<p><strong>ಸಾಲಿಗ್ರಾಮ: </strong>ತಾಲ್ಲೂಕಿನ ಮಿರ್ಲೆ ಗ್ರಾಮದ ಪದವೀಧರ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ 11 ಮಂದಿ ನೂತನ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.</p>.<p>ಸಹಕಾರ ಸಂಘದ ಮಂಡಳಿಗೆ 13 ನಿರ್ದೇಶಕ ಸ್ಥಾನಗಳಿದ್ದು, 11 ಮಂದಿ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಚುನಾವಣಾಧಿಕಾರಿ ನಿಗದಿತ ದಿನಾಂಕಕ್ಕೆ ನಾಮಪತ್ರ ಸಲ್ಲಿಸಿದ 11 ಮಂದಿಯನ್ನು ನಿರ್ದೇಶಕರು ಎಂದು ಘೋಷಣೆ ಮಾಡಿದ್ದಾರೆ.</p>.<p>ನೂತನ ನಿರ್ದೇಶಕರಾಗಿ ಎಂ.ಕೆ. ಸತೀಶ್, ಎಂ.ಎಂ.ಮಹದೇವ್, ಎಂ.ಎಸ್.ರಾಜು, ಎಂ.ವಿ.ರಮೇಶ್, ನರಸೀಹೇಗೌಡ ಎಂ.ಎಸ್, ಕೆ.ಸಿ.ನಾಗಭೂಷಣ, ಎಂ.ಜಿ.ಚಂದ್ರಶೇಖರ್, ಸೀಮಾ, ವಿ.ಎಸ್.ನಾಗರತ್ನಾ, ಕೆ.ವಿ.ವಿಜಯಕುಮಾರ್, ಎ. ಮನೀತ್ಕುಮಾರ್ ಅವಿರೋಧವಾಗಿ ಆಯ್ಕೆಯಾದವರು.</p>.<p>13 ಸ್ಥಾನಗಳ ಪೈಕಿ 11 ಮಂದಿ ನಾಮಪತ್ರ ಸಲ್ಲಿಸಿ ಅವಿರೋಧ ಆಯ್ಕೆಯಾಗಿದ್ದು, ಹಿಂದುಳಿದ ವರ್ಗಕ್ಕೆ ಸೇರಿದ 2 ಸ್ಥಾನಗಳಿಗೆ ನಾಮಪತ್ರ ಸಲ್ಲಿಸದ ಕಾರಣಕ್ಕೆ ಖಾಲಿ ಉಳಿದಿವೆ.</p>.<p>ನೂತನ ನಿರ್ದೇಶಕರು ಬೆಂಬಲಿಗರು ಫಲಿತಾಂಶ ಘೋಷಣೆ ಬಳಿಕ ಸಿಹಿ ಹಂಚಿ ಸಂಭ್ರಮಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಲಿಗ್ರಾಮ: </strong>ತಾಲ್ಲೂಕಿನ ಮಿರ್ಲೆ ಗ್ರಾಮದ ಪದವೀಧರ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ 11 ಮಂದಿ ನೂತನ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.</p>.<p>ಸಹಕಾರ ಸಂಘದ ಮಂಡಳಿಗೆ 13 ನಿರ್ದೇಶಕ ಸ್ಥಾನಗಳಿದ್ದು, 11 ಮಂದಿ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಚುನಾವಣಾಧಿಕಾರಿ ನಿಗದಿತ ದಿನಾಂಕಕ್ಕೆ ನಾಮಪತ್ರ ಸಲ್ಲಿಸಿದ 11 ಮಂದಿಯನ್ನು ನಿರ್ದೇಶಕರು ಎಂದು ಘೋಷಣೆ ಮಾಡಿದ್ದಾರೆ.</p>.<p>ನೂತನ ನಿರ್ದೇಶಕರಾಗಿ ಎಂ.ಕೆ. ಸತೀಶ್, ಎಂ.ಎಂ.ಮಹದೇವ್, ಎಂ.ಎಸ್.ರಾಜು, ಎಂ.ವಿ.ರಮೇಶ್, ನರಸೀಹೇಗೌಡ ಎಂ.ಎಸ್, ಕೆ.ಸಿ.ನಾಗಭೂಷಣ, ಎಂ.ಜಿ.ಚಂದ್ರಶೇಖರ್, ಸೀಮಾ, ವಿ.ಎಸ್.ನಾಗರತ್ನಾ, ಕೆ.ವಿ.ವಿಜಯಕುಮಾರ್, ಎ. ಮನೀತ್ಕುಮಾರ್ ಅವಿರೋಧವಾಗಿ ಆಯ್ಕೆಯಾದವರು.</p>.<p>13 ಸ್ಥಾನಗಳ ಪೈಕಿ 11 ಮಂದಿ ನಾಮಪತ್ರ ಸಲ್ಲಿಸಿ ಅವಿರೋಧ ಆಯ್ಕೆಯಾಗಿದ್ದು, ಹಿಂದುಳಿದ ವರ್ಗಕ್ಕೆ ಸೇರಿದ 2 ಸ್ಥಾನಗಳಿಗೆ ನಾಮಪತ್ರ ಸಲ್ಲಿಸದ ಕಾರಣಕ್ಕೆ ಖಾಲಿ ಉಳಿದಿವೆ.</p>.<p>ನೂತನ ನಿರ್ದೇಶಕರು ಬೆಂಬಲಿಗರು ಫಲಿತಾಂಶ ಘೋಷಣೆ ಬಳಿಕ ಸಿಹಿ ಹಂಚಿ ಸಂಭ್ರಮಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>