ಮಾಂಸಾಹಾರ ತಿನ್ನಬಾರದು ಎನ್ನುತ್ತಿರುವ ನಿಮ್ಮ ಕುತಂತ್ರಕ್ಕೆ ಏನು ಹೇಳಬೇಕು ಎಂದು ಪ್ರಶ್ನಿಸಿದರು.