<p><strong>ಹುಣಸೂರು: </strong>ಇಲ್ಲಿನ ಉಪವಿಭಾಗ ಸಾರ್ವಜನಿಕ ಆಸ್ಪತ್ರೆಯ ಡಯಾಲಿಸಿಸ್ ಘಟಕದಲ್ಲಿನ ಯಂತ್ರಗಳ ನಿರ್ವಹಣೆ ಹಾಗೂ ತಜ್ಞ ವೈದ್ಯರ ಕೊರತೆಯಿಂದ ರೋಗಿಗಳು ಪರದಾಡುತ್ತಿದ್ದಾರೆ.</p>.<p>ಡಯಾಲಿಸಿಸ್ ಘಟಕದ ನಿರ್ವಹಣೆಗೆ ಸರ್ಕಾರದ ಅನುದಾನ ಕೊರತೆ ತೊಡಕಾಗಿದೆ.</p>.<p>‘ಘಟಕದಲ್ಲಿ ಸ್ವಚ್ಛತೆಯಿದೆ, ಆದರೆ ಮೂತ್ರಪಿಂಡ ತಜ್ಞರು ಇಲ್ಲ. ಗುತ್ತಿಗೆ ಪಡೆದ ಕಂಪನಿಯವರು ಸರ್ಕಾರದಿಂದ ಹಣ ಪಡೆದರೂ ನಿರ್ವಹಣೆ ಮಾಡಲು ಮುಂದಾಗಿಲ್ಲ’ ಎಂದು ರೋಗಿ ಸಂದೀಪ್ ಆರೋಪಿಸಿದರು.</p>.<p>‘ಮೂರು ವರ್ಷಗಳಿಂದ ಮೂತ್ರಪಿಂಡ ಸಮಸ್ಯೆಗೆ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದೇನೆ. ಘಟಕದಲ್ಲಿ ಎಲ್ಲವೂ ಸರಿಯಿದೆ ಎನ್ನಲಾಗದು. ಇರುವ ವ್ಯವಸ್ಥೆಯಲ್ಲಿ ಚಿಕಿತ್ಸೆ ನಡೆದಿದೆ. ಆರೋಗ್ಯ ಸಿಬ್ಬಂದಿ ಮಾಡಿದ ಎಡವಟ್ಟಿನಿಂದಾಗಿ ಎಡಗೈ ಊತ ಬಂದಿದೆ’ ಎಂದು ಅಳಲು ತೋಡಿಕೊಂಡರು.</p>.<p>‘ಮೂರು ವರ್ಷಗಳಿಂದ ಘಟಕದಲ್ಲಿನ ಯಂತ್ರಗಳ ಸರ್ವೀಸ್ ಆಗಿಲ್ಲ. ಆದ್ದರಿಂದ ಅವುಗಳ ಕಾರ್ಯಕ್ಷಮತೆ ಕಡಿಮೆಯಾಗಿದೆ’ ಎಂದು ರೋಗಿ ಎಂ.ಬಿ.ಪ್ರಭು ಹೇಳಿದರು.</p>.<p>‘ಘಟಕದ ನಿರ್ವಹಣೆಗೆ ವಿಶೇಷ ಅನುದಾನ ಇಲ್ಲ. ತುರ್ತು ಔಷಧಿ ಖರೀದಿಗೆ ಆರೋಗ್ಯ ರಕ್ಷಾ ಸಮಿತಿಯಿಂದ ತಿಂಗಳಿಗೆ ₹ 70 ಸಾವಿರ ವೆಚ್ಚ ಮಾಡಿ ರೋಗಿಗಳಿಗೆ ಬೇಕಾದ ಔಷಧಿ ವ್ಯವಸ್ಥೆ ಮಾಡಿದ್ದೇವೆ. ಮೂತ್ರಪಿಂಡ ತಜ್ಞರಿಲ್ಲದಿದ್ದರೂ ಸ್ಥಳೀಯ ತಜ್ಞರನ್ನು ನಿಯೋಜಿಸಿದ್ದೇವೆ. ಯಂತ್ರಗಳ ನಿರ್ವಹಣೆ ಸಂಬಂಧ ಉನ್ನತ ಅಧಿಕಾರಿಗಳ ಗಮನಕ್ಕೆ ತರಲಾಗಿದೆ’ ಎಂದು ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ. ಸರ್ವೇಶ್ ರಾಜೇ ಅರಸು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.</p>.<p>‘ಸರ್ಕಾರ ಕೋವಿಡ್ ಹೊರತುಪಡಿಸಿ ಉಳಿದ ರೋಗಗಳಿಗೆ ಸಂಬಂಧಿಸಿದಂತೆ ಸರಿಯಾಗಿ ಗಮನ ನೀಡಿಲ್ಲ. ಗುತ್ತಿಗೆದಾರನಿಗೆ ಒಂದು ವರ್ಷದಿಂದ ಹಣ ಪಾವತಿಸಿಲ್ಲ. ಈ ಬಾರಿ ನಡೆಯುವ ಅಧಿವೇಶನದಲ್ಲಿ ಆರೋಗ್ಯ ಸಚಿವರ ಗಮನ ಸೆಳೆಯುತ್ತೇನೆ’ ಎಂದು ಶಾಸಕ ಎಚ್.ಪಿ. ಮಂಜುನಾಥ್<br />ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸೂರು: </strong>ಇಲ್ಲಿನ ಉಪವಿಭಾಗ ಸಾರ್ವಜನಿಕ ಆಸ್ಪತ್ರೆಯ ಡಯಾಲಿಸಿಸ್ ಘಟಕದಲ್ಲಿನ ಯಂತ್ರಗಳ ನಿರ್ವಹಣೆ ಹಾಗೂ ತಜ್ಞ ವೈದ್ಯರ ಕೊರತೆಯಿಂದ ರೋಗಿಗಳು ಪರದಾಡುತ್ತಿದ್ದಾರೆ.</p>.<p>ಡಯಾಲಿಸಿಸ್ ಘಟಕದ ನಿರ್ವಹಣೆಗೆ ಸರ್ಕಾರದ ಅನುದಾನ ಕೊರತೆ ತೊಡಕಾಗಿದೆ.</p>.<p>‘ಘಟಕದಲ್ಲಿ ಸ್ವಚ್ಛತೆಯಿದೆ, ಆದರೆ ಮೂತ್ರಪಿಂಡ ತಜ್ಞರು ಇಲ್ಲ. ಗುತ್ತಿಗೆ ಪಡೆದ ಕಂಪನಿಯವರು ಸರ್ಕಾರದಿಂದ ಹಣ ಪಡೆದರೂ ನಿರ್ವಹಣೆ ಮಾಡಲು ಮುಂದಾಗಿಲ್ಲ’ ಎಂದು ರೋಗಿ ಸಂದೀಪ್ ಆರೋಪಿಸಿದರು.</p>.<p>‘ಮೂರು ವರ್ಷಗಳಿಂದ ಮೂತ್ರಪಿಂಡ ಸಮಸ್ಯೆಗೆ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದೇನೆ. ಘಟಕದಲ್ಲಿ ಎಲ್ಲವೂ ಸರಿಯಿದೆ ಎನ್ನಲಾಗದು. ಇರುವ ವ್ಯವಸ್ಥೆಯಲ್ಲಿ ಚಿಕಿತ್ಸೆ ನಡೆದಿದೆ. ಆರೋಗ್ಯ ಸಿಬ್ಬಂದಿ ಮಾಡಿದ ಎಡವಟ್ಟಿನಿಂದಾಗಿ ಎಡಗೈ ಊತ ಬಂದಿದೆ’ ಎಂದು ಅಳಲು ತೋಡಿಕೊಂಡರು.</p>.<p>‘ಮೂರು ವರ್ಷಗಳಿಂದ ಘಟಕದಲ್ಲಿನ ಯಂತ್ರಗಳ ಸರ್ವೀಸ್ ಆಗಿಲ್ಲ. ಆದ್ದರಿಂದ ಅವುಗಳ ಕಾರ್ಯಕ್ಷಮತೆ ಕಡಿಮೆಯಾಗಿದೆ’ ಎಂದು ರೋಗಿ ಎಂ.ಬಿ.ಪ್ರಭು ಹೇಳಿದರು.</p>.<p>‘ಘಟಕದ ನಿರ್ವಹಣೆಗೆ ವಿಶೇಷ ಅನುದಾನ ಇಲ್ಲ. ತುರ್ತು ಔಷಧಿ ಖರೀದಿಗೆ ಆರೋಗ್ಯ ರಕ್ಷಾ ಸಮಿತಿಯಿಂದ ತಿಂಗಳಿಗೆ ₹ 70 ಸಾವಿರ ವೆಚ್ಚ ಮಾಡಿ ರೋಗಿಗಳಿಗೆ ಬೇಕಾದ ಔಷಧಿ ವ್ಯವಸ್ಥೆ ಮಾಡಿದ್ದೇವೆ. ಮೂತ್ರಪಿಂಡ ತಜ್ಞರಿಲ್ಲದಿದ್ದರೂ ಸ್ಥಳೀಯ ತಜ್ಞರನ್ನು ನಿಯೋಜಿಸಿದ್ದೇವೆ. ಯಂತ್ರಗಳ ನಿರ್ವಹಣೆ ಸಂಬಂಧ ಉನ್ನತ ಅಧಿಕಾರಿಗಳ ಗಮನಕ್ಕೆ ತರಲಾಗಿದೆ’ ಎಂದು ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ. ಸರ್ವೇಶ್ ರಾಜೇ ಅರಸು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.</p>.<p>‘ಸರ್ಕಾರ ಕೋವಿಡ್ ಹೊರತುಪಡಿಸಿ ಉಳಿದ ರೋಗಗಳಿಗೆ ಸಂಬಂಧಿಸಿದಂತೆ ಸರಿಯಾಗಿ ಗಮನ ನೀಡಿಲ್ಲ. ಗುತ್ತಿಗೆದಾರನಿಗೆ ಒಂದು ವರ್ಷದಿಂದ ಹಣ ಪಾವತಿಸಿಲ್ಲ. ಈ ಬಾರಿ ನಡೆಯುವ ಅಧಿವೇಶನದಲ್ಲಿ ಆರೋಗ್ಯ ಸಚಿವರ ಗಮನ ಸೆಳೆಯುತ್ತೇನೆ’ ಎಂದು ಶಾಸಕ ಎಚ್.ಪಿ. ಮಂಜುನಾಥ್<br />ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>