<p><strong>ಮೈಸೂರು:</strong> ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಎನ್ನುವುದು ಸರ್ಕಾರವೇ ಯಾರು ಮತ ಹಾಕಬೇಕು ಎಂಬುದನ್ನು ಆಯ್ಕೆ ಮಾಡುವ ವಿಕೃತ, ಫ್ಯಾಸಿಸ್ಟ್ ಪ್ರಕ್ರಿಯೆಯಾಗಿದ್ದು, ಇದೊಂದು ಸಂವಿಧಾನ ವಿರೋಧಿ ನಡೆ’ ಎಂದು ಹೋರಾಟಗಾರ ಶಿವಸುಂದರ್ ಟೀಕಿಸಿದರು.</p>.<p>‘ಅಹಿಂದ ಚಳವಳಿ’ ಸಂಘಟನೆಯು ನಗರದ ರೋಟರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಜಾಗೃತಿ ಸಭೆಯಲ್ಲಿ ‘ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಕುಸಿತ, ಚುನಾವಣಾ ಆಯೋಗದ ದುರುಪಯೋಗ, ಮನರೇಗಾ ಉದ್ಯೋಗ ಖಾತ್ರಿ ಯೋಜನೆ ಕುರಿತು ಕಳವಳಗಳು’ ಕುರಿತು ಅವರು ಉಪನ್ಯಾಸ ನೀಡಿದರು.</p>.<p>‘ಎಸ್ಐಆರ್ ಎಂದರೆ ಕೇವಲ ಮತಪಟ್ಟಿಯ ತೀವ್ರ ಪರಿಷ್ಕರಣೆ ಮಾತ್ರವಲ್ಲ, ಅಷ್ಟೇ ಆಗಿದ್ದರೆ ಇದಕ್ಕೆ ಯಾರ ವಿರೋಧವೂ ಇರುತ್ತಿರಲಿಲ್ಲ. ಸದ್ಯ ಕೇಂದ್ರ ಸರ್ಕಾರವು ದೇಶದ 11 ರಾಜ್ಯಗಳಲ್ಲಿ ಇದರ ಮ್ಯಾಪಿಂಗ್ ಕಾರ್ಯ ಆರಂಭಿಸಿದ್ದು, ಎಲ್ಲೆಡೆ ತೀವ್ರ ವಿರೋಧ ವ್ಯಕ್ತವಾಗಿದೆ. ತಮಿಳುನಾಡಿನ 8 ಕೋಟಿ ಮತದಾರರ ಪೈಕಿ 98 ಲಕ್ಷ ಜನರ ಮ್ಯಾಪಿಂಗ್ ಆಗಿಲ್ಲ’ ಎಂದು ವಿವರಿಸಿದರು.</p>.<p>‘ರಾಜ್ಯದಲ್ಲೂ ಮ್ಯಾಪಿಂಗ್ ಕಾರ್ಯಕ್ಕೆ ಸದ್ದಿಲ್ಲದೆ ಚಾಲನೆ ದೊರೆತಿದೆ. ಇನ್ನು ಮೂರು ತಿಂಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಆರಂಭವಾಗಲಿದೆ. ನಾವು ಈ ದೇಶದವರು ಎಂದು ನಾವೇ ಸಾಬೀತುಪಡಿಸಿಕೊಳ್ಳಬೇಕಾಗುತ್ತದೆ. ಮೂರು ಹಂತಗಳಲ್ಲಿ ಪರಿಶೀಲನೆಗೆ ಅವಕಾಶ ನೀಡಿದ್ದು, ಎಲ್ಲವೂ ಗೊಂದಲಮಯವಾಗಿವೆ’ ಎಂದರು.</p>.<p>ಸಂಘಟನೆಯ ರಾಜ್ಯ ಮುಖ್ಯ ಸಂಚಾಲಕ ಎಸ್. ಮೂರ್ತಿ ಮಾತನಾಡಿ, ‘ಸಂವಿಧಾನ ಅನುಷ್ಠಾನಕ್ಕೆ ಬಂದ ದಿನ ದೆಹಲಿಯ ರಾಮಲೀಲಾ ಮೈದಾನದಲ್ಲೇ ಕೆಲವರು ಸಂವಿಧಾನದ ಪ್ರತಿ ಸುಟ್ಟರು. ಮನುಸ್ಮೃತಿ ಸಂವಿಧಾನವಾಗಬೇಕಿತ್ತು ಎಂದಿದ್ದರು. ಇಂದು ಅವರೇ ಈ ದೇಶವನ್ನು ಆಳುತ್ತಿದ್ದಾರೆ. ಬಹುಸಂಖ್ಯಾತರಾದ, ಸ್ವಾತಂತ್ರ್ಯಕ್ಕಾಗಿ ಪ್ರಾಣ ಸಮರ್ಪಿಸಿದ ವರ್ಗದ ನಾವು ಕೆಲವರ ದೃಷ್ಟಿಯಲ್ಲಿ ದೇಶದ್ರೋಹಿಗಳಂತೆ ಕಾಣುತ್ತಿದ್ದೇವೆ’ ಎಂದು ಬೇಸರಿಸಿದರು.</p>.<p>‘ದೇಶದ ಆಡಳಿತ ಇಂದಿಗೂ ಬ್ರಾಹ್ಮಣರ ಹಿಡಿತದಲ್ಲಿದೆ. 2018ರಿಂದ ಈವರೆಗೆ ದೇಶದಲ್ಲಿ 661 ಹೈಕೋರ್ಟ್ ನ್ಯಾಯಾಧೀಶರು ನೇಮಕ ಆಗಿದ್ದು, ಇದರಲ್ಲಿ 489 ಮಂದಿ ಬ್ರಾಹ್ಮಣರೇ ಆಗಿದ್ದಾರೆ. 2015-2022ರವರೆಗೆ ಕೇಂದ್ರ ಲೋಕಸೇವಾ ಆಯೋಗವು ಐಎಎಸ್, ಐಪಿಎಸ್, ಐಆರ್ಎಸ್ನಂತಹ ಹುದ್ದೆಗಳಿಗೆ 4365 ಮಂದಿಯನ್ನು ನೇಮಿಸಿಕೊಂಡಿದ್ದು, ಇವರಲ್ಲಿ 3170 ಮಂದಿ ಬ್ರಾಹ್ಮಣರು. ಇದೆಲ್ಲವೂ ಸಂಸತ್ನಲ್ಲಿ ಕೇಂದ್ರ ಸಚಿವರೇ ನೀಡಿದ ಮಾಹಿತಿ’ ಎಂದು ವಿವರಿಸಿದರು.</p>.<p>‘ಕರ್ನಾಟಕದಲ್ಲಿ 14 ಲಕ್ಷ ಬ್ರಾಹ್ಮಣರಿದ್ದರೂ 11 ಶಾಸಕರು ಆಯ್ಕೆಯಾಗಿದ್ದಾರೆ. ಲಿಂಗಾಯತರು 67 ಲಕ್ಷ, ಒಕ್ಕಲಿಗರು 61 ಲಕ್ಷ ಜನಸಂಖ್ಯೆ ಇದ್ದಾರೆ. ಆದರೆ ಈ ಮೂರು ಸಮುದಾಯದ ಶಾಸಕರ ಸಂಖ್ಯೆ ನೂರು ದಾಟಿದೆ. ಒಬಿಸಿ ವರ್ಗ ಜನಸಂಖ್ಯೆಯಲ್ಲಿ 2.80 ಕೋಟಿ ಇದ್ದರೂ ಸೂಕ್ತ ಪ್ರಾತಿನಿಧ್ಯ ಹಾಗೂ ರಾಜಕೀಯ ಶಕ್ತಿ ಇಲ್ಲ. ಮೀಸಲಾತಿಯ ಕಾರಣಕ್ಕೆ ದಲಿತರು ಶಾಸಕರಾಗಿದ್ದಾರೆ’ ಎಂದರು.</p>.<p>ಮಾಜಿ ಸಚಿವ ಕೋಟೆ ಶಿವಣ್ಣ, ಮುಖಂಡರಾದ ವಿಜಯಕುಮಾರಿ ಅರಸ್, ವೆಂಕಟೇಶ ಗೌಡ, ಅಲ್ಪಾನ್ಸ್ ಕೆನಡಿ, ಬಿ. ಶಿವಣ್ಣ, ತೀ.ನಾ. ಶ್ರೀನಿವಾಸ, ನಟರಾಜ್ ಮಹರ್ಷಿ, ಪ್ರತಿಮಾ ಮುನಿರಾಜಪ್ಪ, ದೇವರಾಜ ಪಾಳೇಗಾರ, ತಾಯೂರು ಪ್ರಕಾಶ್, ಶ್ರೀಸಾಯಿ ಸತೀಶ್, ಸುರೇಂದ್ರ, ತಾಜ್ ಪಾಷಾ ಪಾಲ್ಗೊಂಡರು.</p>.<div><blockquote>ಎಸ್ಐಆರ್ ಎನ್ನುವ ಪ್ರಕ್ರಿಯೆ ಸಂವಿಧಾನ ವಿರೋಧಿ. ದೇಶದ ಯಾವ ಕಾನೂನಿನಲ್ಲೂ ಇದಕ್ಕೆ ಅವಕಾಶ ಇಲ್ಲ </blockquote><span class="attribution">ಶಿವಸುಂದರ್ ಹೋರಾಟಗಾರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಎನ್ನುವುದು ಸರ್ಕಾರವೇ ಯಾರು ಮತ ಹಾಕಬೇಕು ಎಂಬುದನ್ನು ಆಯ್ಕೆ ಮಾಡುವ ವಿಕೃತ, ಫ್ಯಾಸಿಸ್ಟ್ ಪ್ರಕ್ರಿಯೆಯಾಗಿದ್ದು, ಇದೊಂದು ಸಂವಿಧಾನ ವಿರೋಧಿ ನಡೆ’ ಎಂದು ಹೋರಾಟಗಾರ ಶಿವಸುಂದರ್ ಟೀಕಿಸಿದರು.</p>.<p>‘ಅಹಿಂದ ಚಳವಳಿ’ ಸಂಘಟನೆಯು ನಗರದ ರೋಟರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಜಾಗೃತಿ ಸಭೆಯಲ್ಲಿ ‘ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಕುಸಿತ, ಚುನಾವಣಾ ಆಯೋಗದ ದುರುಪಯೋಗ, ಮನರೇಗಾ ಉದ್ಯೋಗ ಖಾತ್ರಿ ಯೋಜನೆ ಕುರಿತು ಕಳವಳಗಳು’ ಕುರಿತು ಅವರು ಉಪನ್ಯಾಸ ನೀಡಿದರು.</p>.<p>‘ಎಸ್ಐಆರ್ ಎಂದರೆ ಕೇವಲ ಮತಪಟ್ಟಿಯ ತೀವ್ರ ಪರಿಷ್ಕರಣೆ ಮಾತ್ರವಲ್ಲ, ಅಷ್ಟೇ ಆಗಿದ್ದರೆ ಇದಕ್ಕೆ ಯಾರ ವಿರೋಧವೂ ಇರುತ್ತಿರಲಿಲ್ಲ. ಸದ್ಯ ಕೇಂದ್ರ ಸರ್ಕಾರವು ದೇಶದ 11 ರಾಜ್ಯಗಳಲ್ಲಿ ಇದರ ಮ್ಯಾಪಿಂಗ್ ಕಾರ್ಯ ಆರಂಭಿಸಿದ್ದು, ಎಲ್ಲೆಡೆ ತೀವ್ರ ವಿರೋಧ ವ್ಯಕ್ತವಾಗಿದೆ. ತಮಿಳುನಾಡಿನ 8 ಕೋಟಿ ಮತದಾರರ ಪೈಕಿ 98 ಲಕ್ಷ ಜನರ ಮ್ಯಾಪಿಂಗ್ ಆಗಿಲ್ಲ’ ಎಂದು ವಿವರಿಸಿದರು.</p>.<p>‘ರಾಜ್ಯದಲ್ಲೂ ಮ್ಯಾಪಿಂಗ್ ಕಾರ್ಯಕ್ಕೆ ಸದ್ದಿಲ್ಲದೆ ಚಾಲನೆ ದೊರೆತಿದೆ. ಇನ್ನು ಮೂರು ತಿಂಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಆರಂಭವಾಗಲಿದೆ. ನಾವು ಈ ದೇಶದವರು ಎಂದು ನಾವೇ ಸಾಬೀತುಪಡಿಸಿಕೊಳ್ಳಬೇಕಾಗುತ್ತದೆ. ಮೂರು ಹಂತಗಳಲ್ಲಿ ಪರಿಶೀಲನೆಗೆ ಅವಕಾಶ ನೀಡಿದ್ದು, ಎಲ್ಲವೂ ಗೊಂದಲಮಯವಾಗಿವೆ’ ಎಂದರು.</p>.<p>ಸಂಘಟನೆಯ ರಾಜ್ಯ ಮುಖ್ಯ ಸಂಚಾಲಕ ಎಸ್. ಮೂರ್ತಿ ಮಾತನಾಡಿ, ‘ಸಂವಿಧಾನ ಅನುಷ್ಠಾನಕ್ಕೆ ಬಂದ ದಿನ ದೆಹಲಿಯ ರಾಮಲೀಲಾ ಮೈದಾನದಲ್ಲೇ ಕೆಲವರು ಸಂವಿಧಾನದ ಪ್ರತಿ ಸುಟ್ಟರು. ಮನುಸ್ಮೃತಿ ಸಂವಿಧಾನವಾಗಬೇಕಿತ್ತು ಎಂದಿದ್ದರು. ಇಂದು ಅವರೇ ಈ ದೇಶವನ್ನು ಆಳುತ್ತಿದ್ದಾರೆ. ಬಹುಸಂಖ್ಯಾತರಾದ, ಸ್ವಾತಂತ್ರ್ಯಕ್ಕಾಗಿ ಪ್ರಾಣ ಸಮರ್ಪಿಸಿದ ವರ್ಗದ ನಾವು ಕೆಲವರ ದೃಷ್ಟಿಯಲ್ಲಿ ದೇಶದ್ರೋಹಿಗಳಂತೆ ಕಾಣುತ್ತಿದ್ದೇವೆ’ ಎಂದು ಬೇಸರಿಸಿದರು.</p>.<p>‘ದೇಶದ ಆಡಳಿತ ಇಂದಿಗೂ ಬ್ರಾಹ್ಮಣರ ಹಿಡಿತದಲ್ಲಿದೆ. 2018ರಿಂದ ಈವರೆಗೆ ದೇಶದಲ್ಲಿ 661 ಹೈಕೋರ್ಟ್ ನ್ಯಾಯಾಧೀಶರು ನೇಮಕ ಆಗಿದ್ದು, ಇದರಲ್ಲಿ 489 ಮಂದಿ ಬ್ರಾಹ್ಮಣರೇ ಆಗಿದ್ದಾರೆ. 2015-2022ರವರೆಗೆ ಕೇಂದ್ರ ಲೋಕಸೇವಾ ಆಯೋಗವು ಐಎಎಸ್, ಐಪಿಎಸ್, ಐಆರ್ಎಸ್ನಂತಹ ಹುದ್ದೆಗಳಿಗೆ 4365 ಮಂದಿಯನ್ನು ನೇಮಿಸಿಕೊಂಡಿದ್ದು, ಇವರಲ್ಲಿ 3170 ಮಂದಿ ಬ್ರಾಹ್ಮಣರು. ಇದೆಲ್ಲವೂ ಸಂಸತ್ನಲ್ಲಿ ಕೇಂದ್ರ ಸಚಿವರೇ ನೀಡಿದ ಮಾಹಿತಿ’ ಎಂದು ವಿವರಿಸಿದರು.</p>.<p>‘ಕರ್ನಾಟಕದಲ್ಲಿ 14 ಲಕ್ಷ ಬ್ರಾಹ್ಮಣರಿದ್ದರೂ 11 ಶಾಸಕರು ಆಯ್ಕೆಯಾಗಿದ್ದಾರೆ. ಲಿಂಗಾಯತರು 67 ಲಕ್ಷ, ಒಕ್ಕಲಿಗರು 61 ಲಕ್ಷ ಜನಸಂಖ್ಯೆ ಇದ್ದಾರೆ. ಆದರೆ ಈ ಮೂರು ಸಮುದಾಯದ ಶಾಸಕರ ಸಂಖ್ಯೆ ನೂರು ದಾಟಿದೆ. ಒಬಿಸಿ ವರ್ಗ ಜನಸಂಖ್ಯೆಯಲ್ಲಿ 2.80 ಕೋಟಿ ಇದ್ದರೂ ಸೂಕ್ತ ಪ್ರಾತಿನಿಧ್ಯ ಹಾಗೂ ರಾಜಕೀಯ ಶಕ್ತಿ ಇಲ್ಲ. ಮೀಸಲಾತಿಯ ಕಾರಣಕ್ಕೆ ದಲಿತರು ಶಾಸಕರಾಗಿದ್ದಾರೆ’ ಎಂದರು.</p>.<p>ಮಾಜಿ ಸಚಿವ ಕೋಟೆ ಶಿವಣ್ಣ, ಮುಖಂಡರಾದ ವಿಜಯಕುಮಾರಿ ಅರಸ್, ವೆಂಕಟೇಶ ಗೌಡ, ಅಲ್ಪಾನ್ಸ್ ಕೆನಡಿ, ಬಿ. ಶಿವಣ್ಣ, ತೀ.ನಾ. ಶ್ರೀನಿವಾಸ, ನಟರಾಜ್ ಮಹರ್ಷಿ, ಪ್ರತಿಮಾ ಮುನಿರಾಜಪ್ಪ, ದೇವರಾಜ ಪಾಳೇಗಾರ, ತಾಯೂರು ಪ್ರಕಾಶ್, ಶ್ರೀಸಾಯಿ ಸತೀಶ್, ಸುರೇಂದ್ರ, ತಾಜ್ ಪಾಷಾ ಪಾಲ್ಗೊಂಡರು.</p>.<div><blockquote>ಎಸ್ಐಆರ್ ಎನ್ನುವ ಪ್ರಕ್ರಿಯೆ ಸಂವಿಧಾನ ವಿರೋಧಿ. ದೇಶದ ಯಾವ ಕಾನೂನಿನಲ್ಲೂ ಇದಕ್ಕೆ ಅವಕಾಶ ಇಲ್ಲ </blockquote><span class="attribution">ಶಿವಸುಂದರ್ ಹೋರಾಟಗಾರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>