ಮೈಸೂರು: ಸರೋದ್ ವಾದಕ ಪಂಡಿತ್ ರಾಜೀವ್ ತಾರನಾಥ್ ಅವರಿಗೆ ಶ್ರೀರಾಮಸೇವಾ ಮಂಡಲಿ ಟ್ರಸ್ಟ್ ವತಿಯಿಂದ ನೀಡಲಾಗುವ ಎಸ್.ವಿ.ನಾರಾಯಣಸ್ವಾಮಿರಾವ್ ಸ್ಮಾರಕ ರಾಷ್ಟ್ರೀಯ ಪುರಸ್ಕಾರ–2020ವನ್ನು ಡಿ. 21ರಂದು ಇಲ್ಲಿ ಸಂಜೆ 4 ಗಂಟೆಗೆ ಶಿಕ್ಷಣ ಸಚಿವ ಎಸ್.ಸುರೇಶ್ಕುಮಾರ್ ಪ್ರದಾನ ಮಾಡಲಿದ್ದಾರೆ.
ಸಂಸದ ಕೆ.ಸಿ.ರಾಮಮೂರ್ತಿ, ಸಂಗೀತ ವಿದ್ವಾಂಸ ಡಾ.ಮೈಸೂರು ಎಂ.ಮಂಜುನಾಥ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮವು ‘# 154, 11ನೇ ಮೇನ್, ಸರಸ್ವತಿಪುರಂ, ಮೈಸೂರು’ ಇಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.