‘ಘಟಕದ ನಿರ್ವಹಣೆಗೆ ವಿಶೇಷ ಅನುದಾನ ಇಲ್ಲ. ತುರ್ತು ಔಷಧಿ ಖರೀದಿಗೆ ಆರೋಗ್ಯ ರಕ್ಷಾ ಸಮಿತಿಯಿಂದ ತಿಂಗಳಿಗೆ ₹ 70 ಸಾವಿರ ವೆಚ್ಚ ಮಾಡಿ ರೋಗಿಗಳಿಗೆ ಬೇಕಾದ ಔಷಧಿ ವ್ಯವಸ್ಥೆ ಮಾಡಿದ್ದೇವೆ. ಮೂತ್ರಪಿಂಡ ತಜ್ಞರಿಲ್ಲದಿದ್ದರೂ ಸ್ಥಳೀಯ ತಜ್ಞರನ್ನು ನಿಯೋಜಿಸಿದ್ದೇವೆ. ಯಂತ್ರಗಳ ನಿರ್ವಹಣೆ ಸಂಬಂಧ ಉನ್ನತ ಅಧಿಕಾರಿಗಳ ಗಮನಕ್ಕೆ ತರಲಾಗಿದೆ’ ಎಂದು ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ. ಸರ್ವೇಶ್ ರಾಜೇ ಅರಸು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.