ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಈತ, ‘ಇಂದು ನನ್ನ ಜನ್ಮದಿನ. ಇದರ ಪ್ರಯುಕ್ತ ಒಂದು ಒಳ್ಳೆಯ ಕೆಲಸ ಮಾಡಬೇಕೆಂದು ತುಂಬಾ ದಿನಗಳಿಂದ ಆಸೆಯಿತ್ತು. ಆದರೆ, ನಮ್ಮ ದೇಶ ಇಂತಹ ಕಠಿಣ ಪರಿಸ್ಥಿತಿ ಎದುರಿಸುತ್ತಿರುವಾಗ ನಾನು ಜನ್ಮದಿನ ಆಚರಣೆ ಮಾಡುವುದು ಬೇಡ ಎನಿಸಿ ವರ್ಷದಿಂದ ಕೂಡಿಟ್ಟ ಹಣವನ್ನು ಕಷ್ಟ ಎದುರಿಸುತ್ತಿರುವ ಜನರಿಗೆ ಸ್ವಲ್ಪ ನೆರವಾಗಲಿ ಎಂದು ನೀಡಿರುವೆ. ಇದೇ ನನ್ನ ಆಚರಣೆ’ ಎಂದು ತಿಳಿಸಿದ್ದಾನೆ.