ಮೈಸೂರು: ಮಾಜಿ ಉಪಮುಖ್ಯಮಂತ್ರಿಜಿ.ಪರಮೇಶ್ವರ್ ಅವರು ಗುರುವಾರ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಜತೆ ಸುಮಾರು ಒಂದು ಗಂಟೆ ಮಾತುಕತೆ ನಡೆಸಿದರು.
‘ಸುತ್ತೂರು ಶ್ರೀಗಳ ಪೂರ್ವಾಶ್ರಮದ ಮಾತೃಶ್ರೀ ಇತ್ತೀಚೆಗೆ ನಿಧನರಾಗಿದ್ದಾರೆ. ಆದ್ದರಿಂದ ಸೌಜನ್ಯದ ಭೇಟಿ ಕೊಟ್ಟಿದ್ದೇನೆ. ಈ ಭೇಟಿಗೆ ಬೇರೆ ಯಾವುದೇ ಅರ್ಥ ಕಲ್ಪಿಸಬೇಕಾಗಿಲ್ಲ’ ಎಂದು ಪ್ರತಿಕ್ರಿಯಿಸಿದರು.
‘ಮುಂದಿನ ಸಿಎಂ ಪರಮೇಶ್ವರ್’ ಘೋಷಣೆ: ಪರಮೇಶ್ವರ್ ಅವರು ಸುತ್ತೂರು ಶಾಖಾ ಮಠಕ್ಕೆ ಬಂದಿಳಿದಾಗ ಅಲ್ಲಿ ಸೇರಿದ್ದ ಬೆಂಬಲಿಗರು, ‘ಮುಂದಿನ ಮುಖ್ಯಮಂತ್ರಿ ಪರಮೇಶ್ವರ್ ಅವರಿಗೆ ಜಯವಾಗಲಿ’ ಎಂದು ಘೋಷಣೆ ಕೂಗಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ‘ಹೌದು ಕೆಲವು ಸ್ನೇಹಿತರು ಆ ರೀತಿ ಘೋಷಣೆ ಕೂಗಿದರು. ಬೇಡಪ್ಪಾ.. ಆ ರೀತಿ ಘೋಷಣೆ ಕೂಗಬೇಡಿ ಎಂದು ಅವರನ್ನು ಸುಮ್ಮನಾಗಿಸಿದೆ’ ಎಂದರು.