ಇದಕ್ಕೆ ಗುರುವಾರ ಟ್ವಿಟರ್ನಲ್ಲೇ ತಿರುಗೇಟು ನೀಡಿರುವ ಪ್ರತಾಪಸಿಂಹ, ‘ಹೌದು ಸಾರ್! 2015ರಲ್ಲಿ ಮೈಸೂರಿನ ರಾಜು ಹತ್ಯೆಯಾದಾಗಲೇ ನೀವು ಕಠಿಣ ಕ್ರಮ ಕೈಗೊಂಡಿದ್ದರೆ ಡಜನ್ಗೂ ಹೆಚ್ಚು ನಮ್ಮ ಕಾರ್ಯಕರ್ತರ ಜೀವ ಉಳಿಯುತ್ತಿತ್ತು. ಅಂದಹಾಗೆ; ನವೀನ್ ವಿರುದ್ಧ ಕೇಸು ಕೊಟ್ಟಿದ್ದು ಸಂಜೆ 6 ಗಂಟೆ ಬಳಿಕ, 7.30ರೊಳಗೆ ಪೊಲೀಸರ ಸುಪರ್ದಿನಲ್ಲಿದ್ದ. ಇದು ಶೀಘ್ರವಲ್ಲವೇ? ಅಥವಾ ಮುಸಲ್ಮಾನರ ಬೇಡಿಕೆಯಂತೆ ಬಂಧಿಸಿ ಕೈಗೆ ಕೊಡಬೇಕಿತ್ತೇ?’ ಎಂದು ಕೇಳಿದ್ದಾರೆ.