ಘಟನೆ ವಿವರ:ಸಾಲಿಗ್ರಾಮದ ವಾಸಿ ಶ್ರೀನಿವಾಸ ತನ್ನ ಅತ್ತೆ ರಾಜಮ್ಮನನ್ನು ಬೈಕ್ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಮಹಾವೀರ ರಸ್ತೆಯಲ್ಲಿ ಬುಧವಾರ ರಾತ್ರಿ ಹೋಗುವಾಗ, ಎದುರಿನಿಂದ ಬಂದ ಬೈಕ್ ಸವಾರ ಚಂದು ಎಂಬಾತ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಪರಸ್ಪರ ಮಾತಿನ ಚಕಮಕಿ ನಡೆದಿದ್ದು, ಚಂದು ಶ್ರೀನಿವಾಸ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.