<p><strong>ಮೈಸೂರು: </strong>‘ಈ ದಶಕವೂ ಭಾರತಕ್ಕೆ ಸೇರಿದ್ದು. ರಾಷ್ಟ್ರದ ಅಭಿವೃದ್ಧಿಗಾಗಿ ಎಲ್ಲಾ ಕ್ಷೇತ್ರಗಳಲ್ಲೂ ಅಗತ್ಯ ಬದಲಾವಣೆ ತರಲಾಗುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.</p>.<p>ಕ್ರಾಫರ್ಡ್ ಹಾಲ್ ಸಭಾಂಗಣದಲ್ಲಿ ಸೋಮವಾರ ಮೈಸೂರು ವಿಶ್ವವಿದ್ಯಾಲಯ ಆಯೋಜಿಸಿದ್ದ 100ನೇ ವಾರ್ಷಿಕ ಘಟಿಕೋತ್ಸವದಲ್ಲಿ ಅವರು ವರ್ಚುಯಲ್ ವೇದಿಕೆಯಲ್ಲಿ ನವದೆಹಲಿಯಿಂದ ಮಾತನಾಡಿದರು.</p>.<p>‘ಕಳೆದ ಆರೇಳು ತಿಂಗಳಲ್ಲಿ ಸುಧಾರಣೆ ಪರ್ವ ಹಾಗೂ ಆಡಳಿತದ ವೇಗವನ್ನು ತಾವು ಗಮನಿಸಿರಬಹುದು. ಇದು ಕೃಷಿ, ಬಾಹ್ಯಾಕಾಶ, ರಕ್ಷಣಾ ಕ್ಷೇತ್ರ, ವಿಮಾನಯಾನ, ಕಾರ್ಮಿಕ ವಲಯದಲ್ಲಿ ಇರಬಹುದು. ಈ ಎಲ್ಲಾ ಬೆಳವಣಿಗೆಯು ಭಾರತದ ಕೋಟ್ಯಂತರ ಯುವಕರಏಳಿಗೆ ಹಾಗೂ ಈ ದಶಕವು ಭಾರತದ್ದಾಗಿರಬೇಕು ಎಂಬ ಸದುದ್ದೇಶ ಒಳಗೊಂಡಿದೆ. ಯುವಕರಿಗಂತೂ ಈ ದಶಮಾನ ಸಾಕಷ್ಟು ಅವಕಾಶಗಳನ್ನು ತೆರೆದಿಟ್ಟಿದೆ. ತಳಪಾಯ ಗಟ್ಟಿ ಇದ್ದಾಗ ಮಾತ್ರ ಇದೆಲ್ಲಾ ಸಾಧ್ಯ’ ಎಂದರು.</p>.<p>ರಾಷ್ಟ್ರೀಯ ಶಿಕ್ಷಣ ನೀತಿ–2020 ಪ್ರಸ್ತಾಪಿಸುತ್ತಾ, ‘ದೇಶವನ್ನು ಉನ್ನತ ಶಿಕ್ಷಣದ ಪ್ರಮುಖ ತಾಣವನ್ನಾಗಿಸಲು ಹಾಗೂ ಯುವಕರನ್ನು ಸ್ಮರ್ಧಾತ್ಮಕರನ್ನಾಗಿ ಮಾಡಲು ಎಲ್ಲಾ ಪ್ರಯತ್ನಗಳು ಸಾಗಿವೆ. ಅದಕ್ಕಾಗಿ ಕೌಶಲ, ಪುನರ್ಕೌಶಲ, ಸುಧಾರಿತ ಕೌಶಲದ ಅಗತ್ಯವಿದೆ. ಬದಲಾಗುತ್ತಿರುವ ಉದ್ಯೋಗ ಸ್ವರೂಪಕ್ಕೆ ಯುವಕರು ಹೊಂದಿಕೊಳ್ಳಬೇಕು’ ಎಂದು ಕರೆ ನೀಡಿದರು.</p>.<p>‘ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಬಹುದೊಡ್ಡ ಬದಲಾವಣೆಗೆಮಹತ್ವದ ಹೆಜ್ಜೆಇಡಲಾಗಿದೆ. ನರ್ಸರಿಯಿಂದ ಹಿಡಿದು ಪಿಎಚ್.ಡಿವರೆಗೆ ಮೂಲಭೂತ ಬದಲಾವಣೆ ನಿಟ್ಟಿನಲ್ಲಿ ಹೊಸ ಶಿಕ್ಷಣ ನೀತಿಯು ಮಹತ್ವದ ಮೆಟ್ಟಿಲಾಗಿದೆ. ಕೇವಲ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವುದಲ್ಲ; ಆಡಳಿತ ಸುಧಾರಣೆ, ಲಿಂಗ ಸಮಾನತೆ, ಸಾಮಾಜಿಕ ಪಾಲ್ಗೊಳ್ಳುವಿಕೆಗೆ ಒತ್ತು ನೀಡಲಾಗುತ್ತಿದೆ’ ಎಂದು ಹೇಳಿದರು.</p>.<p>ನೂತನ ಶಿಕ್ಷಣ ನೀತಿ ಅನ್ವಯ ಮೈಸೂರು ವಿಶ್ವವಿದ್ಯಾಲಯ ಆರಂಭಿಸುತ್ತಿರುವ ಬಹುಶಿಸ್ತೀಯ ಅಧ್ಯಯನ ವಿಚಾರ ಕುರಿತು ಶ್ಲಾಘಿಸಿದ ಪ್ರಧಾನಿ, ‘ವಿದ್ಯಾರ್ಥಿಗಳು ಈ ಕಾರ್ಯಕ್ರಮದಡಿ ಜಾಗತಿಕ ತಂತ್ರಜ್ಞಾನವನ್ನು ಸ್ಥಳೀಯ ಸಂಸ್ಕೃತಿಗೆ ಅನ್ವಯಿಸಿಕೊಂಡು ಕಲಿಯಲು ಅವಕಾಶಗಳಿವೆ. ಸ್ಥಳೀಯ ಸಂಸ್ಕೃತಿ, ಕಲೆಯನ್ನು ಪ್ರೋತ್ಸಾಹಿಸಿ, ಸಾಮಾಜಿಕ ವಿಚಾರಗಳ ಬಗೆಗಿನ ಸಂಶೋಧನೆಯ ಸಂಪ್ರದಾಯ ಉತ್ತೇಜಿಸಬೇಕು’ ಎಂದರು.</p>.<p>ಸುಮಾರು 25 ನಿಮಿಷಗಳ ತಮ್ಮ ಭಾಷಣದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ.ವಿಶ್ವೇಶ್ವರಯ್ಯ, ಕುವೆಂಪು ಹಾಗೂ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರನ್ನು ಸ್ಮರಿಸಿದರು. ಪದವಿ ಪ್ರಮಾಣ ಪತ್ರ ಪಡೆದವರಿಗೆ ಕನ್ನಡದಲ್ಲೇ ಅಭಿನಂದನೆ ಸಲ್ಲಿಸಿದರು.</p>.<p>ಗೌರವ ಡಾಕ್ಟರೇಟ್ ಗೌರವಕ್ಕೆ ಪಾತ್ರರಾಗಿರುವ ಇನ್ಫೊಸಿಸ್ ಪ್ರತಿಷ್ಠಾನದ ಸುಧಾಮೂರ್ತಿ ಗೈರಾಗಿದ್ದರು. ಅತಿಹೆಚ್ಚಿನ ಪದಕ ಮತ್ತು ನಗದು ಬಹುಮಾನಗಳನ್ನು ಪಡೆದುಕೊಂಡ 30 ಮಂದಿಗೆ ಈ ಕಾರ್ಯಕ್ರಮದಲ್ಲಿ ಪದವಿ ಪ್ರದಾನ ಮಾಡಲಾಯಿತು.</p>.<p>ರಾಜ್ಯಪಾಲ ವಜುಭಾಯಿ ವಾಲಾ (ವರ್ಚುವಲ್ ವೇದಿಕೆ), ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹಾಗೂ ಕುಲಪತಿ ಪ್ರೊ.ಹೇಮಂತ್ ಕುಮಾರ್, ಕುಲಸಚಿವ ಪ್ರೊ.ಆರ್.ಶಿವಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>‘ಈ ದಶಕವೂ ಭಾರತಕ್ಕೆ ಸೇರಿದ್ದು. ರಾಷ್ಟ್ರದ ಅಭಿವೃದ್ಧಿಗಾಗಿ ಎಲ್ಲಾ ಕ್ಷೇತ್ರಗಳಲ್ಲೂ ಅಗತ್ಯ ಬದಲಾವಣೆ ತರಲಾಗುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.</p>.<p>ಕ್ರಾಫರ್ಡ್ ಹಾಲ್ ಸಭಾಂಗಣದಲ್ಲಿ ಸೋಮವಾರ ಮೈಸೂರು ವಿಶ್ವವಿದ್ಯಾಲಯ ಆಯೋಜಿಸಿದ್ದ 100ನೇ ವಾರ್ಷಿಕ ಘಟಿಕೋತ್ಸವದಲ್ಲಿ ಅವರು ವರ್ಚುಯಲ್ ವೇದಿಕೆಯಲ್ಲಿ ನವದೆಹಲಿಯಿಂದ ಮಾತನಾಡಿದರು.</p>.<p>‘ಕಳೆದ ಆರೇಳು ತಿಂಗಳಲ್ಲಿ ಸುಧಾರಣೆ ಪರ್ವ ಹಾಗೂ ಆಡಳಿತದ ವೇಗವನ್ನು ತಾವು ಗಮನಿಸಿರಬಹುದು. ಇದು ಕೃಷಿ, ಬಾಹ್ಯಾಕಾಶ, ರಕ್ಷಣಾ ಕ್ಷೇತ್ರ, ವಿಮಾನಯಾನ, ಕಾರ್ಮಿಕ ವಲಯದಲ್ಲಿ ಇರಬಹುದು. ಈ ಎಲ್ಲಾ ಬೆಳವಣಿಗೆಯು ಭಾರತದ ಕೋಟ್ಯಂತರ ಯುವಕರಏಳಿಗೆ ಹಾಗೂ ಈ ದಶಕವು ಭಾರತದ್ದಾಗಿರಬೇಕು ಎಂಬ ಸದುದ್ದೇಶ ಒಳಗೊಂಡಿದೆ. ಯುವಕರಿಗಂತೂ ಈ ದಶಮಾನ ಸಾಕಷ್ಟು ಅವಕಾಶಗಳನ್ನು ತೆರೆದಿಟ್ಟಿದೆ. ತಳಪಾಯ ಗಟ್ಟಿ ಇದ್ದಾಗ ಮಾತ್ರ ಇದೆಲ್ಲಾ ಸಾಧ್ಯ’ ಎಂದರು.</p>.<p>ರಾಷ್ಟ್ರೀಯ ಶಿಕ್ಷಣ ನೀತಿ–2020 ಪ್ರಸ್ತಾಪಿಸುತ್ತಾ, ‘ದೇಶವನ್ನು ಉನ್ನತ ಶಿಕ್ಷಣದ ಪ್ರಮುಖ ತಾಣವನ್ನಾಗಿಸಲು ಹಾಗೂ ಯುವಕರನ್ನು ಸ್ಮರ್ಧಾತ್ಮಕರನ್ನಾಗಿ ಮಾಡಲು ಎಲ್ಲಾ ಪ್ರಯತ್ನಗಳು ಸಾಗಿವೆ. ಅದಕ್ಕಾಗಿ ಕೌಶಲ, ಪುನರ್ಕೌಶಲ, ಸುಧಾರಿತ ಕೌಶಲದ ಅಗತ್ಯವಿದೆ. ಬದಲಾಗುತ್ತಿರುವ ಉದ್ಯೋಗ ಸ್ವರೂಪಕ್ಕೆ ಯುವಕರು ಹೊಂದಿಕೊಳ್ಳಬೇಕು’ ಎಂದು ಕರೆ ನೀಡಿದರು.</p>.<p>‘ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಬಹುದೊಡ್ಡ ಬದಲಾವಣೆಗೆಮಹತ್ವದ ಹೆಜ್ಜೆಇಡಲಾಗಿದೆ. ನರ್ಸರಿಯಿಂದ ಹಿಡಿದು ಪಿಎಚ್.ಡಿವರೆಗೆ ಮೂಲಭೂತ ಬದಲಾವಣೆ ನಿಟ್ಟಿನಲ್ಲಿ ಹೊಸ ಶಿಕ್ಷಣ ನೀತಿಯು ಮಹತ್ವದ ಮೆಟ್ಟಿಲಾಗಿದೆ. ಕೇವಲ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವುದಲ್ಲ; ಆಡಳಿತ ಸುಧಾರಣೆ, ಲಿಂಗ ಸಮಾನತೆ, ಸಾಮಾಜಿಕ ಪಾಲ್ಗೊಳ್ಳುವಿಕೆಗೆ ಒತ್ತು ನೀಡಲಾಗುತ್ತಿದೆ’ ಎಂದು ಹೇಳಿದರು.</p>.<p>ನೂತನ ಶಿಕ್ಷಣ ನೀತಿ ಅನ್ವಯ ಮೈಸೂರು ವಿಶ್ವವಿದ್ಯಾಲಯ ಆರಂಭಿಸುತ್ತಿರುವ ಬಹುಶಿಸ್ತೀಯ ಅಧ್ಯಯನ ವಿಚಾರ ಕುರಿತು ಶ್ಲಾಘಿಸಿದ ಪ್ರಧಾನಿ, ‘ವಿದ್ಯಾರ್ಥಿಗಳು ಈ ಕಾರ್ಯಕ್ರಮದಡಿ ಜಾಗತಿಕ ತಂತ್ರಜ್ಞಾನವನ್ನು ಸ್ಥಳೀಯ ಸಂಸ್ಕೃತಿಗೆ ಅನ್ವಯಿಸಿಕೊಂಡು ಕಲಿಯಲು ಅವಕಾಶಗಳಿವೆ. ಸ್ಥಳೀಯ ಸಂಸ್ಕೃತಿ, ಕಲೆಯನ್ನು ಪ್ರೋತ್ಸಾಹಿಸಿ, ಸಾಮಾಜಿಕ ವಿಚಾರಗಳ ಬಗೆಗಿನ ಸಂಶೋಧನೆಯ ಸಂಪ್ರದಾಯ ಉತ್ತೇಜಿಸಬೇಕು’ ಎಂದರು.</p>.<p>ಸುಮಾರು 25 ನಿಮಿಷಗಳ ತಮ್ಮ ಭಾಷಣದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ.ವಿಶ್ವೇಶ್ವರಯ್ಯ, ಕುವೆಂಪು ಹಾಗೂ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರನ್ನು ಸ್ಮರಿಸಿದರು. ಪದವಿ ಪ್ರಮಾಣ ಪತ್ರ ಪಡೆದವರಿಗೆ ಕನ್ನಡದಲ್ಲೇ ಅಭಿನಂದನೆ ಸಲ್ಲಿಸಿದರು.</p>.<p>ಗೌರವ ಡಾಕ್ಟರೇಟ್ ಗೌರವಕ್ಕೆ ಪಾತ್ರರಾಗಿರುವ ಇನ್ಫೊಸಿಸ್ ಪ್ರತಿಷ್ಠಾನದ ಸುಧಾಮೂರ್ತಿ ಗೈರಾಗಿದ್ದರು. ಅತಿಹೆಚ್ಚಿನ ಪದಕ ಮತ್ತು ನಗದು ಬಹುಮಾನಗಳನ್ನು ಪಡೆದುಕೊಂಡ 30 ಮಂದಿಗೆ ಈ ಕಾರ್ಯಕ್ರಮದಲ್ಲಿ ಪದವಿ ಪ್ರದಾನ ಮಾಡಲಾಯಿತು.</p>.<p>ರಾಜ್ಯಪಾಲ ವಜುಭಾಯಿ ವಾಲಾ (ವರ್ಚುವಲ್ ವೇದಿಕೆ), ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹಾಗೂ ಕುಲಪತಿ ಪ್ರೊ.ಹೇಮಂತ್ ಕುಮಾರ್, ಕುಲಸಚಿವ ಪ್ರೊ.ಆರ್.ಶಿವಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>