ಗುಂಡ್ಲುಪೇಟೆ: ಬಂಡೀಪುರದ ಅರಣ್ಯದ ಅಂಚಿನಲ್ಲಿ ದಾಂಧಲೆ ನಡೆಸಿದ ಒಂಟಿ ಸಲಗವನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ದಸರಾ ಆನೆ ಅಭಿಮನ್ಯು ಸೇರಿದಂತೆ ಆರು ಆನೆಗಳನ್ನು ಕಾರ್ಯಾಚರಣೆಗೆ ಬಳಸಲಾಗಿತ್ತು. ರೇಡಿಯೊ ಕಾಲರ್ ಅಳವಡಿಸಿದ್ದ ಆನೆ ತಮಿಳುನಾಡಿನಿಂದ ಬಂದಿತ್ತು. ಶಿವಪುರ ಮತ್ತು ಹಂಗಳ ಗ್ರಾಮದಲ್ಲಿ ಮಂಗಳವಾರ ಇಬ್ಬರ ಮೇಲೆ ಈ ಆನೆ ದಾಳಿ ಮಾಡಿತ್ತು .