<p><strong>ಮೈಸೂರು:</strong> ಸಂಸದ ಪ್ರತಾಪ ಸಿಂಹ ಅವರನ್ನು ನಮ್ಮ ಸಂಸದ ಎಂದು ಕರೆದುಕೊಳ್ಳಲು ಅವಮಾನವಾಗುತ್ತಿದೆ ಎಂದು ಸಂಸ್ಕೃತಿ ಚಿಂತಕ ಎಸ್.ತುಕಾರಾಂ ತಿಳಿಸಿದರು.<br /><br />ದಲಿತ ಸಂಘರ್ಷ ಸಮಿತಿ (ಸಂಯೋಜಕ) ಜಿಲ್ಲಾ ಸಮಿತಿಯು ಇಲ್ಲಿನ ಎಂಜಿನಿಯರುಗಳ ಸಂಸ್ಥೆಯಲ್ಲಿ ಭಾನುವಾರ ಏರ್ಪಡಿಸಿದ್ದ ಸಂವಿಧಾನದ ಆಶಯಗಳು ಮತ್ತು ದಲಿತರ ಮುಂದಿನ ಸವಾಲುಗಳು ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.<br /><br />ಶಾಸಕ ಪ್ರಿಯಾಂಕ್ ಖರ್ಗೆ ಅವರನ್ನು ಕುರಿತು ಪ್ರತಾಪಸಿಂಹ ಬಳಸಿದ ಅಸಂವಿಧಾನಿಕ ಪದಗಳು ಬೇಸರ ತರಿಸಿವೆ. ಇಂತಹವರನ್ನು ನಮ್ಮ ಸಂಸದ ಎಂದು ಕರೆದುಕೊಳ್ಳಲು ಅವಮಾನ ಅನ್ನಿಸುತ್ತದೆ ಎಂದರು.<br /><br />ಮಲ್ಲಿಕಾರ್ಜುನ ಖರ್ಗೆ ಅವರ ಮಾತನ್ನು ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ ಅವರು ಆಲಿಸಿ, ಗೌರವಿಸುತ್ತಿದ್ದರು. ಇವರ ಭಾವಚಿತ್ರ ನೋಡಿದರೆ ಪ್ರತಾಪಸಿಂಹ ಅವರ ಅಂತಃಕರಣ ಕಲಕುವುದಿಲ್ಲವೆ ಎಂದು ಪ್ರಶ್ನಿಸಿದರು.<br /><br />ಹಂಸಲೇಖ ಅವರ ಮಾತನ್ನು ಸ್ವೀಕರಿಸಿದ ರೀತಿಯನ್ನು ನೋಡಿದರೆ ನಮಗೆ ಇನ್ನು ಅಭಿಪ್ರಾಯವನ್ನು ಮುಕ್ತವಾಗಿ ಹೇಳಿಕೊಳ್ಳುವ ಅವಕಾಶ ಇಲ್ಲ ಎನ್ನಿಸುತ್ತದೆ ಎಂದರು.<br /><br />ನಮ್ಮ ಅಭಿಪ್ರಾಯವನ್ನು ಕೇಳಿಸಿಕೊಳ್ಳಲು ಆಗುವುದಿಲ್ಲ ಎಂದರೆ ನಮಗೂ ತಾಯಿನೆಲ ಇದೆಯೆ ಎಂದು ಪ್ರಶ್ನೆ ಮೂಡುತ್ತದೆ ಎಂದರು.<br />ಈ ಪ್ರಕರಣಗಳನ್ನು ಗಮನಿಸಿದರೆ ಮನುವಾದಿಗಳ ಪಾರಂಪರಿಕ ಕ್ರೌರ್ಯ ಕಿಂಚಿತ್ತೂ ಕಡಿಮೆಯಾಗಿಲ್ಲ. ಈ ಕುರಿತು ಪ್ರಶ್ನಿಸಲು ಜನಪರ ಚಳವಳಿಗಳು ತಡಮಾಡುತ್ತಿವೆ ಎಂದು ಕಿಡಿಕಾರಿದರು.<br /><br />ಕೆಲವೆ ಕೆಲವು ಬೆರಳೆಣಿಕೆಯಷ್ಟು ದಲಿತ ರಾಜಕಾರಣಿಗಳನ್ನು ಹೊರತುಪಡಿಸಿ ಉಳಿದ ಎಲ್ಲರೂ ಸೇನೆ ಇಲ್ಲದ ದಳಪತಿಗಳಂತೆ. ಅವರ ಜತೆ ಇರುವ ಸೈನ್ಯಕ್ಕೆ ಕೈಕಾಲು ಇಲ್ಲ ಎಂದರು.</p>.<p><strong>ಇದನ್ನೂ ಓದಿ... <a href="https://www.prajavani.net/district/belagavi/karnataka-vidhan-parishad-election-2021-bs-yediyurappa-hd-kumaraswamy-jds-bjp-885683.html" target="_blank">ವಿಧಾನ ಪರಿಷತ್ ಚುನಾವಣೆ: ಬಿಜೆಪಿಗೆ ಜೆಡಿಎಸ್ ಬೆಂಬಲ ಕೋರಿದ ಯಡಿಯೂರಪ್ಪ</a></strong><br /><br />ನಾವು ಹಿಂದೂವಾಗಿ ಹುಟ್ಟಿದ್ದೇವೆ ಹಿಂದೂವಾಗಿ ಸಾಯುವುದಿಲ್ಲ ಎಂಬ ನಿರ್ಧಾರ ತಳೆಯಬೇಕು. ಅಗ ಮಾತ್ರ ಈ ಪಾರಂಪರಿಕ ಕ್ರೌರ್ಯ ಕಡಿಮೆಯಾಗಬಹುದು ಎಂದು ಅಭಿಪ್ರಾಯಪಟ್ಟರು.<br /><br />ದಸಂಸ ರಾಜ್ಯ ಸಂಸ್ಥಾಪಕ ವಿ.ನಾಗರಾಜು, ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರದ ಎಸ್.ನರೇಂದ್ರಕುಮಾರ, ಹೋರಾಟಗಾರ ಬಸವರಾಜ ದೇವನೂರ, ಆರ್.ಎಸ್.ದೊಡ್ಡಣ್ಣ, ಅಕ್ಕಮಹಾದೇವಿ ಇದ್ದರು.</p>.<p><strong>ಇದನ್ನೂ ಓದಿ... <a href="https://www.prajavani.net/district/kalaburagi/karnataka-politics-prathap-simha-mallikarjun-kharge-priyank-kharge-congress-bjp-885668.html" target="_blank">ಸತ್ಯದ ಮಾರ್ಗದಲ್ಲಿ ಅಡೆತಡೆಗಳು ಸಹಜ, ಹೋರಾಟ ಮುಂದುವರೆಯಲಿದೆ: ಪ್ರಿಯಾಂಕ್ ಖರ್ಗೆ</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಸಂಸದ ಪ್ರತಾಪ ಸಿಂಹ ಅವರನ್ನು ನಮ್ಮ ಸಂಸದ ಎಂದು ಕರೆದುಕೊಳ್ಳಲು ಅವಮಾನವಾಗುತ್ತಿದೆ ಎಂದು ಸಂಸ್ಕೃತಿ ಚಿಂತಕ ಎಸ್.ತುಕಾರಾಂ ತಿಳಿಸಿದರು.<br /><br />ದಲಿತ ಸಂಘರ್ಷ ಸಮಿತಿ (ಸಂಯೋಜಕ) ಜಿಲ್ಲಾ ಸಮಿತಿಯು ಇಲ್ಲಿನ ಎಂಜಿನಿಯರುಗಳ ಸಂಸ್ಥೆಯಲ್ಲಿ ಭಾನುವಾರ ಏರ್ಪಡಿಸಿದ್ದ ಸಂವಿಧಾನದ ಆಶಯಗಳು ಮತ್ತು ದಲಿತರ ಮುಂದಿನ ಸವಾಲುಗಳು ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.<br /><br />ಶಾಸಕ ಪ್ರಿಯಾಂಕ್ ಖರ್ಗೆ ಅವರನ್ನು ಕುರಿತು ಪ್ರತಾಪಸಿಂಹ ಬಳಸಿದ ಅಸಂವಿಧಾನಿಕ ಪದಗಳು ಬೇಸರ ತರಿಸಿವೆ. ಇಂತಹವರನ್ನು ನಮ್ಮ ಸಂಸದ ಎಂದು ಕರೆದುಕೊಳ್ಳಲು ಅವಮಾನ ಅನ್ನಿಸುತ್ತದೆ ಎಂದರು.<br /><br />ಮಲ್ಲಿಕಾರ್ಜುನ ಖರ್ಗೆ ಅವರ ಮಾತನ್ನು ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ ಅವರು ಆಲಿಸಿ, ಗೌರವಿಸುತ್ತಿದ್ದರು. ಇವರ ಭಾವಚಿತ್ರ ನೋಡಿದರೆ ಪ್ರತಾಪಸಿಂಹ ಅವರ ಅಂತಃಕರಣ ಕಲಕುವುದಿಲ್ಲವೆ ಎಂದು ಪ್ರಶ್ನಿಸಿದರು.<br /><br />ಹಂಸಲೇಖ ಅವರ ಮಾತನ್ನು ಸ್ವೀಕರಿಸಿದ ರೀತಿಯನ್ನು ನೋಡಿದರೆ ನಮಗೆ ಇನ್ನು ಅಭಿಪ್ರಾಯವನ್ನು ಮುಕ್ತವಾಗಿ ಹೇಳಿಕೊಳ್ಳುವ ಅವಕಾಶ ಇಲ್ಲ ಎನ್ನಿಸುತ್ತದೆ ಎಂದರು.<br /><br />ನಮ್ಮ ಅಭಿಪ್ರಾಯವನ್ನು ಕೇಳಿಸಿಕೊಳ್ಳಲು ಆಗುವುದಿಲ್ಲ ಎಂದರೆ ನಮಗೂ ತಾಯಿನೆಲ ಇದೆಯೆ ಎಂದು ಪ್ರಶ್ನೆ ಮೂಡುತ್ತದೆ ಎಂದರು.<br />ಈ ಪ್ರಕರಣಗಳನ್ನು ಗಮನಿಸಿದರೆ ಮನುವಾದಿಗಳ ಪಾರಂಪರಿಕ ಕ್ರೌರ್ಯ ಕಿಂಚಿತ್ತೂ ಕಡಿಮೆಯಾಗಿಲ್ಲ. ಈ ಕುರಿತು ಪ್ರಶ್ನಿಸಲು ಜನಪರ ಚಳವಳಿಗಳು ತಡಮಾಡುತ್ತಿವೆ ಎಂದು ಕಿಡಿಕಾರಿದರು.<br /><br />ಕೆಲವೆ ಕೆಲವು ಬೆರಳೆಣಿಕೆಯಷ್ಟು ದಲಿತ ರಾಜಕಾರಣಿಗಳನ್ನು ಹೊರತುಪಡಿಸಿ ಉಳಿದ ಎಲ್ಲರೂ ಸೇನೆ ಇಲ್ಲದ ದಳಪತಿಗಳಂತೆ. ಅವರ ಜತೆ ಇರುವ ಸೈನ್ಯಕ್ಕೆ ಕೈಕಾಲು ಇಲ್ಲ ಎಂದರು.</p>.<p><strong>ಇದನ್ನೂ ಓದಿ... <a href="https://www.prajavani.net/district/belagavi/karnataka-vidhan-parishad-election-2021-bs-yediyurappa-hd-kumaraswamy-jds-bjp-885683.html" target="_blank">ವಿಧಾನ ಪರಿಷತ್ ಚುನಾವಣೆ: ಬಿಜೆಪಿಗೆ ಜೆಡಿಎಸ್ ಬೆಂಬಲ ಕೋರಿದ ಯಡಿಯೂರಪ್ಪ</a></strong><br /><br />ನಾವು ಹಿಂದೂವಾಗಿ ಹುಟ್ಟಿದ್ದೇವೆ ಹಿಂದೂವಾಗಿ ಸಾಯುವುದಿಲ್ಲ ಎಂಬ ನಿರ್ಧಾರ ತಳೆಯಬೇಕು. ಅಗ ಮಾತ್ರ ಈ ಪಾರಂಪರಿಕ ಕ್ರೌರ್ಯ ಕಡಿಮೆಯಾಗಬಹುದು ಎಂದು ಅಭಿಪ್ರಾಯಪಟ್ಟರು.<br /><br />ದಸಂಸ ರಾಜ್ಯ ಸಂಸ್ಥಾಪಕ ವಿ.ನಾಗರಾಜು, ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರದ ಎಸ್.ನರೇಂದ್ರಕುಮಾರ, ಹೋರಾಟಗಾರ ಬಸವರಾಜ ದೇವನೂರ, ಆರ್.ಎಸ್.ದೊಡ್ಡಣ್ಣ, ಅಕ್ಕಮಹಾದೇವಿ ಇದ್ದರು.</p>.<p><strong>ಇದನ್ನೂ ಓದಿ... <a href="https://www.prajavani.net/district/kalaburagi/karnataka-politics-prathap-simha-mallikarjun-kharge-priyank-kharge-congress-bjp-885668.html" target="_blank">ಸತ್ಯದ ಮಾರ್ಗದಲ್ಲಿ ಅಡೆತಡೆಗಳು ಸಹಜ, ಹೋರಾಟ ಮುಂದುವರೆಯಲಿದೆ: ಪ್ರಿಯಾಂಕ್ ಖರ್ಗೆ</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>